Home / ಲೇಖನ / ವಿಜ್ಞಾನ / ಅಂತರೀಕ್ಷಲ್ಲೊಂದು ನಗರ

ಅಂತರೀಕ್ಷಲ್ಲೊಂದು ನಗರ

ನೆಲದಾಳದಲ್ಲಿ, ಸಾಗರದಾಳದಲ್ಲಿ ನಗರಗಳನ್ನು ನಿರ್ಮಿಸಿ ಯಾವ ಸಮೆಸ್ಯೆಗಳೂ ಇಲ್ಲದಂತೆ ಬದುಕುವ ವ್ಯವಸ್ಥೆಯನ್ನು ಅಮೇರಿಕ, ಜಪಾನಗಳಂತಹ ಮುಂದುವರೆದ ರಾಷ್ಟ್ರಗಳು ಮಾಡುತ್ತಲಿವೆ. ಜನಸಾಂದ್ರತೆ ಪರಿಸರ ನೈರ್ಮಲ್ಯತೆಗಳನ್ನು ಈ ಪ್ರದೇಶಗಳಲ್ಲಿ ಕಾಪಾಡಿ ಕೊಳ್ಳುಬಹುದೆಂಬ ಆಶಯ ಇವರದು. ಇದೀಗ ಅಂತರೀಕ್ಷದಲ್ಲಿ ನಿಸರ್ಗ ಸಹಜವಾದ ವಾತಾನುಕೂಲ ವ್ಯವಸ್ಥೆ ಹೊಂದಿ ನಗರಗಳನ್ನು ನಿರ್ಮಾಣಗೊಳಿಸಲಾಗುತ್ತಿದೆ. ಈ ನಗರದ ಸುತ್ತಲೂ ಗಾಜಿನಗೊಳವನ್ನು ಮಾಡಲಾಗಿದ್ದು ಸೂರ್ಯನ ಚಲನೆಯನ್ನು ಅನುಸರಿಸಿ ಬೆಳಕನ್ನು ಪ್ರತಿಫಲಿಸುವ ಕನ್ನಡಿಗಳು ಪ್ರಾಕೃತಿಕ ಬೆಳಕನ್ನು ಅವಶ್ಯಕತೆಗೆ ತಕ್ಕಂತೆ ಬಳಸಿಕೊಳ್ಳುತ್ತವೆ. ಎರಡು ಗಾಜಿನ ಪದರುಗಳಿಂದಾವೃತ್ತವಾದ ಈ ನಗರ ಸಂಕೀರ್ಣದಲ್ಲಿ ಹೊರಪದರವು ಪರಿಸರದ ಮಾಲಿನ್ಯ, ಶಬ್ಧ ಮಾಲಿನ್ಯವನ್ನು ತಡೆಯುತ್ತದೆ. ಒಳಪದರ ಗಾಜಿನ ಪದರವನ್ನು ಗಾಳಿ ಒಳಬರಲು ಅನುಕೂಲಕ್ಕೆ ತೆರೆಯುವ ಕಿಟಕಿಯಂತೆ ಬಳಸಬಹುದು. ಸೂರ್ಯನ ತಾಪ, ಗಾಳಿಯ ಚಲನೆಯನ್ನು ಈ ನಗರದಲ್ಲಿ ಕಾಯ್ದುಕೊಳುತ್ತದೆ. ಹೆಚ್ಚು ಬಿಸಿಗಾಳಿಯನ್ನು ನಗರದ ಮೇಲಿನ ಮುಚ್ಚಳದಿಂದ ಹೊರಹಾಕಲು ಸಾಧ್ಯವಿದೆ. ಚಳಿಗಾಲದಲ್ಲಿ ಗಾಳಿಯ ಉಷ್ಣತೆಯನ್ನು ಬಳಸಿ ನಗರವನ್ನು ಬೆಚ್ಚಗಿಡಬಹುದು.

ನೆಲಮಟ್ಟದಲ್ಲಿ ಸಾಂದ್ರವಾಗಿರುವ ಹೊರ ಪ್ರಪಂಚದೊಳಗೆ ಸೇರದಂತಿರಲು ಗಾಳಿಯನ್ನು ೧೭ ಮೀ ನೆಲಮಟ್ಟದ ಎತ್ತರದಿಂದ ಒಳಸೇರಿಕೊಳ್ಳುವ ವ್ಯವಸ್ಥೆ ಇದೆ. ಟೊಳ್ಳಾದ ಪೆಟ್ಟಿಗೆಯಾಕಾರದ ನೆಲವನ್ನು ಮಾಡಲಾಗಿದ್ದು ತೂಗು ಸೇತುವೆಯಂತೆ ನೆಲವನ್ನು ತೂಗುಹಾಕಲಾಗಿದೆ. ನಿರ್ದಿಷ್ಟವಾದ ಆಕಾರವನ್ನು ಹೊಂದಿರುವ ಈ ನಗರವಿನ್ಯಾಸ ಗಾಳಿಗೆ ತಡೆಯೊಡ್ಡದಂತೆ ರೂಪುಗೊಂಡಿದೆ. ವೇಗದ ಗಾಳಿಯನ್ನು ತಡೆದು ನೆಲದಲ್ಲಿ ಮಂದವಾಗಿ ಹರಡುವಂತಹ ವ್ಯವಸ್ಥೆಯನ್ನು ಮಾಡಲಾಗಿದೆ. ಕಟ್ಟಡದ ಹೊರಭಾಗದಲ್ಲಿನ ಉದ್ಯಾನದಲ್ಲಿ ಈಗಾಗಲೇ ಒಳ್ಳೆಯ ಸೂಕ್ತ ಸಸ್ಯ ಸಂಕುಲದ ಬೆಳವಣಿಗೆಯನ್ನು ಸಹ ಮಾಡಲಾಗುತ್ತದೆ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...