Home / ಲೇಖನ / ವಿಜ್ಞಾನ / ಅಂತರೀಕ್ಷಲ್ಲೊಂದು ನಗರ

ಅಂತರೀಕ್ಷಲ್ಲೊಂದು ನಗರ

ನೆಲದಾಳದಲ್ಲಿ, ಸಾಗರದಾಳದಲ್ಲಿ ನಗರಗಳನ್ನು ನಿರ್ಮಿಸಿ ಯಾವ ಸಮೆಸ್ಯೆಗಳೂ ಇಲ್ಲದಂತೆ ಬದುಕುವ ವ್ಯವಸ್ಥೆಯನ್ನು ಅಮೇರಿಕ, ಜಪಾನಗಳಂತಹ ಮುಂದುವರೆದ ರಾಷ್ಟ್ರಗಳು ಮಾಡುತ್ತಲಿವೆ. ಜನಸಾಂದ್ರತೆ ಪರಿಸರ ನೈರ್ಮಲ್ಯತೆಗಳನ್ನು ಈ ಪ್ರದೇಶಗಳಲ್ಲಿ ಕಾಪಾಡಿ ಕೊಳ್ಳುಬಹುದೆಂಬ ಆಶಯ ಇವರದು. ಇದೀಗ ಅಂತರೀಕ್ಷದಲ್ಲಿ ನಿಸರ್ಗ ಸಹಜವಾದ ವಾತಾನುಕೂಲ ವ್ಯವಸ್ಥೆ ಹೊಂದಿ ನಗರಗಳನ್ನು ನಿರ್ಮಾಣಗೊಳಿಸಲಾಗುತ್ತಿದೆ. ಈ ನಗರದ ಸುತ್ತಲೂ ಗಾಜಿನಗೊಳವನ್ನು ಮಾಡಲಾಗಿದ್ದು ಸೂರ್ಯನ ಚಲನೆಯನ್ನು ಅನುಸರಿಸಿ ಬೆಳಕನ್ನು ಪ್ರತಿಫಲಿಸುವ ಕನ್ನಡಿಗಳು ಪ್ರಾಕೃತಿಕ ಬೆಳಕನ್ನು ಅವಶ್ಯಕತೆಗೆ ತಕ್ಕಂತೆ ಬಳಸಿಕೊಳ್ಳುತ್ತವೆ. ಎರಡು ಗಾಜಿನ ಪದರುಗಳಿಂದಾವೃತ್ತವಾದ ಈ ನಗರ ಸಂಕೀರ್ಣದಲ್ಲಿ ಹೊರಪದರವು ಪರಿಸರದ ಮಾಲಿನ್ಯ, ಶಬ್ಧ ಮಾಲಿನ್ಯವನ್ನು ತಡೆಯುತ್ತದೆ. ಒಳಪದರ ಗಾಜಿನ ಪದರವನ್ನು ಗಾಳಿ ಒಳಬರಲು ಅನುಕೂಲಕ್ಕೆ ತೆರೆಯುವ ಕಿಟಕಿಯಂತೆ ಬಳಸಬಹುದು. ಸೂರ್ಯನ ತಾಪ, ಗಾಳಿಯ ಚಲನೆಯನ್ನು ಈ ನಗರದಲ್ಲಿ ಕಾಯ್ದುಕೊಳುತ್ತದೆ. ಹೆಚ್ಚು ಬಿಸಿಗಾಳಿಯನ್ನು ನಗರದ ಮೇಲಿನ ಮುಚ್ಚಳದಿಂದ ಹೊರಹಾಕಲು ಸಾಧ್ಯವಿದೆ. ಚಳಿಗಾಲದಲ್ಲಿ ಗಾಳಿಯ ಉಷ್ಣತೆಯನ್ನು ಬಳಸಿ ನಗರವನ್ನು ಬೆಚ್ಚಗಿಡಬಹುದು.

ನೆಲಮಟ್ಟದಲ್ಲಿ ಸಾಂದ್ರವಾಗಿರುವ ಹೊರ ಪ್ರಪಂಚದೊಳಗೆ ಸೇರದಂತಿರಲು ಗಾಳಿಯನ್ನು ೧೭ ಮೀ ನೆಲಮಟ್ಟದ ಎತ್ತರದಿಂದ ಒಳಸೇರಿಕೊಳ್ಳುವ ವ್ಯವಸ್ಥೆ ಇದೆ. ಟೊಳ್ಳಾದ ಪೆಟ್ಟಿಗೆಯಾಕಾರದ ನೆಲವನ್ನು ಮಾಡಲಾಗಿದ್ದು ತೂಗು ಸೇತುವೆಯಂತೆ ನೆಲವನ್ನು ತೂಗುಹಾಕಲಾಗಿದೆ. ನಿರ್ದಿಷ್ಟವಾದ ಆಕಾರವನ್ನು ಹೊಂದಿರುವ ಈ ನಗರವಿನ್ಯಾಸ ಗಾಳಿಗೆ ತಡೆಯೊಡ್ಡದಂತೆ ರೂಪುಗೊಂಡಿದೆ. ವೇಗದ ಗಾಳಿಯನ್ನು ತಡೆದು ನೆಲದಲ್ಲಿ ಮಂದವಾಗಿ ಹರಡುವಂತಹ ವ್ಯವಸ್ಥೆಯನ್ನು ಮಾಡಲಾಗಿದೆ. ಕಟ್ಟಡದ ಹೊರಭಾಗದಲ್ಲಿನ ಉದ್ಯಾನದಲ್ಲಿ ಈಗಾಗಲೇ ಒಳ್ಳೆಯ ಸೂಕ್ತ ಸಸ್ಯ ಸಂಕುಲದ ಬೆಳವಣಿಗೆಯನ್ನು ಸಹ ಮಾಡಲಾಗುತ್ತದೆ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್