Home / ಲೇಖನ / ವಿಜ್ಞಾನ / ಅಂತರೀಕ್ಷಲ್ಲೊಂದು ನಗರ

ಅಂತರೀಕ್ಷಲ್ಲೊಂದು ನಗರ

ನೆಲದಾಳದಲ್ಲಿ, ಸಾಗರದಾಳದಲ್ಲಿ ನಗರಗಳನ್ನು ನಿರ್ಮಿಸಿ ಯಾವ ಸಮೆಸ್ಯೆಗಳೂ ಇಲ್ಲದಂತೆ ಬದುಕುವ ವ್ಯವಸ್ಥೆಯನ್ನು ಅಮೇರಿಕ, ಜಪಾನಗಳಂತಹ ಮುಂದುವರೆದ ರಾಷ್ಟ್ರಗಳು ಮಾಡುತ್ತಲಿವೆ. ಜನಸಾಂದ್ರತೆ ಪರಿಸರ ನೈರ್ಮಲ್ಯತೆಗಳನ್ನು ಈ ಪ್ರದೇಶಗಳಲ್ಲಿ ಕಾಪಾಡಿ ಕೊಳ್ಳುಬಹುದೆಂಬ ಆಶಯ ಇವರದು. ಇದೀಗ ಅಂತರೀಕ್ಷದಲ್ಲಿ ನಿಸರ್ಗ ಸಹಜವಾದ ವಾತಾನುಕೂಲ ವ್ಯವಸ್ಥೆ ಹೊಂದಿ ನಗರಗಳನ್ನು ನಿರ್ಮಾಣಗೊಳಿಸಲಾಗುತ್ತಿದೆ. ಈ ನಗರದ ಸುತ್ತಲೂ ಗಾಜಿನಗೊಳವನ್ನು ಮಾಡಲಾಗಿದ್ದು ಸೂರ್ಯನ ಚಲನೆಯನ್ನು ಅನುಸರಿಸಿ ಬೆಳಕನ್ನು ಪ್ರತಿಫಲಿಸುವ ಕನ್ನಡಿಗಳು ಪ್ರಾಕೃತಿಕ ಬೆಳಕನ್ನು ಅವಶ್ಯಕತೆಗೆ ತಕ್ಕಂತೆ ಬಳಸಿಕೊಳ್ಳುತ್ತವೆ. ಎರಡು ಗಾಜಿನ ಪದರುಗಳಿಂದಾವೃತ್ತವಾದ ಈ ನಗರ ಸಂಕೀರ್ಣದಲ್ಲಿ ಹೊರಪದರವು ಪರಿಸರದ ಮಾಲಿನ್ಯ, ಶಬ್ಧ ಮಾಲಿನ್ಯವನ್ನು ತಡೆಯುತ್ತದೆ. ಒಳಪದರ ಗಾಜಿನ ಪದರವನ್ನು ಗಾಳಿ ಒಳಬರಲು ಅನುಕೂಲಕ್ಕೆ ತೆರೆಯುವ ಕಿಟಕಿಯಂತೆ ಬಳಸಬಹುದು. ಸೂರ್ಯನ ತಾಪ, ಗಾಳಿಯ ಚಲನೆಯನ್ನು ಈ ನಗರದಲ್ಲಿ ಕಾಯ್ದುಕೊಳುತ್ತದೆ. ಹೆಚ್ಚು ಬಿಸಿಗಾಳಿಯನ್ನು ನಗರದ ಮೇಲಿನ ಮುಚ್ಚಳದಿಂದ ಹೊರಹಾಕಲು ಸಾಧ್ಯವಿದೆ. ಚಳಿಗಾಲದಲ್ಲಿ ಗಾಳಿಯ ಉಷ್ಣತೆಯನ್ನು ಬಳಸಿ ನಗರವನ್ನು ಬೆಚ್ಚಗಿಡಬಹುದು.

ನೆಲಮಟ್ಟದಲ್ಲಿ ಸಾಂದ್ರವಾಗಿರುವ ಹೊರ ಪ್ರಪಂಚದೊಳಗೆ ಸೇರದಂತಿರಲು ಗಾಳಿಯನ್ನು ೧೭ ಮೀ ನೆಲಮಟ್ಟದ ಎತ್ತರದಿಂದ ಒಳಸೇರಿಕೊಳ್ಳುವ ವ್ಯವಸ್ಥೆ ಇದೆ. ಟೊಳ್ಳಾದ ಪೆಟ್ಟಿಗೆಯಾಕಾರದ ನೆಲವನ್ನು ಮಾಡಲಾಗಿದ್ದು ತೂಗು ಸೇತುವೆಯಂತೆ ನೆಲವನ್ನು ತೂಗುಹಾಕಲಾಗಿದೆ. ನಿರ್ದಿಷ್ಟವಾದ ಆಕಾರವನ್ನು ಹೊಂದಿರುವ ಈ ನಗರವಿನ್ಯಾಸ ಗಾಳಿಗೆ ತಡೆಯೊಡ್ಡದಂತೆ ರೂಪುಗೊಂಡಿದೆ. ವೇಗದ ಗಾಳಿಯನ್ನು ತಡೆದು ನೆಲದಲ್ಲಿ ಮಂದವಾಗಿ ಹರಡುವಂತಹ ವ್ಯವಸ್ಥೆಯನ್ನು ಮಾಡಲಾಗಿದೆ. ಕಟ್ಟಡದ ಹೊರಭಾಗದಲ್ಲಿನ ಉದ್ಯಾನದಲ್ಲಿ ಈಗಾಗಲೇ ಒಳ್ಳೆಯ ಸೂಕ್ತ ಸಸ್ಯ ಸಂಕುಲದ ಬೆಳವಣಿಗೆಯನ್ನು ಸಹ ಮಾಡಲಾಗುತ್ತದೆ.
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...