ಎದ್ದು ಬನ್ನಿರೇ ದೇವೀರಮ್ಮಂದಿರೇ…

ಅಲ್ಲಿ.. ಇಲ್ಲಿ.. ಎಲ್ಲೆಂದರಲ್ಲಿ
ಗುಡಿ, ಗುಂಡಾರ ಕಟ್ಟಿಸಿಕೊಂಡು
ಕಲ್ಲೋ.. ಮರವೋ… ಲೋಹದಲ್ಲೋ.. ಇನ್ನೊಂದರಲ್ಲೋ
ಕುಂತೋ… ನಿಂತೋ… ನಿದ್ದೆ ಮಾಡೋ ಭಂಗಿಯಲ್ಲೋ
ಉಗ್ರ, ಶಾಂತ, ಎಂತದೋ ಒಂದು ಭಾವದ
ರೂಪವನ್ನು ಪಡಕೊಂಡು
ಬಂಧಿಯಾಗಿ ಬಿದ್ದಿರೋ
ದೇವೀರಮ್ಮಂದಿರೇ ಕೇಳಿ.

ಊರು, ನಾಡು ತುಂಬಿವೆ
ನಿಮ್ಮಂತಹ ತಾಯಿಗಳೆ
ಹೆತ್ತು ಹೊತ್ತು ಬೆಳೆಸಿರೋ
ಸೀಳು ನಾಯಿ ಬುದ್ಧಿಯ ಗಂಡು ಮಕ್ಕಳು.

ಕಿವಿ ನಿಗಿರಿಸಿ
ಕಟವಾಯಿ ಬಿಚ್ಚಿ
ನಾಲಿಗೆ ಪೂರ ಹೊರ ಚಾಚಿ
ವಿಕಾರವಾಗಿ ಜೊಲ್ಲು ಸುರಿಸುತ್ತ
ಗಸ! ಗಸ! ಶಬ್ದ ಮಾಡುತ್ತ
ಕೆಂಡಗಣ್ಣ ರೆಪ್ಪೆ ಬಡಿಯದೆ
ಎಲ್ಲದಕ್ಕೂ ಸಿದ್ಧರಾಗಿ ಕುಂತ
ಗಂಡು ನಾಯಿಯಂತ
ರಕ್ಕಸ ಮನದ ಮೃತ್ಯುರೂಪರು;
ಹಗಲು, ರಾತ್ರಿ, ಹಿಂಡು, ಹಿಂಡಾಗಿ
ಹಾದಿ ಬೀದಿಲಿ ಠಳಾಯಿಸ್ತಿರ್‍ತಾರೆ.

ಅಬ್ಬೆಪಾರಿ ಹೆಣ್ಣು ಮಕ್ಕಳ
ಘಮಲು ಬಡಿದ್ರೆ ಸಾಕು ಮುಗಿಬಿದ್ದು
ಹೊತ್ತುಕೊಂಡು ಹೋಗಿ, ಹರಿದು ಮುಕ್ಕಿ
ವಿಕೃತ ತೃಪ್ತಿಯ ನರ್ತನ ಮಾಡುತ್ತಾರೆ

ಎದ್ದು ಬನ್ನಿರೇ ದೇವೀರಮ್ಮಂದಿರೇ…
ಗಂಡು, ಹೆಣ್ಣು ಬೇರೆಯಲ್ಲ
ಮೇಲು, ಕೀಳು ಇಲ್ಲವೇ ಇಲ್ಲ!
ಒಂದೇ ಬುಡದ ಕೊಂಬೆ, ರೆಂಬೆ
ಒಂದು ಬಿಟ್ಟು ಇನ್ನೊಂದಿಲ್ಲ
ಅರಿತು ನಡೆಯದಿದ್ದರೆ ಯಾರೂ ಉಳಿಯೋದಿಲ್ಲ
ಶೋಷಣೆಗೆಂದೆಂದೂ ಬದುಕು, ಭವಿಷ್ಯವಿಲ್ಲ
ನಿಮ್ಮ ದೇಹ, ಬುದ್ಧಿ, ಕೈದುಗಳ ಬಳಸಿ
ಬಿಡದೆ ಬುದ್ಧಿ ಕಲಿಸಿ
ಪುರುಷವಾದಿ ಬಣಕೆ.

ಹಾಗೇ.. ನಾರಿ ಕುಲಕೆ ತಲೆ ತಿಕ್ಕಿ ಹೇಳಿ
ಒಪ್ಪಿಕೊಂಡು
ತೊತ್ತುಗಳಾಗಿ ಸತ್ತಿದ್ದು ಸಾಕು
ಎದ್ದು ಗುಟುರು ಹಾಕಿ
ಸೆಣೆಸಿ ಬಾಳು ಪಡೆಯಿರಿ
ಮೈದುಂಬಿಕೊಳ್ಳಲಿ ನಾಗರೀಕ ಬದುಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಮಾಧಿ ಯೋಗ
Next post ತುತ್ತು ಮತ್ತು ತುತ್ತೂರಿ

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

cheap jordans|wholesale air max|wholesale jordans|wholesale jewelry|wholesale jerseys