Home / ಕವನ / ಕವಿತೆ / ಎದ್ದು ಬನ್ನಿರೇ ದೇವೀರಮ್ಮಂದಿರೇ…

ಎದ್ದು ಬನ್ನಿರೇ ದೇವೀರಮ್ಮಂದಿರೇ…

ಅಲ್ಲಿ.. ಇಲ್ಲಿ.. ಎಲ್ಲೆಂದರಲ್ಲಿ
ಗುಡಿ, ಗುಂಡಾರ ಕಟ್ಟಿಸಿಕೊಂಡು
ಕಲ್ಲೋ.. ಮರವೋ… ಲೋಹದಲ್ಲೋ.. ಇನ್ನೊಂದರಲ್ಲೋ
ಕುಂತೋ… ನಿಂತೋ… ನಿದ್ದೆ ಮಾಡೋ ಭಂಗಿಯಲ್ಲೋ
ಉಗ್ರ, ಶಾಂತ, ಎಂತದೋ ಒಂದು ಭಾವದ
ರೂಪವನ್ನು ಪಡಕೊಂಡು
ಬಂಧಿಯಾಗಿ ಬಿದ್ದಿರೋ
ದೇವೀರಮ್ಮಂದಿರೇ ಕೇಳಿ.

ಊರು, ನಾಡು ತುಂಬಿವೆ
ನಿಮ್ಮಂತಹ ತಾಯಿಗಳೆ
ಹೆತ್ತು ಹೊತ್ತು ಬೆಳೆಸಿರೋ
ಸೀಳು ನಾಯಿ ಬುದ್ಧಿಯ ಗಂಡು ಮಕ್ಕಳು.

ಕಿವಿ ನಿಗಿರಿಸಿ
ಕಟವಾಯಿ ಬಿಚ್ಚಿ
ನಾಲಿಗೆ ಪೂರ ಹೊರ ಚಾಚಿ
ವಿಕಾರವಾಗಿ ಜೊಲ್ಲು ಸುರಿಸುತ್ತ
ಗಸ! ಗಸ! ಶಬ್ದ ಮಾಡುತ್ತ
ಕೆಂಡಗಣ್ಣ ರೆಪ್ಪೆ ಬಡಿಯದೆ
ಎಲ್ಲದಕ್ಕೂ ಸಿದ್ಧರಾಗಿ ಕುಂತ
ಗಂಡು ನಾಯಿಯಂತ
ರಕ್ಕಸ ಮನದ ಮೃತ್ಯುರೂಪರು;
ಹಗಲು, ರಾತ್ರಿ, ಹಿಂಡು, ಹಿಂಡಾಗಿ
ಹಾದಿ ಬೀದಿಲಿ ಠಳಾಯಿಸ್ತಿರ್‍ತಾರೆ.

ಅಬ್ಬೆಪಾರಿ ಹೆಣ್ಣು ಮಕ್ಕಳ
ಘಮಲು ಬಡಿದ್ರೆ ಸಾಕು ಮುಗಿಬಿದ್ದು
ಹೊತ್ತುಕೊಂಡು ಹೋಗಿ, ಹರಿದು ಮುಕ್ಕಿ
ವಿಕೃತ ತೃಪ್ತಿಯ ನರ್ತನ ಮಾಡುತ್ತಾರೆ

ಎದ್ದು ಬನ್ನಿರೇ ದೇವೀರಮ್ಮಂದಿರೇ…
ಗಂಡು, ಹೆಣ್ಣು ಬೇರೆಯಲ್ಲ
ಮೇಲು, ಕೀಳು ಇಲ್ಲವೇ ಇಲ್ಲ!
ಒಂದೇ ಬುಡದ ಕೊಂಬೆ, ರೆಂಬೆ
ಒಂದು ಬಿಟ್ಟು ಇನ್ನೊಂದಿಲ್ಲ
ಅರಿತು ನಡೆಯದಿದ್ದರೆ ಯಾರೂ ಉಳಿಯೋದಿಲ್ಲ
ಶೋಷಣೆಗೆಂದೆಂದೂ ಬದುಕು, ಭವಿಷ್ಯವಿಲ್ಲ
ನಿಮ್ಮ ದೇಹ, ಬುದ್ಧಿ, ಕೈದುಗಳ ಬಳಸಿ
ಬಿಡದೆ ಬುದ್ಧಿ ಕಲಿಸಿ
ಪುರುಷವಾದಿ ಬಣಕೆ.

ಹಾಗೇ.. ನಾರಿ ಕುಲಕೆ ತಲೆ ತಿಕ್ಕಿ ಹೇಳಿ
ಒಪ್ಪಿಕೊಂಡು
ತೊತ್ತುಗಳಾಗಿ ಸತ್ತಿದ್ದು ಸಾಕು
ಎದ್ದು ಗುಟುರು ಹಾಕಿ
ಸೆಣೆಸಿ ಬಾಳು ಪಡೆಯಿರಿ
ಮೈದುಂಬಿಕೊಳ್ಳಲಿ ನಾಗರೀಕ ಬದುಕು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...