Home / ಕವನ / ಕವಿತೆ / ಎದ್ದು ಬನ್ನಿರೇ ದೇವೀರಮ್ಮಂದಿರೇ…

ಎದ್ದು ಬನ್ನಿರೇ ದೇವೀರಮ್ಮಂದಿರೇ…

ಅಲ್ಲಿ.. ಇಲ್ಲಿ.. ಎಲ್ಲೆಂದರಲ್ಲಿ
ಗುಡಿ, ಗುಂಡಾರ ಕಟ್ಟಿಸಿಕೊಂಡು
ಕಲ್ಲೋ.. ಮರವೋ… ಲೋಹದಲ್ಲೋ.. ಇನ್ನೊಂದರಲ್ಲೋ
ಕುಂತೋ… ನಿಂತೋ… ನಿದ್ದೆ ಮಾಡೋ ಭಂಗಿಯಲ್ಲೋ
ಉಗ್ರ, ಶಾಂತ, ಎಂತದೋ ಒಂದು ಭಾವದ
ರೂಪವನ್ನು ಪಡಕೊಂಡು
ಬಂಧಿಯಾಗಿ ಬಿದ್ದಿರೋ
ದೇವೀರಮ್ಮಂದಿರೇ ಕೇಳಿ.

ಊರು, ನಾಡು ತುಂಬಿವೆ
ನಿಮ್ಮಂತಹ ತಾಯಿಗಳೆ
ಹೆತ್ತು ಹೊತ್ತು ಬೆಳೆಸಿರೋ
ಸೀಳು ನಾಯಿ ಬುದ್ಧಿಯ ಗಂಡು ಮಕ್ಕಳು.

ಕಿವಿ ನಿಗಿರಿಸಿ
ಕಟವಾಯಿ ಬಿಚ್ಚಿ
ನಾಲಿಗೆ ಪೂರ ಹೊರ ಚಾಚಿ
ವಿಕಾರವಾಗಿ ಜೊಲ್ಲು ಸುರಿಸುತ್ತ
ಗಸ! ಗಸ! ಶಬ್ದ ಮಾಡುತ್ತ
ಕೆಂಡಗಣ್ಣ ರೆಪ್ಪೆ ಬಡಿಯದೆ
ಎಲ್ಲದಕ್ಕೂ ಸಿದ್ಧರಾಗಿ ಕುಂತ
ಗಂಡು ನಾಯಿಯಂತ
ರಕ್ಕಸ ಮನದ ಮೃತ್ಯುರೂಪರು;
ಹಗಲು, ರಾತ್ರಿ, ಹಿಂಡು, ಹಿಂಡಾಗಿ
ಹಾದಿ ಬೀದಿಲಿ ಠಳಾಯಿಸ್ತಿರ್‍ತಾರೆ.

ಅಬ್ಬೆಪಾರಿ ಹೆಣ್ಣು ಮಕ್ಕಳ
ಘಮಲು ಬಡಿದ್ರೆ ಸಾಕು ಮುಗಿಬಿದ್ದು
ಹೊತ್ತುಕೊಂಡು ಹೋಗಿ, ಹರಿದು ಮುಕ್ಕಿ
ವಿಕೃತ ತೃಪ್ತಿಯ ನರ್ತನ ಮಾಡುತ್ತಾರೆ

ಎದ್ದು ಬನ್ನಿರೇ ದೇವೀರಮ್ಮಂದಿರೇ…
ಗಂಡು, ಹೆಣ್ಣು ಬೇರೆಯಲ್ಲ
ಮೇಲು, ಕೀಳು ಇಲ್ಲವೇ ಇಲ್ಲ!
ಒಂದೇ ಬುಡದ ಕೊಂಬೆ, ರೆಂಬೆ
ಒಂದು ಬಿಟ್ಟು ಇನ್ನೊಂದಿಲ್ಲ
ಅರಿತು ನಡೆಯದಿದ್ದರೆ ಯಾರೂ ಉಳಿಯೋದಿಲ್ಲ
ಶೋಷಣೆಗೆಂದೆಂದೂ ಬದುಕು, ಭವಿಷ್ಯವಿಲ್ಲ
ನಿಮ್ಮ ದೇಹ, ಬುದ್ಧಿ, ಕೈದುಗಳ ಬಳಸಿ
ಬಿಡದೆ ಬುದ್ಧಿ ಕಲಿಸಿ
ಪುರುಷವಾದಿ ಬಣಕೆ.

ಹಾಗೇ.. ನಾರಿ ಕುಲಕೆ ತಲೆ ತಿಕ್ಕಿ ಹೇಳಿ
ಒಪ್ಪಿಕೊಂಡು
ತೊತ್ತುಗಳಾಗಿ ಸತ್ತಿದ್ದು ಸಾಕು
ಎದ್ದು ಗುಟುರು ಹಾಕಿ
ಸೆಣೆಸಿ ಬಾಳು ಪಡೆಯಿರಿ
ಮೈದುಂಬಿಕೊಳ್ಳಲಿ ನಾಗರೀಕ ಬದುಕು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...