Home / ಕವನ / ಕವಿತೆ / ಎದ್ದು ಬನ್ನಿರೇ ದೇವೀರಮ್ಮಂದಿರೇ…

ಎದ್ದು ಬನ್ನಿರೇ ದೇವೀರಮ್ಮಂದಿರೇ…

ಅಲ್ಲಿ.. ಇಲ್ಲಿ.. ಎಲ್ಲೆಂದರಲ್ಲಿ
ಗುಡಿ, ಗುಂಡಾರ ಕಟ್ಟಿಸಿಕೊಂಡು
ಕಲ್ಲೋ.. ಮರವೋ… ಲೋಹದಲ್ಲೋ.. ಇನ್ನೊಂದರಲ್ಲೋ
ಕುಂತೋ… ನಿಂತೋ… ನಿದ್ದೆ ಮಾಡೋ ಭಂಗಿಯಲ್ಲೋ
ಉಗ್ರ, ಶಾಂತ, ಎಂತದೋ ಒಂದು ಭಾವದ
ರೂಪವನ್ನು ಪಡಕೊಂಡು
ಬಂಧಿಯಾಗಿ ಬಿದ್ದಿರೋ
ದೇವೀರಮ್ಮಂದಿರೇ ಕೇಳಿ.

ಊರು, ನಾಡು ತುಂಬಿವೆ
ನಿಮ್ಮಂತಹ ತಾಯಿಗಳೆ
ಹೆತ್ತು ಹೊತ್ತು ಬೆಳೆಸಿರೋ
ಸೀಳು ನಾಯಿ ಬುದ್ಧಿಯ ಗಂಡು ಮಕ್ಕಳು.

ಕಿವಿ ನಿಗಿರಿಸಿ
ಕಟವಾಯಿ ಬಿಚ್ಚಿ
ನಾಲಿಗೆ ಪೂರ ಹೊರ ಚಾಚಿ
ವಿಕಾರವಾಗಿ ಜೊಲ್ಲು ಸುರಿಸುತ್ತ
ಗಸ! ಗಸ! ಶಬ್ದ ಮಾಡುತ್ತ
ಕೆಂಡಗಣ್ಣ ರೆಪ್ಪೆ ಬಡಿಯದೆ
ಎಲ್ಲದಕ್ಕೂ ಸಿದ್ಧರಾಗಿ ಕುಂತ
ಗಂಡು ನಾಯಿಯಂತ
ರಕ್ಕಸ ಮನದ ಮೃತ್ಯುರೂಪರು;
ಹಗಲು, ರಾತ್ರಿ, ಹಿಂಡು, ಹಿಂಡಾಗಿ
ಹಾದಿ ಬೀದಿಲಿ ಠಳಾಯಿಸ್ತಿರ್‍ತಾರೆ.

ಅಬ್ಬೆಪಾರಿ ಹೆಣ್ಣು ಮಕ್ಕಳ
ಘಮಲು ಬಡಿದ್ರೆ ಸಾಕು ಮುಗಿಬಿದ್ದು
ಹೊತ್ತುಕೊಂಡು ಹೋಗಿ, ಹರಿದು ಮುಕ್ಕಿ
ವಿಕೃತ ತೃಪ್ತಿಯ ನರ್ತನ ಮಾಡುತ್ತಾರೆ

ಎದ್ದು ಬನ್ನಿರೇ ದೇವೀರಮ್ಮಂದಿರೇ…
ಗಂಡು, ಹೆಣ್ಣು ಬೇರೆಯಲ್ಲ
ಮೇಲು, ಕೀಳು ಇಲ್ಲವೇ ಇಲ್ಲ!
ಒಂದೇ ಬುಡದ ಕೊಂಬೆ, ರೆಂಬೆ
ಒಂದು ಬಿಟ್ಟು ಇನ್ನೊಂದಿಲ್ಲ
ಅರಿತು ನಡೆಯದಿದ್ದರೆ ಯಾರೂ ಉಳಿಯೋದಿಲ್ಲ
ಶೋಷಣೆಗೆಂದೆಂದೂ ಬದುಕು, ಭವಿಷ್ಯವಿಲ್ಲ
ನಿಮ್ಮ ದೇಹ, ಬುದ್ಧಿ, ಕೈದುಗಳ ಬಳಸಿ
ಬಿಡದೆ ಬುದ್ಧಿ ಕಲಿಸಿ
ಪುರುಷವಾದಿ ಬಣಕೆ.

ಹಾಗೇ.. ನಾರಿ ಕುಲಕೆ ತಲೆ ತಿಕ್ಕಿ ಹೇಳಿ
ಒಪ್ಪಿಕೊಂಡು
ತೊತ್ತುಗಳಾಗಿ ಸತ್ತಿದ್ದು ಸಾಕು
ಎದ್ದು ಗುಟುರು ಹಾಕಿ
ಸೆಣೆಸಿ ಬಾಳು ಪಡೆಯಿರಿ
ಮೈದುಂಬಿಕೊಳ್ಳಲಿ ನಾಗರೀಕ ಬದುಕು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...