ಸಮಾಧಿ ಯೋಗ

ಎಲರು ತೀಡಿದಷ್ಟು
ಕುಣಿವ ಎಲೆಗಳ ಭಂಗಿ
ಪಟಪಟನೇ ಆಡುವ ಮಾತು
ಗಾಳಿಹಾದಿಯ ತುಂಬೆಲ್ಲಾ ಸಿಗುವ ಹೂಗಳು
ಬದುಕೆಂಬ ಚೈತ್ರಕ್ಕೆ ಎಂತಹ ಸೊಗಸು.

ಅವನ ಕಣ್ಣುಗಳು ಸಿಡಿಯುವಾಗ
ಹನಿಗೂಡಿದ ನದಿ ಶಾಂತವಾಗುತ್ತದೆ.
ಆ ಗುಡ್ಡದಾಚೆಗಿನ ಸರಹದ್ದು
ದಾಟಿ ಬಂದು ಎಷ್ಟೋ ದಿನಗಳಾಗಿವೆ.
ಸದ್ದು ಮಾಡುವ ತಮಟೆ ಮಹಾಮೌನಿ.

ನೋವು ಬದಲಿಸುತ್ತದೆ.
ಬದಲಾಗುವುದು ಕೆಂಡದ ಬಣ್ಣವೂ
ಆಗಾಗ ಎಲರ ಸುಳಿಗೆ ಅಂತರ್‍ಲಾಗ ಹಾಕುವ
ಧೌತ ವಸನಗಳು ತಿಪ್ಪೆ ಮೇಲೆ ಬೀಳದಂತೆ
ಗಟ್ಟಿಯಾಗಿ ಕಟ್ಟಬೇಕು ಸರಿಗೆತಂತಿಗೆ

ಸಾಗರನ ದಡದಲ್ಲಿ ಮುತ್ತುವ
ಎಲರ ಮುತ್ತಿನ ಕಚಗುಳಿ
ಗಾಳಿನೀರಿನ ಆಳ ಅಗಲಕ್ಕೆ
ಪ್ರಚಂಡ ಪ್ರತಾಪಕ್ಕೆ ಮರುಕ್ಷಣದ
ಕಿನ್ನತೆ-ನಾನೆಂಬ ಶೂನ್ಯತೆ

ಸಡಗರದ ಎಳೆತ ಸೆಳೆತಗಳ ಕೂಡು ಕೂಟ
ಕ್ಷಣದ ಆಟ ನೋಟ
ನೆನಪ ಹಾಳೆಗಳು ತೆರೆದುಕೊಳ್ಳುವವು
ಗೋಡೆಯ ತುಂಬೆಲ್ಲಾ ಚಿತ್ರಗಳು ರೀಲಿನಂತೆ
ಚಲಿಸಿ ಹೋಗುವವು.
ಮಗುಚಿ ಬೀಳುವುದು ದಪ್ಪಂಚಿನ ಮೇಲ್ಪುಟ
ಮತ್ತೇ ಅದೇ ಸಬ್ಬಕ್ಕಿ ಗಂಜಿ
ಬಿಸಿ ಮಜ್ಜನ ಚಿಕಿತ್ಸೆ ಸಮಾಧಿಯೋಗಕ್ಕೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕವಿಯ ಅವಸ್ಥಾಭೇದಗಳು
Next post ಎದ್ದು ಬನ್ನಿರೇ ದೇವೀರಮ್ಮಂದಿರೇ…

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

cheap jordans|wholesale air max|wholesale jordans|wholesale jewelry|wholesale jerseys