Home / ಕವನ / ಕವಿತೆ / ತುತ್ತು ಮತ್ತು ತುತ್ತೂರಿ

ತುತ್ತು ಮತ್ತು ತುತ್ತೂರಿ

ತುತ್ತು ಉಣ್ಣುವ ಬಾಯೆ
ತುತ್ತು ಉಣಿಸುವ ತಾಯೆ
ಏನೀ ಜಗದ ಮಾಯೆ?

ಒಲೆಯ ಉರಿಸುವ ತಾಯೆ
ಎಲ್ಲವ್ವ ಹಾಲಕ್ಕಿ ಬೇಯಿಸಿದ ಮಡಕೆ?
ಯಾಕವ್ವ ಇಷ್ಟೊಂದು ಹಸಿವು ಬಾಯಾರಿಕೆ?
ಯಾಕವ್ವ ಬೆಂದ ಕಾಳಿಗೂ ಮೊಳಕೆ?

ತುತ್ತೂರಿ ಊದುವ ಬಾಯೆ
ತುತ್ತೂರಿ ಕೈಗಿತ್ತ ತಾಯೆ
ಏನೀ ಜಗದ ಮಾಯೆ?

ಒಲವ ಹರಿಸುವ ತಾಯೆ
ಯಾಕವ್ವಾ ಅಂಕೆಯನೂ ಮೀರಿ
ಬಿರಿಯುವದು ಮಲ್ಲಿಗೆ?
ಯಾಕವ್ವ ಕನಲುವುದು ಕತ್ತರಿಸಿದರೆ ರೆಕ್ಕೆ?
ಯಾಕವ್ವ ಅಂಜುವುದು ಮೂಜಗವು ಅಂಕುಶಕೆ?

ತುತ್ತೆನ್ನ ತೊತ್ತಾಗಿಸುವ ಮುನ್ನ
ತುತ್ತಿಗೆ ತುತ್ತಾಗುವ ಮುನ್ನ
ನೆತ್ತಿಯನು ಹೊತ್ತಿಸಿ
ಬತ್ತಿಯಾಗಿಸು ತಾಯೆ

ತುತ್ತೂರಿ ಕೈಗಿತ್ತು ಮೈಮರೆಸದಿರು ನನ್ನ
ಮದ್ದಲೆಯ ಕೈಗಿತ್ತು ಮದ್ದಾನೆಯಾಗಿಸದಿರು ನನ್ನ
ತುತ್ತಿನ ಮುಂದೆ ತಲೆಬಾಗಲು ಕಲಿಸು
ತಂಬೂರಿಯ ಕೈಗಿತ್ತು ತಲ್ಲಣವ ನಿಲಿಸು
ತುತ್ತು-ತುತ್ತೂರಿಯ ನಡುವೆ
ಸೇತುವೆಯಂತೆ ನಿಲಿಸು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...