ತುತ್ತು ಮತ್ತು ತುತ್ತೂರಿ

ತುತ್ತು ಉಣ್ಣುವ ಬಾಯೆ
ತುತ್ತು ಉಣಿಸುವ ತಾಯೆ
ಏನೀ ಜಗದ ಮಾಯೆ?

ಒಲೆಯ ಉರಿಸುವ ತಾಯೆ
ಎಲ್ಲವ್ವ ಹಾಲಕ್ಕಿ ಬೇಯಿಸಿದ ಮಡಕೆ?
ಯಾಕವ್ವ ಇಷ್ಟೊಂದು ಹಸಿವು ಬಾಯಾರಿಕೆ?
ಯಾಕವ್ವ ಬೆಂದ ಕಾಳಿಗೂ ಮೊಳಕೆ?

ತುತ್ತೂರಿ ಊದುವ ಬಾಯೆ
ತುತ್ತೂರಿ ಕೈಗಿತ್ತ ತಾಯೆ
ಏನೀ ಜಗದ ಮಾಯೆ?

ಒಲವ ಹರಿಸುವ ತಾಯೆ
ಯಾಕವ್ವಾ ಅಂಕೆಯನೂ ಮೀರಿ
ಬಿರಿಯುವದು ಮಲ್ಲಿಗೆ?
ಯಾಕವ್ವ ಕನಲುವುದು ಕತ್ತರಿಸಿದರೆ ರೆಕ್ಕೆ?
ಯಾಕವ್ವ ಅಂಜುವುದು ಮೂಜಗವು ಅಂಕುಶಕೆ?

ತುತ್ತೆನ್ನ ತೊತ್ತಾಗಿಸುವ ಮುನ್ನ
ತುತ್ತಿಗೆ ತುತ್ತಾಗುವ ಮುನ್ನ
ನೆತ್ತಿಯನು ಹೊತ್ತಿಸಿ
ಬತ್ತಿಯಾಗಿಸು ತಾಯೆ

ತುತ್ತೂರಿ ಕೈಗಿತ್ತು ಮೈಮರೆಸದಿರು ನನ್ನ
ಮದ್ದಲೆಯ ಕೈಗಿತ್ತು ಮದ್ದಾನೆಯಾಗಿಸದಿರು ನನ್ನ
ತುತ್ತಿನ ಮುಂದೆ ತಲೆಬಾಗಲು ಕಲಿಸು
ತಂಬೂರಿಯ ಕೈಗಿತ್ತು ತಲ್ಲಣವ ನಿಲಿಸು
ತುತ್ತು-ತುತ್ತೂರಿಯ ನಡುವೆ
ಸೇತುವೆಯಂತೆ ನಿಲಿಸು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎದ್ದು ಬನ್ನಿರೇ ದೇವೀರಮ್ಮಂದಿರೇ…
Next post ಗುಮಾನಿ

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

cheap jordans|wholesale air max|wholesale jordans|wholesale jewelry|wholesale jerseys