ದುರ್‍ವಿನೀತ

ಸಿಗದ ಅನಂತ ಆಕಾಶದೆದುರು
ಸಿಕ್ಕದ್ದು ಒಂದು ಹಿಡಿ ಹೊಟ್ಟು,
ಅದನ್ನೇ ತೊಟ್ಟು
ಕೈಗೆ ಬಳೆಯಾಗಿ ಮುಡಿಗೆ ಹೂವಾಗಿ
ಮರೆದಿದ್ದೇನೆ ನಾಚಿಕೆ ಬಿಟ್ಟು

ನಾಚಿಕೆಯಿಲ್ಲ ನನಗೆ ನಾಚಿಕೆಯಿಲ್ಲ
ಯಾಕೆ, ಇಲ್ಲಿ ಬೇರು ಬಿಟ್ಟು ಬೇರೆಲ್ಲೋ ಹೂ ಚೆಲ್ಲಿದೆನ?
ಸಿಂಹದಂತೆ ಬಂದು ಪೆಟ್ಟು ತಿಂದು ಕತ್ತೆ ಕೂಗಿದೆನ?
ಎರಡವ್ನ ಎಂಟಕ್ಕೆ ಎತ್ತಿ ಏಳರ ತಲೆ ತೆಗೆದೆನ?
ಕೂಗಿನಲ್ಲಿ ವಜಾಹೋಗಿ ಕೆಲಸದಲ್ಲಿ ಜಮಾ ಅಗಿ
ನಾಚಿಕೆ ಯಾಕೆ ನನಗೆ ನಾಚಿಕೆ ಯಾಕೆ?

ಕಲ್ಲುನೆಲ ಸಿಕ್ಕರೇನು ಅದರಲ್ಲಿ
ನಿನ್ನಂಥ ಗುಲಾಬಿ ಬೆಳೆದಿಲ್ಲವ?
ರೂಪ ಧೂಪ ಹರಸಿ ಮೈಗೆ
ಹಸಿರು ಹಾಸಿಗೆ ಇತ್ತಿಲ್ಲವ?
ಗರ್ಭಗುಡಿ ತನಕ ಹೊತ್ತು ನಿನ್ನ
ದೇವರ ತಲೆಗೆ ಏರಿಸಿಲ್ಲವ?

ವ್ಯಾಕರಣದ ಗಡೀಪಾರುಗಳನ್ನ
ವಿಚಿತ್ರ ಲಯಕ್ಕೆ ಹಿಡಿಯುತ್ತ
ಮಾತಿನ ಮಣ್ಣಗೊಂಬೆಗಳನ್ನ
ಅರ್ಥದ ಹೊಳೆಯಲ್ಲಿ ಕರಗಿಸುತ್ತ
ಅನುಭವದ ಸೀರೆ ಕುಪ್ಟಸವನ್ನ
ಧ್ವನಿಮಂಚದಲ್ಲಿ ಸುಲಿಯುತ್ತ
ಪಟ್ಟ ಆನಂದಕ್ಕೇನು ಬೆಲೆಯೇ ಇಲ್ಲವ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆಣ್ಣು
Next post ಪಾಣಿಪತ

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…