ದುರ್‍ವಿನೀತ

ಸಿಗದ ಅನಂತ ಆಕಾಶದೆದುರು
ಸಿಕ್ಕದ್ದು ಒಂದು ಹಿಡಿ ಹೊಟ್ಟು,
ಅದನ್ನೇ ತೊಟ್ಟು
ಕೈಗೆ ಬಳೆಯಾಗಿ ಮುಡಿಗೆ ಹೂವಾಗಿ
ಮರೆದಿದ್ದೇನೆ ನಾಚಿಕೆ ಬಿಟ್ಟು

ನಾಚಿಕೆಯಿಲ್ಲ ನನಗೆ ನಾಚಿಕೆಯಿಲ್ಲ
ಯಾಕೆ, ಇಲ್ಲಿ ಬೇರು ಬಿಟ್ಟು ಬೇರೆಲ್ಲೋ ಹೂ ಚೆಲ್ಲಿದೆನ?
ಸಿಂಹದಂತೆ ಬಂದು ಪೆಟ್ಟು ತಿಂದು ಕತ್ತೆ ಕೂಗಿದೆನ?
ಎರಡವ್ನ ಎಂಟಕ್ಕೆ ಎತ್ತಿ ಏಳರ ತಲೆ ತೆಗೆದೆನ?
ಕೂಗಿನಲ್ಲಿ ವಜಾಹೋಗಿ ಕೆಲಸದಲ್ಲಿ ಜಮಾ ಅಗಿ
ನಾಚಿಕೆ ಯಾಕೆ ನನಗೆ ನಾಚಿಕೆ ಯಾಕೆ?

ಕಲ್ಲುನೆಲ ಸಿಕ್ಕರೇನು ಅದರಲ್ಲಿ
ನಿನ್ನಂಥ ಗುಲಾಬಿ ಬೆಳೆದಿಲ್ಲವ?
ರೂಪ ಧೂಪ ಹರಸಿ ಮೈಗೆ
ಹಸಿರು ಹಾಸಿಗೆ ಇತ್ತಿಲ್ಲವ?
ಗರ್ಭಗುಡಿ ತನಕ ಹೊತ್ತು ನಿನ್ನ
ದೇವರ ತಲೆಗೆ ಏರಿಸಿಲ್ಲವ?

ವ್ಯಾಕರಣದ ಗಡೀಪಾರುಗಳನ್ನ
ವಿಚಿತ್ರ ಲಯಕ್ಕೆ ಹಿಡಿಯುತ್ತ
ಮಾತಿನ ಮಣ್ಣಗೊಂಬೆಗಳನ್ನ
ಅರ್ಥದ ಹೊಳೆಯಲ್ಲಿ ಕರಗಿಸುತ್ತ
ಅನುಭವದ ಸೀರೆ ಕುಪ್ಟಸವನ್ನ
ಧ್ವನಿಮಂಚದಲ್ಲಿ ಸುಲಿಯುತ್ತ
ಪಟ್ಟ ಆನಂದಕ್ಕೇನು ಬೆಲೆಯೇ ಇಲ್ಲವ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆಣ್ಣು
Next post ಪಾಣಿಪತ

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…