Home / ಕವನ / ಕವಿತೆ / ಉದುರಿದೆಲೆಗಳು

ಉದುರಿದೆಲೆಗಳು

ಸುರುಳಿ ಸುತ್ತಿಟ್ಟ ಬಾಳಬೀದಿಯ ನೆನಪು ಕೆರಳಿ
ಮರಳಿ ಬಿಚ್ಚಿ ಹೊರಳ ತೊಡಗುತ್ತೇನೆ ಆಗೀಗ;
ಹಳೆಯ ಅರಳಿಮರ
ಹೊಳೆಮೆಟ್ಟಲು
ಗರುಡಗಂಬ
ಚಿಕ್ಕದೊಡ್ಡದ್ದೆಲ್ಲ ಚಿಮ್ಮಿ ನಿಲ್ಲುತ್ತವೆ ಹುಗಿದ ತಳದಿಂದ
ಹುಟ್ಟಿಕೊಳ್ಳುತ್ತದೆ ಸತ್ತ ಗಿಡ
ಸುತ್ತದಡ ನಡುವೆ
ಕತ್ತರಿಸಿ ತೆಗೆದ ಆಕಾಶದಂತೆ ಕಪ್ಪಗೆ
ಬೆತ್ತಲೆ ಮೈಯ ನುಣುಪು ಜಲ

ಬೆತ್ತಲೆ ಮೈಯ ತುಂಗಾನದಿಯ ಪಿಸುದನಿ
ನೆಕ್ಕಿಬಿಡುತ್ತದೆ ಒಳಗೆ ಮೊಳೆಯುತ್ತಿರುವ ಉರಿಯ
ಹೊರಟುಬಿಡುತ್ತದೆ ಮನಸ್ಸು ಹೊಡೆದುಕೊಂಡು ಮೇವಿಗೆ
ಹಿಂಡು ಕುರಿಯ
ಕೂರುತ್ತೇನೆ ದಡದಲ್ಲಿ
ಕಾಲಾಡುತ್ತ ನೀರಲ್ಲಿ
ಕರೆಯುತ್ತೇನೆ ಒಬ್ಬೊಬ್ಬರಾಗಿ
ಕಾಡಿದ ಕೌರವರ ಕೂಡಿದ ಪಾಂಡವರ
ಕರೆಯುತ್ತೇನೆ ಕಂಪು ಕನಸುಗಳನ್ನು
ಎದೆಗೆ ಹಬ್ಬಿದ್ದ ಚೆಲುವೆಯರ
ಆಸೆಗೆ ಆಕೃತಿ ನೀಡಿದ ಅರುಣೋದಯ ಋಣಗಳ
ಆದರಿಸಿ ಆಲಿಂಗನದಲ್ಲಿ ಅಫಜಲರಾದ ನೆಂಟರ
ನಾಲಿಗೆಯಲ್ಲಿ ಜೆಟ್ ಬಿಡುವ ಕಾಲುನಡಿಗೆ ಕುಂಟರ
ಚೈತ್ರವರಳುತ್ತದೆ
ಜ್ಯೇಷ್ಠ ಕೆರಳುತ್ತದೆ.
ಮುಗಿಯುತ್ತದೆ ಮಾಗಿ ತಾಗಿ ಎಲ್ಲ ಕೋಲಾಹಲ
ಬಿಸಿಲು ಬೆಳುದಿಂಗಳೆಲ್ಲ ಜೊತೆಬೆರಳಂತೆ ನಿಂತು
ಒಂದೇ ಕೈಯಾಗಿದೆ ಅವು ಕಾಲೂರಿದ ನೆಲ

ಇಲ್ಲ ಎಲ್ಲ ಅರ್ಥವಾಗುತ್ತದೆ ಈಗ ನನಗೆ
ಬಿಚ್ಚಿ ನಿಲ್ಲುತ್ತವೆ ಪಾತ್ರಗಳೆಲ್ಲ ಗ್ರೀನ್ ರೂಮಿನಲಿ ತಮ್ಮ ತೊಡಿಗೆ
ಒಂದೇ ದಾರದಿಂದ ಆಗಿದೆ ಕಸೂತಿಯ
ಬಗೆಬಗೆ ಚಿತ್ರ, ಹೆಣಿಗೆ
ಸುಖದುಃಖ ಬ್ಯಾಂಡು ಹೊಡೆಯುತ್ತ ಹೊರಟಿದೆ
ವಿವೇಕದ ಮೆರವಣಿಗೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...