ಕಲಾವಿದರ ಕುಟುಂಬಗೀತೆ

ಕಲಾವಿದರ ಹಣೆಯಲ್ಲಿ ಮೂರನೆ ಕಣ್ಣೊಂದಿದೆ.
ಚಿಕ್ಕ ಮಣ್ಣಕಣದಲ್ಲೂ
ಬಣ್ಣದ ಕುಂಬಳ ಕಾಣುವ ಈ ವಿಚಿತ್ರ ಕಣ್ಣಿಗೆ
ಚಂದ್ರಮುಖದ ಹಳ್ಳಕೊಳ್ಳ
ಖಂಡಿತ ಕಾಣುತ್ತದೆ.
ಆಳಗಳನ್ನ ಮರೆಸಿ ಬೆಳದಿಂಗಳ ಮೆರೆಸಿ
ನಗುತ್ತ ಬಂದರೆ ಎದುರಿಗೆ ಸುಂದರಿ ಶೂರ್ಪನಖಿ,
ರಾಮಬುದ್ಧಿ ಅದರ ಹೊಂಚ
ಥಟ್ಟನೆ ಕಾಣುತ್ತದೆ,
ಲಕ್ಷ್ಮಣಕ್ರೌರ್‍ಯ, ರೇಗಿ ಮೂಗನೆ ಕೊಯ್ಯುತ್ತದೆ.
ಕೂಡಲೆ
ಧೋ ಎಂದು ದಡಗುಟ್ಟಿ ಸುರಿಯುತ್ತದೆ ಮಳೆ
ಹರಿಯುತ್ತದೆ ಹೊಳೆ
ತೇಲುತ್ತದೆ ಮನೆ ಮಠ ಸಮಸ್ತ ಇಳೆ.
ನಿಂತಾಗ ಆಕಾಶ ಶಾಂತವಾಗಿ ಭೂಮಿ ಹಸುರುಕ್ಕಿ ಹಾಡುತ್ತದೆ.
ಹೀಗೆ ಮಳೆಗಾಲ ಪ್ರತಿವರ್ಷ ಬರುತ್ತದೆ.

ಕಲಾವಿದರ ಎದೆಯಲ್ಲಿ ಒಂಟಿಹಕ್ಕಿ ಕೂತಿದೆ.
ತೆಪ್ಪನೆ ಕೂತ ಹಕ್ಕಿಗೆ
ಥಟ್ಟನೆ ಖುಷಿ ಹತ್ತಿ
ಕೂಗುತ್ತದೆ ಆಗೀಗ ಬಿರಿಯುವಂತೆ ಬೆಟ್ಟದ ನೆತ್ತಿ;
ನಡುಗುತ್ತದ ಕಡಲು
ನಡುಗುತ್ತದೆ ನೆಲದೊಡಲು
ಉಡುಗುತ್ತದೆ ಅವರೆದುರು ಎಲ್ಲ ದನಿ ಎಲ್ಲ ಗುಡುಗು ಸಿಡಿಲು;
ಹಾಕಿ ಮುಚ್ಚಿ ಮಾಡುತ್ತದೆ ಅದರಾಜ್ಞೆಗೆ
ಯಕ್ಷಲೋಕದ ಚಿನ್ನದ ಬಾಗಿಲು;
ಮನೆ ಮಠ ಎಲ್ಲ ತೃಣವಾಗಿ
ಕಾಣದ ಋಣದ ಸನ್ನೆಗೆ ಬಾಗಿ
ಹೊರಡುವ ಇವನ ಕವಿಯುತ್ತದೆ ಮರವೆಯ ಮುಗಿಲು
ಕಟ್ಟಿಕೊಂಡ ಲೋಕಭಾರವನ್ನ
ಕೊಡವಿ ಬಿಡುತ್ತದೆ ಬಗಲು;
ಆ ನಿರಾಸಕ್ತಿಗೆ ಬಾಗದು ಯಾವುದು?
ಬಾಗದೆ ಸಂಸಾರನೊಗದ ಒಂದು ಕೊನೆ ಹೊತ್ತ ಹೆಗಲು?

ಸರಿ, ನೆಪವೆತ್ತಿ
ಧೋ ಎಂದು ದಡಗುಟ್ಟಿ ಸುರಿಯುತ್ತದೆ ಮಳೆ,
ಹರಿಯುತ್ತದೆ ಹೊಳೆ
ತೇಲಿಸುತ್ತ ಮನೆ ಮಠ ಸಮಸ್ತ ಇಳೆ,
ಅಷ್ಟರಲ್ಲಿ
ಹಕ್ಕಿಕೂಗು ಚಿಕ್ಕೆಲೋಕ ಮುಟ್ಟುವಷ್ಟರಲ್ಲಿ
ಲೋಕದ ರಾಕ್ಷಸಕೇಕೆ
ಧಡಾಧಡಿ ನುಗ್ಗಿ
ಕತ್ತಿಗೆ ತೈತುಡುಕುತ್ತದೆ
ಕೊರಳಿಗೆ ಹಾವ ಬಿಗಿಯುತ್ತದೆ;
ಥಟ್ಟನೆ ಎಚ್ಚರಾಗಿ ಬಿಟ್ಟರೆ ಕಣ್ಣು
ಮನೆ ಮಠ ಮಡದಿ
ಮೂಲೆಯಲ್ಲಿ ನಗು ಚಿಮುಕಿಸಿ ನಿಂತಿರುವ ಬೆಳುದಿಂಗಳ ಹಣ್ಣು!
ಕೆಳಗಿಟ್ಟ ಗಂಟು ಮತ್ತೆ ಹಗಲೇರುತ್ತದೆ
ನಗಾರಿ ಭೇರಿ ನುಡಿಯ ತೊಡಗುತ್ತವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಶಸ್ಸು
Next post ತೆಂಕಣ ಗಾಳಿಯಾಟ

ಸಣ್ಣ ಕತೆ

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…