ಕಲಾವಿದರ ಕುಟುಂಬಗೀತೆ

ಕಲಾವಿದರ ಹಣೆಯಲ್ಲಿ ಮೂರನೆ ಕಣ್ಣೊಂದಿದೆ.
ಚಿಕ್ಕ ಮಣ್ಣಕಣದಲ್ಲೂ
ಬಣ್ಣದ ಕುಂಬಳ ಕಾಣುವ ಈ ವಿಚಿತ್ರ ಕಣ್ಣಿಗೆ
ಚಂದ್ರಮುಖದ ಹಳ್ಳಕೊಳ್ಳ
ಖಂಡಿತ ಕಾಣುತ್ತದೆ.
ಆಳಗಳನ್ನ ಮರೆಸಿ ಬೆಳದಿಂಗಳ ಮೆರೆಸಿ
ನಗುತ್ತ ಬಂದರೆ ಎದುರಿಗೆ ಸುಂದರಿ ಶೂರ್ಪನಖಿ,
ರಾಮಬುದ್ಧಿ ಅದರ ಹೊಂಚ
ಥಟ್ಟನೆ ಕಾಣುತ್ತದೆ,
ಲಕ್ಷ್ಮಣಕ್ರೌರ್‍ಯ, ರೇಗಿ ಮೂಗನೆ ಕೊಯ್ಯುತ್ತದೆ.
ಕೂಡಲೆ
ಧೋ ಎಂದು ದಡಗುಟ್ಟಿ ಸುರಿಯುತ್ತದೆ ಮಳೆ
ಹರಿಯುತ್ತದೆ ಹೊಳೆ
ತೇಲುತ್ತದೆ ಮನೆ ಮಠ ಸಮಸ್ತ ಇಳೆ.
ನಿಂತಾಗ ಆಕಾಶ ಶಾಂತವಾಗಿ ಭೂಮಿ ಹಸುರುಕ್ಕಿ ಹಾಡುತ್ತದೆ.
ಹೀಗೆ ಮಳೆಗಾಲ ಪ್ರತಿವರ್ಷ ಬರುತ್ತದೆ.

ಕಲಾವಿದರ ಎದೆಯಲ್ಲಿ ಒಂಟಿಹಕ್ಕಿ ಕೂತಿದೆ.
ತೆಪ್ಪನೆ ಕೂತ ಹಕ್ಕಿಗೆ
ಥಟ್ಟನೆ ಖುಷಿ ಹತ್ತಿ
ಕೂಗುತ್ತದೆ ಆಗೀಗ ಬಿರಿಯುವಂತೆ ಬೆಟ್ಟದ ನೆತ್ತಿ;
ನಡುಗುತ್ತದ ಕಡಲು
ನಡುಗುತ್ತದೆ ನೆಲದೊಡಲು
ಉಡುಗುತ್ತದೆ ಅವರೆದುರು ಎಲ್ಲ ದನಿ ಎಲ್ಲ ಗುಡುಗು ಸಿಡಿಲು;
ಹಾಕಿ ಮುಚ್ಚಿ ಮಾಡುತ್ತದೆ ಅದರಾಜ್ಞೆಗೆ
ಯಕ್ಷಲೋಕದ ಚಿನ್ನದ ಬಾಗಿಲು;
ಮನೆ ಮಠ ಎಲ್ಲ ತೃಣವಾಗಿ
ಕಾಣದ ಋಣದ ಸನ್ನೆಗೆ ಬಾಗಿ
ಹೊರಡುವ ಇವನ ಕವಿಯುತ್ತದೆ ಮರವೆಯ ಮುಗಿಲು
ಕಟ್ಟಿಕೊಂಡ ಲೋಕಭಾರವನ್ನ
ಕೊಡವಿ ಬಿಡುತ್ತದೆ ಬಗಲು;
ಆ ನಿರಾಸಕ್ತಿಗೆ ಬಾಗದು ಯಾವುದು?
ಬಾಗದೆ ಸಂಸಾರನೊಗದ ಒಂದು ಕೊನೆ ಹೊತ್ತ ಹೆಗಲು?

ಸರಿ, ನೆಪವೆತ್ತಿ
ಧೋ ಎಂದು ದಡಗುಟ್ಟಿ ಸುರಿಯುತ್ತದೆ ಮಳೆ,
ಹರಿಯುತ್ತದೆ ಹೊಳೆ
ತೇಲಿಸುತ್ತ ಮನೆ ಮಠ ಸಮಸ್ತ ಇಳೆ,
ಅಷ್ಟರಲ್ಲಿ
ಹಕ್ಕಿಕೂಗು ಚಿಕ್ಕೆಲೋಕ ಮುಟ್ಟುವಷ್ಟರಲ್ಲಿ
ಲೋಕದ ರಾಕ್ಷಸಕೇಕೆ
ಧಡಾಧಡಿ ನುಗ್ಗಿ
ಕತ್ತಿಗೆ ತೈತುಡುಕುತ್ತದೆ
ಕೊರಳಿಗೆ ಹಾವ ಬಿಗಿಯುತ್ತದೆ;
ಥಟ್ಟನೆ ಎಚ್ಚರಾಗಿ ಬಿಟ್ಟರೆ ಕಣ್ಣು
ಮನೆ ಮಠ ಮಡದಿ
ಮೂಲೆಯಲ್ಲಿ ನಗು ಚಿಮುಕಿಸಿ ನಿಂತಿರುವ ಬೆಳುದಿಂಗಳ ಹಣ್ಣು!
ಕೆಳಗಿಟ್ಟ ಗಂಟು ಮತ್ತೆ ಹಗಲೇರುತ್ತದೆ
ನಗಾರಿ ಭೇರಿ ನುಡಿಯ ತೊಡಗುತ್ತವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಶಸ್ಸು
Next post ತೆಂಕಣ ಗಾಳಿಯಾಟ

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…