Home / ಕವನ / ಕವಿತೆ / ಮಧ್ಯಚಿತ್ತ

ಮಧ್ಯಚಿತ್ತ

ಸುಕ್ಕುತೊಗಲಿನ ಮೇಲೆ ಬಿದ್ದ ಬರೆಗಳ ಗುರುತು
ನೀರು ಬತ್ತಿದ ತೊರೆಯ ವಿಕಟಪಾತ್ರ,
ಉಸಿರು ಬಿಗಿಹಿಡಿದು ಗಪಗಪ ತಿಂದ ಕಸಿಮಾವು
ಕೊಟ್ಟ ಸುಖಬಾಧೆಗಳ ಚಿತ್ರಗಣಿತ.

ಚಿನ್ನಿ ಬಾಲಕನಲ್ಲಿ ಸಣ್ಣಗೆ ಕಣ್ಣೊಡೆದ ಬಾಧೆ
ತುರಿಕೆಹಿತ ಮುಖದಲ್ಲಿ ಮೊಳೆತ ಕಡಲೆ,
ಅಂಗಾಂಗದಲ್ಲೆಲ್ಲ ದಂಗೆಕೂಗುವ ಕಿಚ್ಚು
ಕಣ್ಣಿರಿವ ಕಾಂತಿಯ ಕಠಾರಿಬಿಚ್ಚು.

ಭಗದತ್ತ ಮದ್ದಾನೆಯೇರಿ ಬಂದರೆ ಪ್ರಾಣ-
ದೇವರ ಅಹಂಕಾರ ಸೊಕ್ಕಿ ಉರಿದು,
ಕಾದ ಮೈ ಚಿತ್ತ ಕೇದಗೆ ತೋಟದಲಿ ಹೆತ್ತ
ಬೆಂಕಿಬೊಂಬೆಗಳ ಬಿಗಿದಪ್ಟಿ ಹಾದು

ಸಿಕ್ಕ ಗದ್ದೆಯಲಿ ಸಿಕ್ಕದ್ದನೆಲ್ಲವ ಉತ್ತು
ಸತ್ತು ಆವೇಶ ಎರಡು ಕ್ಷಣ ವಿರಾಗಿ;
ಜಾರಿದರು ಜಾರುಬಂಡೆಯ ಮೆಟ್ಟಲನ್ನೇರಿ
ಬರುವ ಹೊತ್ತಿಗೆ ಆಟಕಿಳಿವ ಭೋಗಿ.

ಬಚ್ಚಲಿಗೆ ಹೋದ ಕೆಚ್ಚಿನ ಜೀವ ಬಿಸಿನೀರ
ಮೀಯುತಿದೆ ಒಂದೆ ಸಮ ಹೊರಗೆ ಬರದೆ,
ಪೂಜೆಕೋಣೆಯಲಿ ಅಣಿ ಮಾಡಿಟ್ಟ ಸಾಮಗ್ರಿ
ಕಾಯುತಿದೆ ಕಣ್ಣುಮುಚ್ಚುತಿದೆ ಹಗಲೆ.

ಷಷ್ಟ್ಯಬ್ದಿ ಮಗಿದರೂ ಇಷ್ಟ ಕೊನರುತಿದೆ. ಕಸಿ
ಹಣ್ಣ ಸ್ಮೃತಿಯಲಿ ಸುಯ್ವೆ ಮಧ್ಯಚಿತ್ತ,
ನರೆಗಡ್ಡ ಸುಕ್ಕುಗೆನ್ನೆಯ ನಡುವೆ ಕುಳಿಗಣ್ಣು
ಜಪಿಸುತಿದೆ ಹಸಿರನ್ನು ಹುರಿದ ಬಿತ್ತ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...