ಮಧ್ಯಚಿತ್ತ

ಸುಕ್ಕುತೊಗಲಿನ ಮೇಲೆ ಬಿದ್ದ ಬರೆಗಳ ಗುರುತು
ನೀರು ಬತ್ತಿದ ತೊರೆಯ ವಿಕಟಪಾತ್ರ,
ಉಸಿರು ಬಿಗಿಹಿಡಿದು ಗಪಗಪ ತಿಂದ ಕಸಿಮಾವು
ಕೊಟ್ಟ ಸುಖಬಾಧೆಗಳ ಚಿತ್ರಗಣಿತ.

ಚಿನ್ನಿ ಬಾಲಕನಲ್ಲಿ ಸಣ್ಣಗೆ ಕಣ್ಣೊಡೆದ ಬಾಧೆ
ತುರಿಕೆಹಿತ ಮುಖದಲ್ಲಿ ಮೊಳೆತ ಕಡಲೆ,
ಅಂಗಾಂಗದಲ್ಲೆಲ್ಲ ದಂಗೆಕೂಗುವ ಕಿಚ್ಚು
ಕಣ್ಣಿರಿವ ಕಾಂತಿಯ ಕಠಾರಿಬಿಚ್ಚು.

ಭಗದತ್ತ ಮದ್ದಾನೆಯೇರಿ ಬಂದರೆ ಪ್ರಾಣ-
ದೇವರ ಅಹಂಕಾರ ಸೊಕ್ಕಿ ಉರಿದು,
ಕಾದ ಮೈ ಚಿತ್ತ ಕೇದಗೆ ತೋಟದಲಿ ಹೆತ್ತ
ಬೆಂಕಿಬೊಂಬೆಗಳ ಬಿಗಿದಪ್ಟಿ ಹಾದು

ಸಿಕ್ಕ ಗದ್ದೆಯಲಿ ಸಿಕ್ಕದ್ದನೆಲ್ಲವ ಉತ್ತು
ಸತ್ತು ಆವೇಶ ಎರಡು ಕ್ಷಣ ವಿರಾಗಿ;
ಜಾರಿದರು ಜಾರುಬಂಡೆಯ ಮೆಟ್ಟಲನ್ನೇರಿ
ಬರುವ ಹೊತ್ತಿಗೆ ಆಟಕಿಳಿವ ಭೋಗಿ.

ಬಚ್ಚಲಿಗೆ ಹೋದ ಕೆಚ್ಚಿನ ಜೀವ ಬಿಸಿನೀರ
ಮೀಯುತಿದೆ ಒಂದೆ ಸಮ ಹೊರಗೆ ಬರದೆ,
ಪೂಜೆಕೋಣೆಯಲಿ ಅಣಿ ಮಾಡಿಟ್ಟ ಸಾಮಗ್ರಿ
ಕಾಯುತಿದೆ ಕಣ್ಣುಮುಚ್ಚುತಿದೆ ಹಗಲೆ.

ಷಷ್ಟ್ಯಬ್ದಿ ಮಗಿದರೂ ಇಷ್ಟ ಕೊನರುತಿದೆ. ಕಸಿ
ಹಣ್ಣ ಸ್ಮೃತಿಯಲಿ ಸುಯ್ವೆ ಮಧ್ಯಚಿತ್ತ,
ನರೆಗಡ್ಡ ಸುಕ್ಕುಗೆನ್ನೆಯ ನಡುವೆ ಕುಳಿಗಣ್ಣು
ಜಪಿಸುತಿದೆ ಹಸಿರನ್ನು ಹುರಿದ ಬಿತ್ತ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗುಳಿಗೆ (ಮಾತ್ರೆ)
Next post ಕಟಗ ರೊಟ್ಟಿಗೆ ಗುಟುಗು ನೀರಿಗೆ

ಸಣ್ಣ ಕತೆ

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

cheap jordans|wholesale air max|wholesale jordans|wholesale jewelry|wholesale jerseys