ಬುದ್ದಿ ಇರುವುದೆ ಹೇಳಿ ಇದ್ದಮಾತ್ರಕೆ ಕಾವು
ಈಗೀಗ ಕಣ್ ತೆರೆಯುತಿರುವ ಎಳೆಯರು ನಾವು.
ಹಿರಿಯರೊಡಬೆರೆತು ಅನುಭವವಿಲ್ಲ, ಬೆರೆತೆವೋ
ಅಪಚಾರವಾಯ್ತೆಂಬ ಎಗ್ಗಿಲ್ಲ. ಬಾಲನಡೆ
ಬಲಿತಿಲ್ಲ ಹಸಿರು ಪ್ರಾಯದಲಿ ಜೊತೆ ಬಂದೆವು.
ಸ್ನೇಹಕೂ ಹುಬ್ಬುಗಂಟನು ತರುವ ಸಲಿಗೆಯಲಿ
ಹೇಗೊ ನಡೆದವು, ಏನೊ ಹರಟಿದೆವು, ಮುರುಟಿದೆವು;
ಕುರುಡುಗಣ್ಣಲಿ ಬಿಳುಪು ಕಪ್ಪೆಂದು ಕಿರಿಚಿದೆವು.
ಚಿಗುರುಗೊಂಬಿನ ಕರುವ ಕರೆದು ಗುದ್ದಿಸಿಕೊಳುತ
ನಕ್ಕು ಮುದ್ದಿಸಿ ಒಲವ ಮೆರೆದ ಹಿರಿಯರು ನೀವು.
ಸಪ್ಪೆ ಸಕ್ಕರೆಯೆನುವ ಅಕ್ಕರೆಯ ತೋರಿದಿರಿ;
ಸೆರಗು ಶಲ್ಯವ ಕಟ್ಟಿ ಇಗೊ ಮದುವೆ ಎಂದಿರಿ;
ಸಿಹಿಯಿಟ್ಬು ಹರಿಭೂಮದೂಟ ಹಾಕಿದಿರಿ;
ನಮ್ಮ ಎಳೆಮುಖದಲ್ಲಿ ನಿಮ್ಮ ಪ್ರಾಯದ ಬಿಂಬ
ಹೊಳೆದು ಸುಖಿಸಿದಿರೆಂಬ ತೆರದಿ ನಕ್ಕಿರಿ. ಹಾಡು
ಹಸೆಮಾಡಿ ಹಾರೈಕೆ ಹೊದಿಸಿದಿರಿ, ನೆನಪಿನಲಿ
ಬಾಳೆ ಚಪ್ಪರವೆದ್ದು ಓಲಗದ ಹನಿಸದ್ದು
ಮದ್ದು ಬಾಣಗಳ ಬಣ್ಣದ ಈಟಿ ನಭಕೆದ್ದು
ಇವಳ ಮೊಗದಲಿ ಮತ್ತೆ ವಧುಭಾವ ಮೂಡಿತು
ಕಂಡುಕೇಳದ ಎಳೆಯರನು ಬಳಿಗೆ ಸೆಳೆದು
ಮಮತೆಯಲಿ ಬಿಗಿದಂಥ ತಾಯಿತಂದೆಯರೆ
ತಬ್ಬಲಿತನದ ಭಾವ ಹರಿದೊಗೆದ ಹಿರಿಯರೆ
ನಿಮಗೆ ಮಾಡುವೆವಿದೊ ಸಾಷ್ಟಾಂಗವಂದನೆ.
*****
Related Post
ಸಣ್ಣ ಕತೆ
-
ಜೋತಿಷ್ಯ
ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…
-
ಕಳಕೊಂಡವನು
ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…
-
ಅಮ್ಮ
‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…
-
ದಿನಚರಿಯ ಪುಟದಿಂದ
ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್ಪ್ರೆಸ್ ಬಸ್ಸುಗಳು… Read more…
-
ಹಳ್ಳಿ…
ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…