ಪ್ರವಾಸ ಮುಗಿಸಿ

ಬುದ್ದಿ ಇರುವುದೆ ಹೇಳಿ ಇದ್ದಮಾತ್ರಕೆ ಕಾವು
ಈಗೀಗ ಕಣ್ ತೆರೆಯುತಿರುವ ಎಳೆಯರು ನಾವು.
ಹಿರಿಯರೊಡಬೆರೆತು ಅನುಭವವಿಲ್ಲ, ಬೆರೆತೆವೋ
ಅಪಚಾರವಾಯ್ತೆಂಬ ಎಗ್ಗಿಲ್ಲ. ಬಾಲನಡೆ
ಬಲಿತಿಲ್ಲ ಹಸಿರು ಪ್ರಾಯದಲಿ ಜೊತೆ ಬಂದೆವು.
ಸ್ನೇಹಕೂ ಹುಬ್ಬುಗಂಟನು ತರುವ ಸಲಿಗೆಯಲಿ
ಹೇಗೊ ನಡೆದವು, ಏನೊ ಹರಟಿದೆವು, ಮುರುಟಿದೆವು;
ಕುರುಡುಗಣ್ಣಲಿ ಬಿಳುಪು ಕಪ್ಪೆಂದು ಕಿರಿಚಿದೆವು.
ಚಿಗುರುಗೊಂಬಿನ ಕರುವ ಕರೆದು ಗುದ್ದಿಸಿಕೊಳುತ
ನಕ್ಕು ಮುದ್ದಿಸಿ ಒಲವ ಮೆರೆದ ಹಿರಿಯರು ನೀವು.
ಸಪ್ಪೆ ಸಕ್ಕರೆಯೆನುವ ಅಕ್ಕರೆಯ ತೋರಿದಿರಿ;
ಸೆರಗು ಶಲ್ಯವ ಕಟ್ಟಿ ಇಗೊ ಮದುವೆ ಎಂದಿರಿ;
ಸಿಹಿಯಿಟ್ಬು ಹರಿಭೂಮದೂಟ ಹಾಕಿದಿರಿ;
ನಮ್ಮ ಎಳೆಮುಖದಲ್ಲಿ ನಿಮ್ಮ ಪ್ರಾಯದ ಬಿಂಬ
ಹೊಳೆದು ಸುಖಿಸಿದಿರೆಂಬ ತೆರದಿ ನಕ್ಕಿರಿ. ಹಾಡು
ಹಸೆಮಾಡಿ ಹಾರೈಕೆ ಹೊದಿಸಿದಿರಿ, ನೆನಪಿನಲಿ
ಬಾಳೆ ಚಪ್ಪರವೆದ್ದು ಓಲಗದ ಹನಿಸದ್ದು
ಮದ್ದು ಬಾಣಗಳ ಬಣ್ಣದ ಈಟಿ ನಭಕೆದ್ದು
ಇವಳ ಮೊಗದಲಿ ಮತ್ತೆ ವಧುಭಾವ ಮೂಡಿತು
ಕಂಡುಕೇಳದ ಎಳೆಯರನು ಬಳಿಗೆ ಸೆಳೆದು
ಮಮತೆಯಲಿ ಬಿಗಿದಂಥ ತಾಯಿತಂದೆಯರೆ
ತಬ್ಬಲಿತನದ ಭಾವ ಹರಿದೊಗೆದ ಹಿರಿಯರೆ
ನಿಮಗೆ ಮಾಡುವೆವಿದೊ ಸಾಷ್ಟಾಂಗವಂದನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಳಿಕೆ
Next post ಕೇಳಲಿ ಮುಕ್ತಿಯ ಚಿರಪಙ್ತಿ

ಸಣ್ಣ ಕತೆ

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

cheap jordans|wholesale air max|wholesale jordans|wholesale jewelry|wholesale jerseys