ಪ್ರವಾಸ ಮುಗಿಸಿ

ಬುದ್ದಿ ಇರುವುದೆ ಹೇಳಿ ಇದ್ದಮಾತ್ರಕೆ ಕಾವು
ಈಗೀಗ ಕಣ್ ತೆರೆಯುತಿರುವ ಎಳೆಯರು ನಾವು.
ಹಿರಿಯರೊಡಬೆರೆತು ಅನುಭವವಿಲ್ಲ, ಬೆರೆತೆವೋ
ಅಪಚಾರವಾಯ್ತೆಂಬ ಎಗ್ಗಿಲ್ಲ. ಬಾಲನಡೆ
ಬಲಿತಿಲ್ಲ ಹಸಿರು ಪ್ರಾಯದಲಿ ಜೊತೆ ಬಂದೆವು.
ಸ್ನೇಹಕೂ ಹುಬ್ಬುಗಂಟನು ತರುವ ಸಲಿಗೆಯಲಿ
ಹೇಗೊ ನಡೆದವು, ಏನೊ ಹರಟಿದೆವು, ಮುರುಟಿದೆವು;
ಕುರುಡುಗಣ್ಣಲಿ ಬಿಳುಪು ಕಪ್ಪೆಂದು ಕಿರಿಚಿದೆವು.
ಚಿಗುರುಗೊಂಬಿನ ಕರುವ ಕರೆದು ಗುದ್ದಿಸಿಕೊಳುತ
ನಕ್ಕು ಮುದ್ದಿಸಿ ಒಲವ ಮೆರೆದ ಹಿರಿಯರು ನೀವು.
ಸಪ್ಪೆ ಸಕ್ಕರೆಯೆನುವ ಅಕ್ಕರೆಯ ತೋರಿದಿರಿ;
ಸೆರಗು ಶಲ್ಯವ ಕಟ್ಟಿ ಇಗೊ ಮದುವೆ ಎಂದಿರಿ;
ಸಿಹಿಯಿಟ್ಬು ಹರಿಭೂಮದೂಟ ಹಾಕಿದಿರಿ;
ನಮ್ಮ ಎಳೆಮುಖದಲ್ಲಿ ನಿಮ್ಮ ಪ್ರಾಯದ ಬಿಂಬ
ಹೊಳೆದು ಸುಖಿಸಿದಿರೆಂಬ ತೆರದಿ ನಕ್ಕಿರಿ. ಹಾಡು
ಹಸೆಮಾಡಿ ಹಾರೈಕೆ ಹೊದಿಸಿದಿರಿ, ನೆನಪಿನಲಿ
ಬಾಳೆ ಚಪ್ಪರವೆದ್ದು ಓಲಗದ ಹನಿಸದ್ದು
ಮದ್ದು ಬಾಣಗಳ ಬಣ್ಣದ ಈಟಿ ನಭಕೆದ್ದು
ಇವಳ ಮೊಗದಲಿ ಮತ್ತೆ ವಧುಭಾವ ಮೂಡಿತು
ಕಂಡುಕೇಳದ ಎಳೆಯರನು ಬಳಿಗೆ ಸೆಳೆದು
ಮಮತೆಯಲಿ ಬಿಗಿದಂಥ ತಾಯಿತಂದೆಯರೆ
ತಬ್ಬಲಿತನದ ಭಾವ ಹರಿದೊಗೆದ ಹಿರಿಯರೆ
ನಿಮಗೆ ಮಾಡುವೆವಿದೊ ಸಾಷ್ಟಾಂಗವಂದನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಳಿಕೆ
Next post ಕೇಳಲಿ ಮುಕ್ತಿಯ ಚಿರಪಙ್ತಿ

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…