ಕೇಳಲಿ ಮುಕ್ತಿಯ ಚಿರಪಙ್ತಿ

ಮೂಡಣ ಪಡುವಣ ಕಡಲಿನ ವಡಬನೆ
ನಡು ಬಾನಿನ ವರ ಭಾಸ್ಕರನೆ
ವೀಚೀ ರಂಗಾ ಭುವನ ತರಂಗಾ
ಕೊಂಕಣ ತೆಂಕಣ ಶಾಮಲನೆ

ಗಗನಾಂಗಣ ರವಿ ಎದೆಯಾಂಗಣ ಕವಿ
ಭಾರತಿಯಾತ್ಮದ ಚಿನ್ಮಯನೆ
ಸತ್ಯಾರಾಧನ ಶಾಂತಾಹ್ಲಾದನ
ಹುಯ್ಲಿನ ಕೊಯ್ಲಿನ ವಿಪ್ಲವನೆ

ಓವೋ ಗುರುಹರ ಆತ್ಮಾಂಗಣ ಚಿರ
ಬಾರೈ ತಾರೈ ಋತ್ತತ್ವಾ
ತೂರೈ ತುಳಿಯೈ ಪುಡಿ ಹುಡಿ ಮಾಡೈ
ಭೋಗಾ ರೋಗಾ ರಕ್ತತ್ವಾ

ಬೆಳಗಾಗಲಿ ಇಳೆ ಋಷಿಯಾಗಲಿ ಕಳೆ
ಮಳೆಯಾಗಲಿ ಚಿರ ವರಶಾಂತಿ
ತಬ್ಬಲಿ ಕರುಬಲಿ ನಿಲ್ಲಲಿ ಹುಲಿಯುಲಿ
ಕೇಳಲಿ ಮುಕ್ತಿಯ ಚಿರಪಙ್ತಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರವಾಸ ಮುಗಿಸಿ
Next post ಹೀಗಾಯಿತು

ಸಣ್ಣ ಕತೆ

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ದೊಡ್ಡ ಬೋರೇಗೌಡರು

    ಪ್ರಕರಣ ೭ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸಗಳ ಸಮಸ್ಯೆ ಬಹಳ ದೊಡ್ಡದೆಂದು ರಂಗಣ್ಣನಿಗೆ ತಿಳಿದುಬಂತು. ಮೇಲಿನವರು ಬರಿಯ ವರದಿಗಳನ್ನು ತಯಾರು ಮಾಡುವುದರಲ್ಲಿಯೂ ಹೊರಗಿನ ಪ್ರಾಂತದವರಿಗೆ - ಅದರಲ್ಲಿಯೂ… Read more…