Home / ಕವನ / ಕವಿತೆ / ಕರ್‍ಮ

ಕರ್‍ಮ

ಯಾರೊ ಕಟ್ಟಿದ ಮನೆಯ ನಾನು ಮುರಿಯುವುದೀಗ
ನನ್ನ ಕರ್‍ಮ,
ಜಳ್ಳು ಕಾಳೆಲ್ಲ ಕಣ್ಮುಚ್ಚಿ ಬಾಚಿದೆನೇಕೆ?
ಕೇರುತಿದೆ ಈಗ ಕೆರಳಿದ ಮನೋಧರ್‍ಮ.
ಸುಬ್ಬಮ್ಮ, ನಾಣು, ಪಟಗುಪ್ಪೆ ರಾಮಾಜೋಯ್ಸ
ಹರಿಕಥಾಂಬುಧಿ ಚಂದ್ರ ನರಸಿಂಹದಾಸ
ಚಿಕ್ಕಂದಿನಿಂದ ನನಗೆಂದೆ ಕನಿಕರಿಸಿ
ಕಟ್ಟಿಕೊಟ್ಟಿರುವ ಈ ಭಾವಭವನ
ಬಿರುಕು ಬಿಟ್ಟಿದ್ದರೂ ಸಹಿಸಿ ಕೂರುವುದೆಂತು?
ನಾತ ಬಡಿಯುತ್ತಲಿದೆ ಕೊಳೆತು ದವನ.

ಇಷ್ಟು ದಿನಗಳ ಮೇಲೆ ಬೆಳಗಾಗಿ ತಲೆಯಲ್ಲಿ
ಬೆರಗು ಈಗ!
ಹಿಂದೆ ಇದರಂದ ಚಂದಕ್ಕೆ ಬೆರಗಾಗಿ,
ಕಂಡಕಂಡಲ್ಲೆಲ್ಲ ಇದನೆ ಹಾಡಿದೆ ಹೊಗಳಿ,
ಇದನು ಕಾಣದ ಕುರುಡುಜನಗಳಿಗೆ ಮರುಗಿ.
ಕಣ್ತೆರೆದು ನೋಡಿದರೆ ಈಗ ಸರಿಯಾಗಿ
ಅರಗು ನಾರು ಕೊಬ್ಬು ಸಜ್ಜರಸ ಕಲಸಿ
ಕಟ್ಟಿದರಗಿನ ಮನೆ ಈ ನನ್ನ ಅರಮನೆ!
ವೈರೋಚನೀತಂತ್ರ ಮಾಯೆಯಲಿ ನಿಲಿಸಿರುವ
ಕ್ರೂರ ಕೌರವಮಾರಿ ಮುಂದಿರುವ ಬಲಿಮಣೆ.
ಇನ್ನು ನಿಂತರೆ ಇಲ್ಲಿ ಸದ್ಯದಲಿ ಇಲ್ಲೆ ಕೊನೆ!
ಇದು ಉರಿವ ಮುಂಚೆಯೇ,
ಒಳಧರ್ಮ ಕಲಿತಿರುವ ವಿದುರಮಂತ್ರದಲೀಗ
ಉರಿಸಬೇಕಿದೆ ಇದನು ನಾನೆ.

ಹೊಕ್ಕ ತಪ್ಪಿಗೆ ಸಹಿಸಿ ಕೂತೆ ತೆಪ್ಪಗೆ,
ಈಗ ಬಿಕ್ಕುತಿದೆ ಜೀವ.
ಬಿದ್ದಿರುವೆಲ್ಲ ಕಗ್ಗಂಟುಗಳ
ಬಿಚ್ಚಿ, ಹಗ್ಗವ ಹಗ್ಗವಾಗಿ ತೆಗೆಯಲೆಬೇಕು
ಯಾವ ಮಗ್ಗಕ್ಕು ಇದು ಉಣಿಸಾಗುವುದು ಸಾಕು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...