ಶಿವನ ಸುಂದರ ತೇರು

ಓ ವಿಶ್ವ ಮಾನವತೆ ಓ ಸತ್ಯ ಶಾಶ್ವತತೆ
ಓ ಪ್ರೇಮ ಕಾಶ್ಮೀರ ಸುರಿದು ಬರಲಿ
ಮುಗಿಲು ಮಲ್ಲಿಗೆ ಅರಳಿ ನೆಲತಾಯಿ ಚುಂಬಿಸಲಿ
ಗುಡುಗು ಎಲುಬಿನ ಗಡಿಗಿ ಒಡೆದು ಬರಲಿ

ನಾವು ಆತ್ಮರ ಬಳಗ ನಾವು ದೇವರ ಬಳಗ
ಈ ಬದುಕು ಅಮೃತದ ಪ್ರೇಮ ಕೊಳಗ
ಜಾತಿ ಬೇಲಿಯ ಕೋತಿ ಅಲ್ಲಲ್ಲ ನಾವಲ್ಲ
ಕಟ್ಟೋಣ ಸಾಗರಕೆ ದೇವಹಡಗ

ಮುಳ್ಳು ಮಲ್ಲಿಗೆಯಾಗಿ ಕಲ್ಲು ಬೆಣ್ಣೆಯು ಆಗಿ
ಹಾವು ಚೇಳಿನ ರಾತ್ರಿ ಬೆಳಗಾಗಲಿ
ವರ್ಗಭೇದದ ಭೂತ ವರ್ಣಯುದ್ಧದ ಪ್ರೇತ
ಬಿಟ್ಟೋಡಿ ಪಂಚಮಿಯ ಸವಿಯಾಗಲಿ

ಬಾಯ್ತುಂಬ ಸವಿಮಾತು ಎದಿತುಂಬ ಶಿವಮಂತ್ರ
ಮನತುಂಬ ಶಿವಲಿಂಗ ಗುಡಿಗಟ್ಟಲಿ
ಸತ್ಯ ಜ್ಞಾನದ ತೇರು ಸ್ವರ್ಣ ವರ್ಣದ ತೇರು
ಶಿವನ ಸುಂದರ ತೇರು ಗಡಿಮುಟ್ಟಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕರ್‍ಮ
Next post ದೇವತೆಗಳನ್ನು ಕುರಿತು ಒಂದು ಹೋಂವರ್‍ಕ್ ಪದ್ಯ

ಸಣ್ಣ ಕತೆ

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

cheap jordans|wholesale air max|wholesale jordans|wholesale jewelry|wholesale jerseys