ಶಿವನ ಸುಂದರ ತೇರು

ಓ ವಿಶ್ವ ಮಾನವತೆ ಓ ಸತ್ಯ ಶಾಶ್ವತತೆ
ಓ ಪ್ರೇಮ ಕಾಶ್ಮೀರ ಸುರಿದು ಬರಲಿ
ಮುಗಿಲು ಮಲ್ಲಿಗೆ ಅರಳಿ ನೆಲತಾಯಿ ಚುಂಬಿಸಲಿ
ಗುಡುಗು ಎಲುಬಿನ ಗಡಿಗಿ ಒಡೆದು ಬರಲಿ

ನಾವು ಆತ್ಮರ ಬಳಗ ನಾವು ದೇವರ ಬಳಗ
ಈ ಬದುಕು ಅಮೃತದ ಪ್ರೇಮ ಕೊಳಗ
ಜಾತಿ ಬೇಲಿಯ ಕೋತಿ ಅಲ್ಲಲ್ಲ ನಾವಲ್ಲ
ಕಟ್ಟೋಣ ಸಾಗರಕೆ ದೇವಹಡಗ

ಮುಳ್ಳು ಮಲ್ಲಿಗೆಯಾಗಿ ಕಲ್ಲು ಬೆಣ್ಣೆಯು ಆಗಿ
ಹಾವು ಚೇಳಿನ ರಾತ್ರಿ ಬೆಳಗಾಗಲಿ
ವರ್ಗಭೇದದ ಭೂತ ವರ್ಣಯುದ್ಧದ ಪ್ರೇತ
ಬಿಟ್ಟೋಡಿ ಪಂಚಮಿಯ ಸವಿಯಾಗಲಿ

ಬಾಯ್ತುಂಬ ಸವಿಮಾತು ಎದಿತುಂಬ ಶಿವಮಂತ್ರ
ಮನತುಂಬ ಶಿವಲಿಂಗ ಗುಡಿಗಟ್ಟಲಿ
ಸತ್ಯ ಜ್ಞಾನದ ತೇರು ಸ್ವರ್ಣ ವರ್ಣದ ತೇರು
ಶಿವನ ಸುಂದರ ತೇರು ಗಡಿಮುಟ್ಟಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕರ್‍ಮ
Next post ದೇವತೆಗಳನ್ನು ಕುರಿತು ಒಂದು ಹೋಂವರ್‍ಕ್ ಪದ್ಯ

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…