Home / ಕವನ / ಅನುವಾದ / ದೇವತೆಗಳನ್ನು ಕುರಿತು ಒಂದು ಹೋಂವರ್‍ಕ್ ಪದ್ಯ

ದೇವತೆಗಳನ್ನು ಕುರಿತು ಒಂದು ಹೋಂವರ್‍ಕ್ ಪದ್ಯ

ಪತಿತ ದೇವತೆಗಳು –
ನೀರೊಲೆಯಿಂದ ಹಾರಿದ ಬೂದಿ ಕಣಗಳು,
ಸೀದ ಅನ್ನದ ನಡುವೆ ಸಿಕ್ಕುವ ಕೋಸಿನ ಎಲೆಗಳು,
ಕೆಂಪು ಬಳಿದ ಅಲಿಕಲ್ಲುಗಳು,
ಚಿನ್ನದ ನಾಲಗೆಯಲ್ಲಿ
ನೀಲಿ ಜ್ವಾಲೆಗಳು.

ಪತಿತ ದೇವತೆಗಳು-
ಇರುವೆಗಳು,
ಸತ್ತವರ ಉಗುರ ಬುಡದಲ್ಲಿ ಕಾಣುವ ಅರ್ಧ ಚಂದ್ರಗಳು.

ಸ್ವರ್ಗದ ದೇವತೆಗಳು –
ಹದಿಹರೆಯದ ಹುಡುಗಿಯ ಒಳ ತೊಡೆಗಳು,
ನಾಚಿಕೆಯ ದೇಶದಲ್ಲಿ ಹೊಳೆಯುವ ನಕ್ಷತ್ರಗಳು,
ಪರಿಶುಭ್ರ ತ್ರಿಕೋನಗಳು, ವೃತ್ತಗಳು.
ನಟ್ಟನಡುವೆ, ನಿಶ್ಚಲ, ನಿಶ್ಯಬ್ದ.

ಪತಿತ ದೇವತೆಗಳು –
ಆಸ್ಪತ್ರೆಯ ಹೆಣದ ರೂಮಿನ ತೆರೆದಿಟ್ಟ ಕಿಟಕಿಗಳು,
ಹಸುವಿನ ಕಣ್ಣುಗಳು, ಹಕ್ಕಿಯ ಅಸ್ತಿಪಂಜರಗಳು,
ಬೀಳುವ ವಿಮಾನಗಳು,
ಸತ್ತಸೈನಿಕರ ಪುಪ್ಪುಸದ ಮೇಲೆ ಹಾರುವ ನೊಣಗಳು,
ಕುರುಡು ಚಿತ್ತೆಮಳೆಯ ಹನಿಗಳು.

ಹೆಂಗಸಿನ ಅಂಗೈಯ ಮೇಲೆ
ಲಕ್ಷ ದೇವತೆಗಳು
ಕಸೂತಿಯಲ್ಲಿ ಬಿಳಿಯ ಹಾಯಿಯಂತ
ದೀರ್‍ಘ ಕವಿತೆಯ ಬಿಡಿ ಅಕ್ಷರಗಳು.
ಎಲ್ಲವನ್ನೂ ರಾಶಿಮಾಡಿಕೊಂಡು
ಬೇವಿನ ಮರಕ್ಕಿಟ್ಟು ಮೊಳೆ ಜಡಿಯಬಹುದು.
ಚಾವಣಿಗೆ ಅಂಟಿಕೊಂಡು ಮಲಗಿ
ಹನಿ ಹನಿಯಾಗಿ ಉದುರುತ್ತ ಕೆಳಗೆ ಬೀಳುತ್ತವೆ.
*****
ಮೂಲ: ಟಾಡೆಯೂಸ್ ರೊಸೆವಿಕ್ಸ್

Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...