ಊರ ಹೊರಗೆ

ಕಮಲಗಣ್ಣಿನಿಂದ ಬಾನ ನೋಡುವ ಕೆರೆ
ದಂಡೆಯುದ್ದ ಅಂಚು ಹೆಣೆದ ಹೂವ ಹೊರೆ
ಭೂಮಿಯೆದೆಗೆ ಹೊಕ್ಕುನಿಂತ ಭಲ್ಲೆಗಬ್ಬು
ಸೊಕ್ಕಿ, ತಲೆಯ ಸುತ್ತ ಒಲೆವ ಪೈರಿನುಬ್ಬು

ಬಿಸಿಲ ಕುಡಿದು ಉರುಳಿ ಬಿದ್ದ ಕಲ್ಲ ನಿದ್ದೆ
ಚೌಕ ಚೌಕ ತೇಪೆ ಹೊಲಿದ ಪಗಡೆಗದ್ದೆ
ಹಸಿರ ಛತ್ರಿಯಲ್ಲಿ ಹೊಳೆವ ಹೀಚುಮಾವು
ಬಿಚ್ಚಿದಂತೆ ಚುಕ್ಕಿಗಣ್ಣ ಇರುಳ ಬಾನು

ಆಳೆತ್ತರ ತೆಂಗು ತಲೆಗೆ ತೊಟ್ಟ ಗರಿ
ಕತ್ತಿಸಾಲು ಮಿಂಚುತ್ತಿದೆ ಹವೆಯ ತೂರಿ
ಹಕ್ಕಿಕೊರಳು ಬರೆದ ಲಕ್ಷ ದನಿಯ ಗೀಟು
ಹವೆಯೆಲ್ಲಾ ಮಕ್ಕಳು ಗೀಚಿಟ್ಟ ಸ್ಲೇಟು

ತನಗೆ ತಾನೆ ಮಾತಾಡುತ ನಡೆವ ಪೋರಿ
ಸೊಟ್ಟ ಪಟ್ಟ ಚಲಿಸುವ ತೊರೆ ಗದ್ದೆ ಸೀಳಿ
ತಾರಾಡುತ ಜೋಲಿ ನಡೆದು ಡಿಕ್ಕಿ ಹೊಡೆದು
ಕುಸಿಯುತ್ತಿದೆ ಸೋತು ಗಾಳಿ ಮೈಗೆ ಒರಗಿ

ಹೊಳ್ಳೆ ಬಿರಿಸುವಂತೆ ಬರುವ ಶಾಲಿಗಂಧ
ಇಡೀ ಸೃಷ್ಟಿ ಯಾರೋ ಬರೆದ ಚಿತ್ರಬಂಧ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಪರೂಪದ ಆಸ್ತಿ
Next post ಕಂದ ಬಾಬಾ ನಂದ ಬಾಬಾ

ಸಣ್ಣ ಕತೆ

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

cheap jordans|wholesale air max|wholesale jordans|wholesale jewelry|wholesale jerseys