Home / ಕವನ / ಕವಿತೆ / ಕಂದ ಬಾಬಾ ನಂದ ಬಾಬಾ

ಕಂದ ಬಾಬಾ ನಂದ ಬಾಬಾ

ಕಂದ ಬಾಬಾ ನಂದ ಬಾಬಾ
ಪುಟ್ಟ ಗಿಣಿಮರಿ ಸುಂದರಾ
ಓಡಿ ಬಾಬಾ ಕೈಯ ತಾತಾ
ಆತ್ಮಗುಬ್ಬಿಯ ಚಂದಿರಾ

ಕಲ್ಲುಸಕ್ಕರೆ ಮೆಲ್ಲುತಿರುವೆನು
ಕುಂಟ ಕಳ್ಳನೆ ಕಂದನೆ
ಎನ್ನ ಸೀರಿಯ ನಿರಿಗೆ ಮರೆಯಲಿ
ಮುಸುಡಿ ಮುಚ್ಚುವ ತುಂಟನೆ

ಎನ್ನ ಬಯಕೆಯ ನೂರು ಪಕಳಿಯ
ಬಿಚ್ಚಿ ನಿನ್ನನು ಹಡೆದನು
ಎನ್ನ ಹೆಣ್ತನವಾಯ್ತು ತಾಯ್ತನ
ಎದೆಯ ಹಾಲನು ಎರೆದೆನು

ನಾನು ಸುಂದರಿ ಎಂಬ ಮಾತೇ
ಮರೆತು ಹೋಯಿತು ಹುಟ್ಟಿನಿಂ
ನನ್ನ ಕೋಮಲ ಕುಚದ ಹಂಡೆಯು
ಎಡೆಯು ಆಯಿತು ಗುಟ್ಟಿನಿಂ

ನನ್ನ ಮಾಯದ ಗಂಡ ಎಳೆದಾ
ತುರುಬ ನೀನೀ ಕಟ್ಟಿದೆ
ನನ್ನ ಬಂಡನ ಗಂಡ ಗರುವನ
ಬೆಪ್ಪ ಕಪ್ಪೆಯ ಮಾಡಿದ

ಆ ನಾದಿನಿ ಭಾವ ಮೈದುನ
ಮಾವ ಮುಂಗುಲಿಯಾದರು
ಮನೆಗೆ ನೀನೇ ರಾಜತೇಜಾ
ನಿನ್ನ ಉಚ್ಚೆಯ ಬಳೆದರು

ಚೋಟು ಹುಡುಗಾ ಬೋಟು ಬೆಡಗಾ
ಏನು ಜೋರೋ ನಿನ್ನದು
ನೀನು ಅತ್ತರೆ ಮನೆಯ ಚತ್ತರಿ
ಗಿಮ್ಮಿ ಗಿರಿಗಿರಿ ಎನುವದು

ನೀನೆ ಬಿಂಗರಿ ನೀನೆ ಸಿಂಗರಿ
ನೀನೆ ಬೀಗರ ಬೀಗನೂ
ಕಡಬು ಹೋಳಿಗೆ ಉಂಡಿ ಚಕ್ಕುಲಿ
ತಟ್ಟಿ ಬುಟ್ಟಿಗೆ ಒಡೆಯನೊ

ಎಲ್ಲ ಖಾರಾ ಖೀರು ಪಾಯಸ
ಅಡುಗೆ ಮನೆಯೆ ನಿನ್ನದು
ನಾನು ಮಾಡಿದ ಮಾಯದಡುಗೆಯು
ಇನ್ನು ಮೀಸಲು ನಿನ್ನದು
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...