ಚೈತ್ರ

ಚೈತ್ರದಂಗಳದಲ್ಲಿ ನೀನು ಚೈತ್ರವಾಹಿನಿ
ನಿನ್ನ ನಿಲುವೇ ಜೀವನ ಋತು ದರ್‍ಶಿನಿ ಪಾವನ
ನಿತ್ಯ ನೂತನ ನವಚೇತನ ಕಿರಣ ನಿನಗೆ ನನ್ನ ನಮನ||

ತಾಯ ಬಸಿರ ಉಸಿರೆ ಹಸಿರ ಬಾಂದಳವೆ
ಶಂಗ ನೆಲೆಯ ಮಣಿವ ಸೆರೆಯ ಸಿರಿಯೆ
ಬಾಳ ಬಂಗಾರ ತಂದಾರ ಹಿಡಿ ಹೊನ್ನ
ಸೋಲ ಒಪ್ಪದಿರೂ ಕನವಿರಿಸದಿರೂ ಕನಸಾಗಿಹ
ನೆನಪುಗಳ ನವಚೇತನ ನಿನಗೆ ನನ್ನ ನಮನ||

ದಾನಿಯಾಗಿ ಮಾನಿಯಾಗು ಭೇದವಿಲ್ಲದೇ ಎನ್ನ
ಕಾಲವೆ ತಡೆಯದಿರು ಸ್ವಾರ್‍ಥದ ಕಟು ಸತ್ಯದ
ಹೊರಗೆ ನಿಲ್ಲಲಾರೆ ನಲಿವ ಗೆಲುವ ಕಾಣುವ
ಸಾಕಾರವಾಗಿಸು ಬಾಯಾರಿ ಬಂದ ಮನಕೆ ತಂಪ
ನೀಡಲೇ ಚೈತನ್ಯವೇ ನಿನಗೆ ನನ್ನ ನಮನ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಲಿಯುಗದ ಹರಿಶ್ಚಂದ್ರ ಅರ್ಥಾತ್ ಸಾಕ್ಷೀದಾರ
Next post ಗಳಿಕೆ

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…