Home / ಲೇಖನ / ವಿಜ್ಞಾನ / ಪರಿಸರ ಮತ್ತು ಸಸ್ಯಗಳು-ಪರಿಸರ ಮಾಲಿನ್ಯ ತಡೆಗಟ್ಟುವ ಸಸ್ಯಗಳು

ಪರಿಸರ ಮತ್ತು ಸಸ್ಯಗಳು-ಪರಿಸರ ಮಾಲಿನ್ಯ ತಡೆಗಟ್ಟುವ ಸಸ್ಯಗಳು

ಮರಗಿಡಗಳು ವಾತಾವರಣದಿಂದ ಇಂಗಾಲದ ಡೈ ಆಕ್ಸೈಡ್ ಹೀರಿಕೊಂಡು ಬದಲಿಗೆ ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಹೀಗಾಗಿ ಆರೋಗ್ಯದಾಯಕ ವಾತಾವರಣವನ್ನುಂಟುಮಾಡುತ್ತದೆ. ೫೦ ಟನ್ ತೂಕದ ಒಂದು ಮರ ವರ್ಷಕ್ಕೆ ೧ ಟನ್ ಆಮ್ಲಜನಕ ಬಿಡುಗಡೆಮಾಡುತ್ತದೆ. ಸಸ್ಯಗಳು ಆಮ್ಲಜನಕ ಉತ್ಪಾದಿಸುವ ಏಕೈಕ ಕಾರ್ಖಾನೆಗಳೆಂದು ಹೇಳಿದರೆ ತಪ್ಪಾಗಲಾರದು.

ಮರಗಳು ವಾತಾವರಣದಿಂದ ಹಾನಿಕಾರಕ ಅನಿಲಗಳನ್ನು, ಧೂಳಿನ ಕಣಗಳನ್ನು ಹಾಗೂ ಕಾರ್ಖಾನೆ ಬಾರಲೋಹ ಸಂಯುಕ್ತಗಳನ್ನೊಳಗೊಂಡ ತ್ಯಾಜ್ಯ ವಸ್ತುಗಳನ್ನು ಹೀರಿಕೊಳ್ಳುತ್ತವೆ.

ಕಾರ್ಖಾನೆಗಳು, ವಾಹನಗಳು ಮತ್ತಿತರ ಮೂಲಗಳಿಂದ ಉಂಟಾಗುವ ಶಬ್ದಮಾಲಿನ್ಯವನ್ನು ಸಾಧ್ಯವಾದಷ್ಟು ಕಡಿಮೆ ಮಾಡುವದರ ಮೂಲಕ ಪರಿಸರ ಗುಣಮಟ್ಟವನ್ನು ಕಾಪಾಡುತ್ತವೆ. ಸಣ್ಣ ಮತ್ತು ಮಧ್ಯಮ ಗಾತ್ರದ ಪೊದರುಗಳನ್ನು ಒಳಗೊಂಡ ಕಾಡು ೨೦ ರಿಂದ ೩೦ ಡೆಸಿಬಲ್-ನಷ್ಟು ಶಬ್ದಮಾಲಿನ್ಯ ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ. ಲಕ್ನೊ, ನಾಗಪುರಗಳ ಸಂಶೋಧನಾ ಕೇಂದ್ರಗಳಲ್ಲಿ ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಮುಂತಾದ ಕಡೆಗಳಲ್ಲಿ ಪರಿಸರ ಮಾಲಿನ್ಯ ತಡೆಗಟ್ಟುವ ಮರಗಳ ಕುರಿತು ಅಧ್ಯಯನ ನಡೆಯುತ್ತಿದೆ. ಈಗಾಗಲೇ ಕೆಲವು ಸತ್ಯಾಂಶಗಳು ಹೊರಬಿದ್ದಿವೆ. ಅಂತಹ ಮರಗಳ ಕುರಿತು ಇಲ್ಲಿ ಚರ್ಚಿಸೋಣ.

ವಾಯುಮಾಲಿನ್ಯ

ಹೆಚ್ಚು ಕೊಂಬೆಗಳನ್ನು ಹೊಂದಿರುವ, ದಟ್ಟವಾಗಿ ಅಗಲವಾಗಿ ಹರಡಿಕೊಳ್ಳುವ ಎಲೆಗಳ ಗಿಡಗಳು ವಾಯುಮಾಲಿನ್ಯ ತಾಳಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಸಿರಸ್ವ, ಹೆಬ್ಬೇವು, ಜಂತಾಲಮರ, ಬೇವು, ಅರಳೆ, ಹೊಳೆದಾಸವಾಳ, ಪಗಡೆಮರ, ಅಶೋಕ, ಅರ್ಜುನ, ಮಾಪಲ್ ಜಾತಿಯ ಮರ, ಓಕ್ ಜಾತಿಯ ಮರಗಳು ಸಲ್ಫರ್ ಡೈ ಆಕ್ಸೈಡ್ ತಾಳಿಕೊಳ್ಳುವ ಸಾಮರ್ಥ್ಯ ಹೊಂದಿವೆ.

ಸೀಮೆತಂಗಡಿ, ಬೋರೆಹಣ್ಣಿನ ಮರಗಳು – ಸೀಸ ತಾಳಿಕೊಳ್ಳುವ ಮತ್ತು ರೋಬೆನಿಯ, ಸಂಬುಕಸ್, ಉಲ್ನಸ್ ಫಾಗಸ್, ಓಕ್ ಜಾತಿಯ ಮರಗಳು ಸಾರಜನಕದ ಆಕ್ಸೈಡ್ ತಾಳಿಕೊಳ್ಳುವ ಶಕ್ತಿ ಪಡೆದಿವೆ. ಮಾಪಲ್ ಮತ್ತು ಓಕ್ ಜಾತಿಯ ಮರಗಳು ಓಜ಼ೋನ್ ಮತು ಪೆರಾಕ್ಸಿ ಅಸಿಟಾಟ್ ನೈಟ್ರೇಟ್ ತಡೆಗಟ್ಟಿದರೆ, ಹೆಬ್ಬೇವು ಮತ್ತು ಬೋರೆಹಣ್ಣಿನ ಮರ ಹೈಡ್ರೋಜನ್ ಫ್ಲೊರೈಡ್ ತಾಳಿಕೊಳ್ಳಬಲ್ಲವು.

ಜಂತಾಲ ಜಾತಿಯ ಮರ, ಸೀಮೆತಂಗಡಿ, ದಲಬರ್ಜಿಯ, ಆಲ, ಬಸರಿ, ಮಾವಿನ ಮರ, ಹಳದ ಗುಲ್ಮೋರ, ಬೇವು, ಅಶ್ವಕರ್ಣ, ನೇರಳೆ, ಸಾಗುವಾನಿ, ರಾಯಿ, ಅಶೋಕಾ ಅಲ್ನಸ್, ಸಾಲಿಕ್ಸ್, ಬ್ರಯಾ ಮರಗಳು ಧೂಳನ್ನು ದೊರೀಕರಿಸುವ ಸಾಮರ್ಥ್ಯ ಹೊಂದಿವೆ.

ಶಬ್ದ ಮಾಲಿನ್ಯ

ದಪ್ಪನಾದ ಕಾಂಡ ಮತ್ತು ಕವಲುಗಳನ್ನು ಹೊಂದಿರುವ ಮರಗಳು ಶಬ್ದದ ಕಂಪನಗಳನ್ನು ವಕ್ರೀಕರಿಸುತವೆ. ದಪ್ಪ ಮತ್ತು ಮಾಂಸ ಎಲೆಗಳ ಎಲೆತೊಟ್ಟು ನಮ್ಯವಾಗಿದ್ದು ಕಂಪನಗಳನ್ನು ತಡೆದುಕೊಳ್ಳಬಲ್ಲವು. ಜಂತಾಲ ಜಾತಿಯ ಮರ ಬೇವು ಮುತ್ತುಗ, ಮುಳ್ಳು ಮುತ್ತುಗ, ಸಿಲ್ವರ್ ಓಕ್, ಕನಕ ಚಂಪಾ, ಹುಣಸೆಮರ, ಅರ್ಜನ, ಮಾಪಲ್ ಜಾತಿಯ ಮರ, ಅಲ್ನ, ಬೆಟುಲಾ, ಜುನಿಪೆರಸ್, ಪೊಪಲಾರ, ವಿಬುರನಮ್ ಮರಗಳು ಶಬ್ದಮಾಲಿನ್ಯ ತಾಳಿಕೊಳ್ಳುವ ಸಾಮರ್ಥ್ಯ ಹೊಂದಿವೆ.

ನೆಡುವಿಕೆ

ಧೂಳುಮಾಲಿನ್ಯ ದೂರವಿರಿಸಲು ರಸ್ತೆ ಮತ್ತು ಕಟ್ಟಡಗಳ ನಡುವಿನ ಜಾಗದಲ್ಲಿ ಸುಮಾರು ೮ ಮೀ. ಉದ್ದದ ಹಸಿರುಪಟ್ಟಿಯ ೨ ರಿಂದ ೩ ಪಟ್ಟು ಧೂಳು ದೂರೀಕರಿಸುತ್ತವೆ. ಶಂಕುವೃಕ್ಷಗಳು ೪೨% ಧೂಳನ್ನು ನುಂಗಬಲ್ಲವು.

ಶಬ್ದಮಾಲಿನ್ಯ ದೂರಮಾಡಲು, ವಾಹನಗಳ ವೇಗಮಿತಿಯ ಆಧಾರದ ಮೇಲೆ ವಿವಿಧ ಮಾದರಿಯಲ್ಲಿ ಗಿಡಗಳನ್ನು ನೆಡಬೆಕು.

ಅತಿ ಹೆಚ್ಚು ವಾಹನಗಳ ಸಂದಣಿಯಲ್ಲಿ ಟ್ರಾಫಿಕ್ ನಿಂದ ೧೫ ರಿಂದ ೨೭ ಮೀ. ದೂರದಲ್ಲಿ, ೧೮ ರಿಂದ ೩೦ ಮೀ. ಎತ್ತರದ ಹಸಿರು ಪಟ್ಟಿಯನ್ನು ಹಾಗೂ ರಸ್ತೆಯ ನಡುವಿನ ಜಾಗದಲ್ಲಿ ೧೩.೫ ಮೀ ಎತ್ತರದ ಹಸಿರು ಪಟ್ಟಿಯು ಶಬ್ದಮಾಲಿನ್ಯವನ್ನು ನುಂಗಬಲ್ಲದು. ಸಾಮಾನ್ಯ ವೇಗಮಿತಿಯಲ್ಲಿ ಓಡಾಡುವ ವಾಹನಗಳ ಸ್ಥಳದಿಂದ ೬ ರಿಂದ ೧೫ ಮೀ. ದೂರದಲ್ಲಿ, ೬ ರಿಂದ ೧೫ ಮೀ. ಅಗಲದ ಹಸಿರುಪಟ್ಟಿ, ಟ್ರಾಫಿಕ್ ಪಕ್ಕದಲ್ಲಿ ೧.೮ ರಿಂದ ೪ ಮೀ. ಎತ್ತರ ಬೆಳೆಯಬಲ್ಲ ಪೊದೆಗಿಡಗಳನ್ನು ನೆಡಬೇಕು. ಅವುಗಳ ಹಿಂದೆ ೪.೫ ರಿಂದ ೯ ಮೀ. ಎತ್ತರದ ಗಿಡಗಳ ಸಾಲು ನೆಡಬೇಕು.

ಜಲಮಾಲಿನ್ಯ

ಕೆಲವು ಸಸ್ಯಗಳು ಕೈಗಾರಿಕಾ ಮತ್ತು ಗೄಹಬಳಕೆಯ ತ್ಯಾಜ್ಯವಸ್ತುಗಳಿಂದಾದ ಜಲಮಾಲಿನ್ಯವನ್ನು ನಿವಾರಿಸಬಲ್ಲವೆಂದು ತಿಳಿದುಬಂದಿದೆ. ಅಂತಹ ಸಸ್ಯಗಳಲ್ಲಿ ಒಂದಾದ ಅಂತರಗಂಗೆ ಸಸ್ಯವು ತಾಮ್ರ, ಕ್ಯಾಡ್ಮಿಯಂ, ನಿಕ್ಕಲ್, ಸೀಸ, ಪಾದರಸಗಳಂತಹ ಆರೋಗ್ಯಕ್ಕೆ ಮಾರಕವಾಗಿರುವ ಭಾರಲೋಹಗಳನ್ನು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿದೆ.

ಐರಿಸ್ ಮತ್ತು ಬುಲ್ರಷ್ ಸಸ್ಯಗಳು ಕೀಟನಾಶಕಗಳಿಂದ ಜಲಮಾಲಿನ್ಯವನ್ನು ತಡೆಗಟ್ಟುವದಲ್ಲದೇ ಅಲ್ಲಿ ಬೆಳೆಯುವ ಕಳೆಗಳನ್ನು ತೊಡೆದುಹಾಕಬಲ್ಲವೆಂದು “ನ್ಯೂ ಸೈಂಟಿಸ್ಟ್” ವರದಿ ಮಾಡಿದೆ.
*****

 

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...