Home / ಲೇಖನ / ವಿಜ್ಞಾನ / ಅಪಾಯಗಳಿಗೆ ಮುನ್ಸೂಚನೆ ನೀಡುವ ಪ್ರಾಣಿಲೋಕ!

ಅಪಾಯಗಳಿಗೆ ಮುನ್ಸೂಚನೆ ನೀಡುವ ಪ್ರಾಣಿಲೋಕ!

ಇದ್ದಕ್ಕಿದ್ದಂತೆ ನೈಸರ್‍ಗಿಕ ವಿಕೋಪಗಳಾಗಿ ಸಾವಿರಾರು ಜನ ಸತ್ತುಹೋದರು. ನೂರಾರು ಜನ ಭೂಕಂಪದಲ್ಲಿ ಮಡಿದರು, ಸಮುದ್ರ ಬಿರುಗಾಳಿಯಿಂದ ನೌಕೆಗಳು ಅಪ್ಪಳಿಸಿದವು! ಮುಂತಾದ ವರದಿಗಳನ್ನು ನೋಡುತ್ತೇವೆ. ಇದೆಲ್ಲ ಅನಿರಿಕ್ಷಿತ ಮತ್ತು ಇದ್ವಕ್ಕಿದ್ದಂತೆ ಆಕ್ರಮಿಸಿಕೊಂಡ ಆಘಾತವೆಂದು ಅಂದು ಕೊಳ್ಳುತ್ತವೆ. ಆದರೆ ಇಂಥಹ ಅಪಾಯಗಳನ್ನು ಮುಂಚಿತವಾಗಿಯೇ ಮನಗಂಡ ಅನೇಕ ಪಕ್ಷಿ ಪ್ರಾಣಿಗಳು ನಮಗೆ ಅನೇಕ ಸೂಚನೆಗಳನ್ನು ನೀಡುತ್ತವೆ. ನಾವು ಗಮನಿಸುವುದೇ ಇಲ್ಲ. ಈಗ ನೋಡಿ ಪ್ರಾಣಿ, ಪಕ್ಷಿ, ಜಲಚರಗಳು ಅಪಾಯಗಳ ಮುನ್ಸೂಚನೆಯನ್ನು ಹೀಗೆ ನೀಡುತ್ತದೆ. (ವೈಜ್ಞಾನಿಕವಾಗಿ ಕಂಡು ಹಿಡಿಯಲಾಗಿದೆ.) ಹಾವು ಮತ್ತು ಇಲಿಗಳು ತಮ್ಮ ಬಿಲಗಳನ್ನು ಬಿಟ್ಟು ದಿಕ್ಕೆಟ್ಟು ಓಡುತ್ತವೆ. ಮೀನುಗಳು ನೀರಿನಿಂದ ಹಾರುತ್ತವೆ. ಆಕ್ವೇರಿಯಂ ಮೀನುಗಳು ಡಿಕ್ಕಿ ಹೊಡೆಯುತ್ತವೆ. ಆಮೆಗಳು ಪಲ್ಟಿ ಹೊಡೆಯುತ್ತ ಧಾವಿಸುತ್ತದೆ. ದನ, ಕರು, ಕುರಿ, ಮತ್ತು ಕುದುರೆಗಳು ತಾವು ಇರುವ ಸ್ಥಳಕ್ಕೆ ಹೋಗುವದಿಲ್ಲ, ಕೋಳಿಮರಿಗಳು ಗಿಡ ಏರುತ್ತವೆ. ಬಾತು ಕೋಳಿಗಳು ನೀರಿಗೆ ಹೋಗಲು ನಿರಾಕರಿಸುತ್ತವೆ. ನಾಯಿಗಳು ವಿನಾಕಾರಣ ಬೊಗಳುತ್ತವೆ, ಹಂದಿಗಳು ಪರಸ್ಪರ ಕಚ್ಚಾಡುತ್ತವೆ. ಜಿಂಕೆಗಳು ದಿಕ್ಕೆಟ್ಟು ಓಡುತ್ತವೆ ಮತ್ತು ಜಿರಳೆಗಳು ವೃತ್ತಾಕಾರವಾಗಿ ಸುತ್ತುತ್ತವೆ. ಇದೆಲ್ಲ ಕ್ರಿಯೆ ನಡೆಯುವದು ಭೂಕಂಪದ ಮುನ್ಸೂಚನೆಯನ್ನು ತಿಳಿಸುತ್ತದೆ. ಜ್ವಾಲಾಮುಖಿ, ಬಿರುಗಾಳಿ, ಅಥವಾ ನೈಸರ್‍ಗಿಕ ವಿಕೋಪಗಳಾದರೆ, ಜೆಲ್ಲಿ ಮೀನು ೧೦-೧೫ ಗಂಟೆಗಳ ಮೊದಲೇ ಬಿರುಗಾಳಿಯ ಮುನ್ಸೂಚನ ಅರಿಯುತ್ತದೆ. ಆದ್ದರಿಂದ ಸಮುದ್ರ ದಂಡೆಯಿಂದ ಸಮುದ್ರದಾಳಕ್ಕೆ ಹೋಗುತ್ತದೆ. ಕೇಡುಗಾಲ ಬಂದಾಗ ಅದನ್ನರಿತ ಮೀನು ಸಮುದ್ರದಾಳದ ಮೀನು ನೀರಿನ ಮೇಲೆ ಬರುತ್ತದೆ. ಆರ್‍ಕ್ಟಿಕ್ ಪ್ರದೇಶದಲ್ಲಿ ವಾಸಿಸುವ ಟಾರಾಮಿಗಾನ್ ಎಂಬ ಹಕ್ಕಿಯನ್ನು ಪಕ್ಷಿ ಸಂಕುಲದ ಜೋತಿಷಿ ಎಂದೇ ಗುರುತಿಸಲಾಗುತ್ತದೆ. ಏಕೆಂದರೆ ತನ್ನ ಪರಿಸರದಲ್ಲಿ ಮುಂದೆ ಆಗಲಿರುವ ಬದಲಾವಣೆಗಳನ್ನು ಗುರುತಿಸುತ್ತದೆ. ವೈಪರಿತ್ಯವಾದ ಸೂಚನೆಗಳೆನಾದರೂ ತಿಳಿದರೆ ಅಲ್ಲಿಂದ ಜಾಗ ಖಾಲಿಮಾಡಿ ಬಿಡುತ್ತವೆ.
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...