Home / ಲೇಖನ / ವಿಜ್ಞಾನ / ತಂತಿ ರಹಿತ ಟೆಲಿಫೋನಗಳು

ತಂತಿ ರಹಿತ ಟೆಲಿಫೋನಗಳು

ಇಂದಿನ ಕಾಲಮಾನದಲ್ಲಿ ಕಾರ್ಡ್‌ಲೆಸ್ ಫೋನ್‌ಗಳು ಸರ್ವೆಸಾಮಾನ್ಯವಾಗಿವೆ ಮತ್ತು ಅಷ್ಟೇನು ಜನಸಾಮಾನ್ಯರ ಸಂಪರ್ಕ ಸಾಧ್ಯವಾಗಿಲ್ಲ. ಇಂಥಹ ತಂತಿ ರಹಿತ ಫೋನ್‌ಗಳನ್ನು ಜಾಗತಿಕ ಮಟ್ಟದಲ್ಲಿ ಸಂಪರ್ಕ ಸಾಧನವನ್ನಾಗಿ ಮಾಡಲು ಅಸಂಖ್ಯಾತವಾಗಿ ನಿರ್‍ಮಾಣ ಮಾಡಲಾಗುತ್ತದೆ.

ಅಮೇರಿಕಾ ವ್ಯಾಂಡನ್‌ಬಗ್ ವಾಯುದಳದ ನೆಲೆಯಿಂದ ಡೆಲ್ಟಾ-೨ ಉಡಾವಣಾ ನೌಕೆಯಿಂದ ಹಾರಿಸಲಾದ ಐದು ಹೊಸ ಉಪಗ್ರಹಗಳಿಂದ ಇದು ಕೆಳಮಟ್ಟದ ಭೂಕಕ್ಷೆಯಲ್ಲಿ ಇರುವ ಇನ್ನಿತರ ಉಪಗ್ರಹದೊಂದಿಗೆ ಸೇರಿಕೊಂಡು ಇವು ‘ಐರಿಡಿಯಂ’ ಎಂಬ ಜಾಗತಿಕ ಸಂಪರ್ಕ ಜಾಲವನ್ನು ನಿರ್ಮಿಸುತ್ತವೆ. ಈ ವ್ಯವಸ್ಥೆಯಿಂದಾಗಿ ಯಾರಾದರೂ ಯಾವ ಸಮಯಕ್ಕಾದರೂ ಜಗತ್ತಿನ ಯಾವ ಮೂಲೆಯೇ ಇರಲಿ, ಟೆಲಿಫೋನ್ ಅಥವಾ ಪೇಜರ್‌ನೊಡನೆ ಸಂಪರ್ಕ ಸಾಧಿಸಬಹುದಾಗಿದೆ. ಇದು ೧೯೯೮ ರ ಸೆಪ್ಟೆಂಬರ್‍ನಿಂದ ಕಾರ್ಯರೂಪಕ್ಕೆ ಬಂದಿದೆ. ‘ಮೋಟೊರೋಲಾ’ ಮತ್ತು ಇತರ ಅನೇಕ ಖಾಸಗಿ ಕಂಪನಿಗಳ ಜಂಟಿ ಯೋಜನೆಯಿಂದ ಇದರ ನಿರ್ಮಾಣವಾಗುತ್ತದೆ. ‘ಐರಿಡಿಯಂ’ ವ್ಯವಸ್ಥೆಯಲ್ಲಿ ೬೬ ಗ್ರಹಗಳಿವೆ. ಅವು ವಿವಿಧ ಆರು ಕಕ್ಷಾಪಾತಗಳಲ್ಲಿ ಭೂಮಿಯನ್ನು ಸುತ್ತುತ್ತ ಪರಸ್ಪರ ಸಂಪರ್ಕ ಹೊಂದುತ್ತವೆ. ಈ ಜಾಲವು ಇನ್ನು ಕೆಲವೇ ವರ್ಷಗಳಲ್ಲಿ ಜಗತ್ತನ್ನು ಆವರಿಸುತ್ತವೆ.

ಆಗ ಜಗತ್ತು ಮುಷ್ಠಿಯೊಳಗೆ, ಎಂಬಂತಾಗಿ ಯಾವ ತಂತಿಯ ಸಂಪರ್ಕವಿಲ್ಲದೇ ಎಲ್ಲೆಂದರಲ್ಲಿಗೆ ಫೋನಾಯಿಸಿ ಜಗತ್ತಿನ ವಿದ್ಯಮಾನಗಳನ್ನು ತಿಳಿದುಕೊಳ್ಳಬಹುದು. ಸಂವಹನ ಮಾಧ್ಯಮದಲ್ಲಿ ಇದು ಉತ್ಕೃಷ್ಟ ಸಾಧನವೆಂದು ಹೇಳಲಾಗಿದೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...