Home / ಲೇಖನ / ವಿಜ್ಞಾನ / ತಂತಿ ರಹಿತ ಟೆಲಿಫೋನಗಳು

ತಂತಿ ರಹಿತ ಟೆಲಿಫೋನಗಳು

ಇಂದಿನ ಕಾಲಮಾನದಲ್ಲಿ ಕಾರ್ಡ್‌ಲೆಸ್ ಫೋನ್‌ಗಳು ಸರ್ವೆಸಾಮಾನ್ಯವಾಗಿವೆ ಮತ್ತು ಅಷ್ಟೇನು ಜನಸಾಮಾನ್ಯರ ಸಂಪರ್ಕ ಸಾಧ್ಯವಾಗಿಲ್ಲ. ಇಂಥಹ ತಂತಿ ರಹಿತ ಫೋನ್‌ಗಳನ್ನು ಜಾಗತಿಕ ಮಟ್ಟದಲ್ಲಿ ಸಂಪರ್ಕ ಸಾಧನವನ್ನಾಗಿ ಮಾಡಲು ಅಸಂಖ್ಯಾತವಾಗಿ ನಿರ್‍ಮಾಣ ಮಾಡಲಾಗುತ್ತದೆ.

ಅಮೇರಿಕಾ ವ್ಯಾಂಡನ್‌ಬಗ್ ವಾಯುದಳದ ನೆಲೆಯಿಂದ ಡೆಲ್ಟಾ-೨ ಉಡಾವಣಾ ನೌಕೆಯಿಂದ ಹಾರಿಸಲಾದ ಐದು ಹೊಸ ಉಪಗ್ರಹಗಳಿಂದ ಇದು ಕೆಳಮಟ್ಟದ ಭೂಕಕ್ಷೆಯಲ್ಲಿ ಇರುವ ಇನ್ನಿತರ ಉಪಗ್ರಹದೊಂದಿಗೆ ಸೇರಿಕೊಂಡು ಇವು ‘ಐರಿಡಿಯಂ’ ಎಂಬ ಜಾಗತಿಕ ಸಂಪರ್ಕ ಜಾಲವನ್ನು ನಿರ್ಮಿಸುತ್ತವೆ. ಈ ವ್ಯವಸ್ಥೆಯಿಂದಾಗಿ ಯಾರಾದರೂ ಯಾವ ಸಮಯಕ್ಕಾದರೂ ಜಗತ್ತಿನ ಯಾವ ಮೂಲೆಯೇ ಇರಲಿ, ಟೆಲಿಫೋನ್ ಅಥವಾ ಪೇಜರ್‌ನೊಡನೆ ಸಂಪರ್ಕ ಸಾಧಿಸಬಹುದಾಗಿದೆ. ಇದು ೧೯೯೮ ರ ಸೆಪ್ಟೆಂಬರ್‍ನಿಂದ ಕಾರ್ಯರೂಪಕ್ಕೆ ಬಂದಿದೆ. ‘ಮೋಟೊರೋಲಾ’ ಮತ್ತು ಇತರ ಅನೇಕ ಖಾಸಗಿ ಕಂಪನಿಗಳ ಜಂಟಿ ಯೋಜನೆಯಿಂದ ಇದರ ನಿರ್ಮಾಣವಾಗುತ್ತದೆ. ‘ಐರಿಡಿಯಂ’ ವ್ಯವಸ್ಥೆಯಲ್ಲಿ ೬೬ ಗ್ರಹಗಳಿವೆ. ಅವು ವಿವಿಧ ಆರು ಕಕ್ಷಾಪಾತಗಳಲ್ಲಿ ಭೂಮಿಯನ್ನು ಸುತ್ತುತ್ತ ಪರಸ್ಪರ ಸಂಪರ್ಕ ಹೊಂದುತ್ತವೆ. ಈ ಜಾಲವು ಇನ್ನು ಕೆಲವೇ ವರ್ಷಗಳಲ್ಲಿ ಜಗತ್ತನ್ನು ಆವರಿಸುತ್ತವೆ.

ಆಗ ಜಗತ್ತು ಮುಷ್ಠಿಯೊಳಗೆ, ಎಂಬಂತಾಗಿ ಯಾವ ತಂತಿಯ ಸಂಪರ್ಕವಿಲ್ಲದೇ ಎಲ್ಲೆಂದರಲ್ಲಿಗೆ ಫೋನಾಯಿಸಿ ಜಗತ್ತಿನ ವಿದ್ಯಮಾನಗಳನ್ನು ತಿಳಿದುಕೊಳ್ಳಬಹುದು. ಸಂವಹನ ಮಾಧ್ಯಮದಲ್ಲಿ ಇದು ಉತ್ಕೃಷ್ಟ ಸಾಧನವೆಂದು ಹೇಳಲಾಗಿದೆ.
*****

Tagged:

Leave a Reply

Your email address will not be published. Required fields are marked *

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...