Home / ಲೇಖನ / ವಿಜ್ಞಾನ / ಕ್ರಿಮಿನಾಶಕಗಳು ನೆಲವನ್ನು ಜನವನ್ನು ಕೊಲ್ಲುತ್ತವೆ

ಕ್ರಿಮಿನಾಶಕಗಳು ನೆಲವನ್ನು ಜನವನ್ನು ಕೊಲ್ಲುತ್ತವೆ

ಇತ್ತೀಚಿನ ದಿನಗಳಲ್ಲಿ ಹೊಲಗದ್ದೆ ತೋಟಗಳಲ್ಲಿ ಬೆಳೆಯುವ ಬೆಳೆಗಳಿಗೆ ಏನೆಲ್ಲ ಜಾಡ್ಯಗಳು ತಗುಲಿಕೊಂಡು ಪೈರನ್ನು ನಾಶಪಡಿಸುತ್ತಿರುವುದು ಸರ್ವ ವೇದ್ಯ. ಈ ಬೆಳೆಗಳಿಗೆ ತಗುಲವ ಕೀಟಗಳ ಭಾದೆಗಳಿಂದ ಬೆಳೆಗಳನ್ನು ರಕ್ಷಿಸಲು ನಮ್ಮದೇಶಿ ಔಷಧಿಗಳು ಬೇಕಾದಷ್ಟು ಇದ್ದರೂ ಕೇವಾ ಸಮೃದ್ಧಿ ಮತ್ತು ಪ್ರತಿಷ್ಟೆಯಿಂದಾಗಿ ಬಹುರಾಷ್ಟ್ರೀಯ ಕಂಪನಿಗಳಿಂದ ತಯಾರಾದ ನಿಧಾನ ವಿಷಯುಕ್ತ ಔಷಧಿಯನ್ನು ಬಳೆಸುವುದರಲ್ಲಿ ಇತ್ತೀಚೆಗೆ ನಮ್ಮ ರೈತರು ದಾಪುಗಾಲು ಹಾಕುತ್ತಿದ್ದಾರೆ. ಕೇವಲ ಫಸಲನ್ನು ಹೆಚ್ಚು ಪಡಿಯುದರಲ್ಲಿ ಗಮನ ಹರಿಸಿದ್ದು ಭವಿಷ್ಯತ್ತಿನಲ್ಲಿ ಬೆಳೆ ಬೆಳೆಯುವ ಭೂಮಿಯೇ ಬಂಜರು ಆಗುತ್ತದೆಂಬ ಕಲ್ಪನೆ ಕೂಡ ಇರುವುದಿಲ್ಲ. ಶತಮಾನಗಳ ಅನುಭವ ಮತ್ತು ಜ್ಞಾನಗಳಿಂದ ರೂಪಿತಗೊಂಡ ಸಾಂಪ್ರದಾಯಿಕ ಸ್ವಾಭಾವಿಕ ಬೇಸಾಯ ಪದ್ಧತಿಗಳಿಂದ ಬಹುಮುಂದೆ ಓಡುತ್ತಿದ್ದಾನೆ ರೈತ ಪರಂಪರೆಗಳ ಮೌಲ್ಯಗಳಿಗೆ ತಿಲಾಂಜಲಿ ಇಕ್ಕಿದಾನೆ.

ಅತಿಬೇಗನೆ ಪರಿಣಾಮ ಬೀರುವ ರಾಸಾಯನಿಕ ಗೊಬ್ಬರಗಳು, ಔಷಧಗಳು ಅಸ್ವಾಭಾವಿಕ ತಳಿಗಳಿಂದಾಗಿ ತಲೆಮಾರುಗಳಿಂದ ಪರಿಪೂರ್ಣತೆ ಸಾಧಿಸಿದ ಕೃಷಿಪದ್ದತಿಗಳು, ತಳಿ ವೈವಿಧ್ಯತೆಗಳು ಇಂದು ಕಾಣದಂತಾಗಿವೆ. ಅತಿಯಾದ ರಸಗೊಬ್ಬರಗಳನ್ನು ಸಿಂಪಡಿಸುವುದರಿಂದ ಫಲಪ್ರದವಾದ ಭೂಮಿ ಪ್ರದೇಶವೆಲ್ಲ ಜಾಳು, ಕ್ಷಾರಗಳಿಲ್ಲದೇ ಹುಳಿ ಮಣ್ಣಾಗಿ ಪರಿವರ್ತನೆಗೊಂಡು ಕೃಷಿಗೆ ಅನುಕೂಲವಾದ ನೆಲ ಬರಡಾಗುತ್ತದೆ. ಬಂಜರವಾಗುತ್ತದೆ. ವರ್ಷಾನುಗಳಿಂದ ಸತತವಾಗಿ ಕೇವಲ ಪ್ರಧಾನ ಪೋಷಕಗಳ ಬಳಕೆಯಿಂದಾಗಿ ಭೂಮಿಯ ಸತ್ವವೆಲ್ಲ ಖಾಲಿಯಾಗಿ ಹೋಗಿದೆ. ಅಸಮತೋಲನ ರಾಸಾಯನಿಕಗಳ ಬಳಕೆಯಿಂದಾಗಿ ಬೆಳೆಯ ಪ್ರತಿರೋಧಕತೆ ಬಲಹೀನಗೊಂಡು ಆಹಾರದ ಪ್ರಮಾಣ ಮತ್ತು ಗುಣಮಟ್ಟದ ನಷ್ಟದಲ್ಲಿ ರೈತ ಇಂದು ಬಳಲುತ್ತಿದ್ದಾನೆ. ಮಣ್ಣಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಗಳು ಊಹಿಸಲಾರದಷ್ಟು ಬದಲಾಗಿದ್ದು ನೈಸರ್ಗಿಕ ಸಾರಜನಕ ಸ್ಥೀರಿಕರಣ ಕ್ರಿಯೆ ಚಿಂದಿಯಾಗಿದೆ. ಪರಿಸರದ ಹಲವು ಸ್ವಾಭಾವಿಕ ಚಕ್ರಗಳು ಸಮರಸಗೊಳ್ಳುವಲ್ಲಿ ವಿಫಲವಾಗಿವೆ. ಕೃಷಿಯಲ್ಲಿನ ಜೀವ ವೈವಿಧ್ಯ ನಶಿಸಿ ಹೋಗಿದೆ. ಈ ರಸಗೊಬ್ಬರಗಳ ಪ್ರಭಾವದಿಂದಾಗಿ ಮಣ್ಣಿನ ಸಾವಯವ ವಸ್ತುಗಳು ಕ್ಷೀಣಿಸುವುದರ ಜತೆಗೆ ಜೈವಿಕ ಗುಣಗಳು ನಾಶಗೊಳ್ಳುತ್ತಿವೆ. ಆಮ್ಲಜನಕ ಮತ್ತು ತೇವಾಂಶ ಧಾರಣಶಕ್ತಿ ಕುಂದುತ್ತದೆ. ಅಂತರ್ಜಲ ಮಟ್ಟ ಕುಸಿಯುತ್ತದೆ. ಹಲವು ರಾಸಾಯನಿಕಗಳು ಬೆಳೆಯಿಂದ ಕೆಳಗೆ ಬಿದ್ದು ಹೆಚ್ಚಾಗಿ ಮಣ್ಣನ್ನು ಸೇರುವ ಸಂಭವವಿರುತ್ತದೆ. ಇವು ಮಣ್ಣಿನೊಳಗೆ ಇದ್ದು ಕೆಲವೊಮ್ಮೆ ಆಹಾರ ಸರಪಳಿಗೆ ಸೇರಿದ ಉದಾಹರಣೆಗಳು ಇಲ್ಲದಿಲ್ಲ. ಸಂಪೂರ್ಣ ಬೆಳೆಯ ರೋಗಗಳಿಗೆ ಬೀಳದೆ ಇರುವ D.D.T. ಯು ತಾಯಿಯ ಎದೆಹಾಲಿನಲ್ಲೂ ಕಾಣಿಸಿಕೊಳ್ಳಬಹುದು. ಶಿಶು ಮತ್ತು ಪಶು ಆರೋಗ್ಯದ ಮೇಲೆ ನೀರಿನಲ್ಲಿ ಬೆರೆತ ನೈಟ್ರೈಟ್, ವಿಷಯುಕ್ತತೆಗಳ ಪರಿಣಾಮಗಳ ಹಲವಾರು ಪ್ರದೇಶಗಳಿಂದ ದಾಖಲಾಗಿವೆ. ಮಾನವ, ಭೂಮಿ ಪರಿಸರದ ನಡುವೆ ಇರುವ ಸರಪಳಿಯ ಬಿಚ್ಚುವ ಕಾಲದೂರವಿಲ್ಲ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...