ಕ್ರಿಮಿನಾಶಕಗಳು ನೆಲವನ್ನು ಜನವನ್ನು ಕೊಲ್ಲುತ್ತವೆ

ಕ್ರಿಮಿನಾಶಕಗಳು ನೆಲವನ್ನು ಜನವನ್ನು ಕೊಲ್ಲುತ್ತವೆ

ಇತ್ತೀಚಿನ ದಿನಗಳಲ್ಲಿ ಹೊಲಗದ್ದೆ ತೋಟಗಳಲ್ಲಿ ಬೆಳೆಯುವ ಬೆಳೆಗಳಿಗೆ ಏನೆಲ್ಲ ಜಾಡ್ಯಗಳು ತಗುಲಿಕೊಂಡು ಪೈರನ್ನು ನಾಶಪಡಿಸುತ್ತಿರುವುದು ಸರ್ವ ವೇದ್ಯ. ಈ ಬೆಳೆಗಳಿಗೆ ತಗುಲವ ಕೀಟಗಳ ಭಾದೆಗಳಿಂದ ಬೆಳೆಗಳನ್ನು ರಕ್ಷಿಸಲು ನಮ್ಮದೇಶಿ ಔಷಧಿಗಳು ಬೇಕಾದಷ್ಟು ಇದ್ದರೂ ಕೇವಾ ಸಮೃದ್ಧಿ ಮತ್ತು ಪ್ರತಿಷ್ಟೆಯಿಂದಾಗಿ ಬಹುರಾಷ್ಟ್ರೀಯ ಕಂಪನಿಗಳಿಂದ ತಯಾರಾದ ನಿಧಾನ ವಿಷಯುಕ್ತ ಔಷಧಿಯನ್ನು ಬಳೆಸುವುದರಲ್ಲಿ ಇತ್ತೀಚೆಗೆ ನಮ್ಮ ರೈತರು ದಾಪುಗಾಲು ಹಾಕುತ್ತಿದ್ದಾರೆ. ಕೇವಲ ಫಸಲನ್ನು ಹೆಚ್ಚು ಪಡಿಯುದರಲ್ಲಿ ಗಮನ ಹರಿಸಿದ್ದು ಭವಿಷ್ಯತ್ತಿನಲ್ಲಿ ಬೆಳೆ ಬೆಳೆಯುವ ಭೂಮಿಯೇ ಬಂಜರು ಆಗುತ್ತದೆಂಬ ಕಲ್ಪನೆ ಕೂಡ ಇರುವುದಿಲ್ಲ. ಶತಮಾನಗಳ ಅನುಭವ ಮತ್ತು ಜ್ಞಾನಗಳಿಂದ ರೂಪಿತಗೊಂಡ ಸಾಂಪ್ರದಾಯಿಕ ಸ್ವಾಭಾವಿಕ ಬೇಸಾಯ ಪದ್ಧತಿಗಳಿಂದ ಬಹುಮುಂದೆ ಓಡುತ್ತಿದ್ದಾನೆ ರೈತ ಪರಂಪರೆಗಳ ಮೌಲ್ಯಗಳಿಗೆ ತಿಲಾಂಜಲಿ ಇಕ್ಕಿದಾನೆ.

ಅತಿಬೇಗನೆ ಪರಿಣಾಮ ಬೀರುವ ರಾಸಾಯನಿಕ ಗೊಬ್ಬರಗಳು, ಔಷಧಗಳು ಅಸ್ವಾಭಾವಿಕ ತಳಿಗಳಿಂದಾಗಿ ತಲೆಮಾರುಗಳಿಂದ ಪರಿಪೂರ್ಣತೆ ಸಾಧಿಸಿದ ಕೃಷಿಪದ್ದತಿಗಳು, ತಳಿ ವೈವಿಧ್ಯತೆಗಳು ಇಂದು ಕಾಣದಂತಾಗಿವೆ. ಅತಿಯಾದ ರಸಗೊಬ್ಬರಗಳನ್ನು ಸಿಂಪಡಿಸುವುದರಿಂದ ಫಲಪ್ರದವಾದ ಭೂಮಿ ಪ್ರದೇಶವೆಲ್ಲ ಜಾಳು, ಕ್ಷಾರಗಳಿಲ್ಲದೇ ಹುಳಿ ಮಣ್ಣಾಗಿ ಪರಿವರ್ತನೆಗೊಂಡು ಕೃಷಿಗೆ ಅನುಕೂಲವಾದ ನೆಲ ಬರಡಾಗುತ್ತದೆ. ಬಂಜರವಾಗುತ್ತದೆ. ವರ್ಷಾನುಗಳಿಂದ ಸತತವಾಗಿ ಕೇವಲ ಪ್ರಧಾನ ಪೋಷಕಗಳ ಬಳಕೆಯಿಂದಾಗಿ ಭೂಮಿಯ ಸತ್ವವೆಲ್ಲ ಖಾಲಿಯಾಗಿ ಹೋಗಿದೆ. ಅಸಮತೋಲನ ರಾಸಾಯನಿಕಗಳ ಬಳಕೆಯಿಂದಾಗಿ ಬೆಳೆಯ ಪ್ರತಿರೋಧಕತೆ ಬಲಹೀನಗೊಂಡು ಆಹಾರದ ಪ್ರಮಾಣ ಮತ್ತು ಗುಣಮಟ್ಟದ ನಷ್ಟದಲ್ಲಿ ರೈತ ಇಂದು ಬಳಲುತ್ತಿದ್ದಾನೆ. ಮಣ್ಣಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಗಳು ಊಹಿಸಲಾರದಷ್ಟು ಬದಲಾಗಿದ್ದು ನೈಸರ್ಗಿಕ ಸಾರಜನಕ ಸ್ಥೀರಿಕರಣ ಕ್ರಿಯೆ ಚಿಂದಿಯಾಗಿದೆ. ಪರಿಸರದ ಹಲವು ಸ್ವಾಭಾವಿಕ ಚಕ್ರಗಳು ಸಮರಸಗೊಳ್ಳುವಲ್ಲಿ ವಿಫಲವಾಗಿವೆ. ಕೃಷಿಯಲ್ಲಿನ ಜೀವ ವೈವಿಧ್ಯ ನಶಿಸಿ ಹೋಗಿದೆ. ಈ ರಸಗೊಬ್ಬರಗಳ ಪ್ರಭಾವದಿಂದಾಗಿ ಮಣ್ಣಿನ ಸಾವಯವ ವಸ್ತುಗಳು ಕ್ಷೀಣಿಸುವುದರ ಜತೆಗೆ ಜೈವಿಕ ಗುಣಗಳು ನಾಶಗೊಳ್ಳುತ್ತಿವೆ. ಆಮ್ಲಜನಕ ಮತ್ತು ತೇವಾಂಶ ಧಾರಣಶಕ್ತಿ ಕುಂದುತ್ತದೆ. ಅಂತರ್ಜಲ ಮಟ್ಟ ಕುಸಿಯುತ್ತದೆ. ಹಲವು ರಾಸಾಯನಿಕಗಳು ಬೆಳೆಯಿಂದ ಕೆಳಗೆ ಬಿದ್ದು ಹೆಚ್ಚಾಗಿ ಮಣ್ಣನ್ನು ಸೇರುವ ಸಂಭವವಿರುತ್ತದೆ. ಇವು ಮಣ್ಣಿನೊಳಗೆ ಇದ್ದು ಕೆಲವೊಮ್ಮೆ ಆಹಾರ ಸರಪಳಿಗೆ ಸೇರಿದ ಉದಾಹರಣೆಗಳು ಇಲ್ಲದಿಲ್ಲ. ಸಂಪೂರ್ಣ ಬೆಳೆಯ ರೋಗಗಳಿಗೆ ಬೀಳದೆ ಇರುವ D.D.T. ಯು ತಾಯಿಯ ಎದೆಹಾಲಿನಲ್ಲೂ ಕಾಣಿಸಿಕೊಳ್ಳಬಹುದು. ಶಿಶು ಮತ್ತು ಪಶು ಆರೋಗ್ಯದ ಮೇಲೆ ನೀರಿನಲ್ಲಿ ಬೆರೆತ ನೈಟ್ರೈಟ್, ವಿಷಯುಕ್ತತೆಗಳ ಪರಿಣಾಮಗಳ ಹಲವಾರು ಪ್ರದೇಶಗಳಿಂದ ದಾಖಲಾಗಿವೆ. ಮಾನವ, ಭೂಮಿ ಪರಿಸರದ ನಡುವೆ ಇರುವ ಸರಪಳಿಯ ಬಿಚ್ಚುವ ಕಾಲದೂರವಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾಮರ್‍ಥ್ಯ
Next post ಜುಲೇಖ

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

cheap jordans|wholesale air max|wholesale jordans|wholesale jewelry|wholesale jerseys