Home / ಲೇಖನ / ವಿಜ್ಞಾನ / ಜೈವಿಕ ಡಿಸೆಲ್ – ಹೊಂಗೆ ಎಣ್ಣೆ

ಜೈವಿಕ ಡಿಸೆಲ್ – ಹೊಂಗೆ ಎಣ್ಣೆ

ನಮ್ಮ ದೇಶದಲ್ಲಿ ಪೆಟ್ರೋಲ್, ಡಿಸೆಲ್ ಆಮದಿನ ಮೇಲೆ ಅಪಾರ ಪ್ರಮಾಣದ ವಿದೇಶಿ ವಿನಿಮಯ ವ್ಯಚ್ಚವಾಗುತ್ತದೆ. ಇದರಿಂದ ದೇಶದ ಸಮಗ್ರ ಅಭಿವೃದ್ಧಿಯ ಮೇಲೆ ಗಂಭೀರ ಪರಿಣಾಮಗಳು ಬೀರುತ್ತವೆ. ಇದಕ್ಕಿಂತಲೂ ಮಿಗಿಲಾಗಿ ವಾಯು ಮಾಲಿನ್ಯ, ಪರಿಸರ ಮಾಲಿನ್ಯವನ್ನು ನಾವೇ ತಂದು ಕೊಂಡಂತಾಗುತ್ತದೆ. ಇದೆಲ್ಲ ಸಮಸ್ಯೆಗಳಿಗೆ ಮಾರ್‍ಗೋಪಾಯ ಕಂಡು ಹಿಡಿಯಲಾಗಿದೆ. ಪೆಟ್ರೋಲಿಯಂ ಇಂಧನಗಳ ಬದಲಿಗೆ ಸಸ್ಯಗಳಿಂದ ಉತ್ಪತ್ತಿಯಾಗುವ ಜೈವಿಕ ಇಂಧನವನ್ನು ಬಳಸುವುದು. ಹೀಗೆ ಹಲವಾರು ಸಸ್ಯಗಳ ಎಣ್ಣೆಗಳನ್ನು ಬದಲಿ ಇಂಧನವಾಗಿ ಬಳಸಬಹುದುದಾಗಿದೆ. ಇವುಗಳಲ್ಲಿ ಹೊಂಗೆ ಎಣ್ಣೆ ಪ್ರಮುಖವಾಗುತ್ತದೆ. ಬಹು ಉಪಯೋಗಿ ಹೊಂಗೆಮರ ರೈತರಿಗೆ ಉಪಕಾರಿಯಾಗಿದೆ. ಈ ಮರವು ದೇಶದೆಲ್ಲೆಡೆ ಬೆಳೆಯುತ್ತದೆ. ಹೆಚ್ಚಾಗಿ ಮಳೆ ಕಡಿಮೆ ಬೀಳುವ ಎಲ್ಲ ತರಹದ ಭೂಮಿಗಳಲ್ಲಿ ಹೇರಳವಾಗಿ ಹುಲುಸಾಗಿ, ಬೆಳೆಯುತ್ತದೆ. ಈ ಹೊಂಗೆಮರದ ಶಾಸ್ತ್ರೀಯ ಹೆಸರು “ಪೊಂಗೆಮಿಯಾ ಪಿನ್ನೇಟಿ” ಎಂದು ಕರೆಯುತ್ತಿದ್ದು, ಇದರ ಬೀಜದಿಂದ ಬರುವ ಎಣ್ಣೆಯನ್ನು ಸಾಂಪ್ರದಾಯಿಕ ದೀಪ ಬೆಳೆಗಿಸಲು ಔಷಧಿ ರೂಪದಲ್ಲಿ ಉಪಯೋಗಿಸುತ್ತಾರೆ. ಇದರ ಎಣ್ಣೆಯನ್ನು ಡಿಸೆಲ್‌ಗೆ ಬದಲಾಗಿ ಬಳಸುವ ಸಂಶೋಧನೆ ಯಶಸ್ವಿಯಾಗಿದೆ. ಜತೆಗೆ ದೇಶಿ ತಯಾರಿಕೆಯುಳ್ಳ ಬಹು ಉಪಯೋಗಿ ವಸ್ತು ಕೂಡ ಆಗಿದೆ ಎಂದು ವಿಜ್ಞಾನಿಗಳ ಅಭಿಪ್ರಾಯ. ಕಾರು, ಟ್ರಾಕ್ಟರ್, ಗಿರಣಿಗಳಿಗೆ ಈ ಎಣ್ಣೆಯನ್ನು ಹಾಕಿ ಓಡಿಸಬಹುದು. ಇದಕ್ಕೆ “ಜೈವಿಕ ಡಿಸೆಲ್” ಎಂದೇ ಕರೆಯುತ್ತಾರೆ.

ಈ ಹೊಂಗೆಮರಗಳನ್ನು ನಮ್ಮ ರೈತರು ತಮ್ಮ ಜಮೀನುಗಳ ಬದುಗಳಲ್ಲಿ ಬೆಳೆಸಬಹುದು. ದಾರಿಯುದ್ದಕ್ಕೂ ಹಾಕಬಹುದು. ಒಳ್ಳೆಯ ನೆರಳಿನ ಮರಕೂಡ. ಇದರ ಎಣ್ಣೆಯಿಂದ ಕೃಷಿ ಆಧಾರಿತ ಸಣ್ಣಸಣ್ಣ ಕೈಗಾರಿಕೆಗಳಿಗೆ ಉಪಯೋಗಿಸಲು ಇತ್ತೀಚೆಗೆ ಹೆಚ್ಚಿನ ಮಹತ್ವ ಬರುತ್ತಿದೆ.

ಡಿಸೆಲ್‌ಗೆ ಬದಲಾಗಿ ಈ ಎಣ್ಣೆಯನ್ನು ಬಳೆಸಿದರೆ ದುಬಾರಿ ಹಣ ನೀಡಿ, ಪೆಟ್ರೋಲ್ ಡಿಸೆಲ್‌ ತರಬೇಕಿಲ್ಲ. ಗ್ರಾಮೀಣ ಕೈಗಾರಿಕೆಗಳಲ್ಲಿಯೇ ಈ ಎಣ್ಣೆಯನ್ನು ತಯಾರಿಸಬಹುದು. ಕೃಷಿ ಕಾರ್‍ಯಗಳು ಸುಲಭವಾಗಿ, ಸಮಯ ಉಳಿಯುತ್ತದೆ. ಹೊಂಗೆ ಎಣ್ಣೆ ತೆಗೆದ ನಂತರ ಉಳಿಯುವ ಹೂಂಗೆಹಿಂಡಿ ಜಮೀನುಗಳಿಗೆ ಉತ್ತಮ ಸಾವಯವ ಗೊಬ್ಬರವಾಗುತ್ತದೆ. ಇಳುವರಿ ಕೂಡ ಹೆಚ್ಚಾಗುತ್ತದೆ. ಹೊಂಗೆ ಹಿಂಡಿ ಬಳಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ತೇವಾಂಶ ಕೀಟನಾಶಕವಾಗಿಯೂ ಕೆಲಸ ಮಾಡುತ್ತದೆ ಮತ್ತು ಮಣ್ಣಿನ ಸಂಪೂರ್‍ಣ ಆರೋಗ್ಯ ಕಾಪಾಡುತ್ತದೆ. ರಸಗೂಬ್ಬರಕ್ಕಾಗಿ ಮಾಡುತ್ತಿದ್ದ ವೆಚ್ಚ ಕಡಿಮೆಯಾಗುತ್ತದೆ.

ಹೊಂಗೆ ಎಣ್ಣೆಯಿಂದ ಉಗಳುವ ಹೊಗೆಯಲ್ಲಿ ವಿಷಾಧಾರಿತ ಆಮ್ಲಗಳು ಕಡಿಮೆ ಇರುತ್ತವೆ ಎಂದು ಕಂಡು ಹಿಡಿಯಲಾಗಿದೆ. ವಾಯುಮಾಲಿನ್ಯ ಕಡಿಮೆಯಾಗಿ ಆರೋಗ್ಯಕರ ಪರಿಸರ ನಿರ್‍ಮಾಣವಾಗುತ್ತದೆ. ಈ ಸತ್ಯವನ್ನು ನಮ್ಮ ವಿದ್ಯಾವಂತ ರೈತರು, ಪ್ರಗತಿಪರ ಕೃಷಿಕರು ಚಿಂತನೆ ಮಾಡಿ ಹೊಂಗೆ ಎಣ್ಣೆಯಿಂದಾಗುವ ಮಹತ್ವವನ್ನು ಅರಿಯಬೇಕಿದೆ. *****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...