ಹಿಂಬಳಿ ಮುಂಬಳಿ

ಹಿಂಬಳಿ ಮುಂಬಳಿ ಗಂಧದ ಗೀರಾ
ಹೊಂದಿಸಿ ಇಟ್ಟಾಳ ಛೆಂದ ಗಿರಾಕಿ
ಜಾತ ಮಲ್ಲಿಗಿ ಜಾಳಿಗಿ ದಂಡಿ
ವಾನ್ಯಾಡು ತುರುಬ ಒನಪಿಲಿ ಕಟ್ಟಿ
ಖನ್ನಿ ಕೋಮಽಲಿ ಹಸೀಗೇಳಽ ಸೋ ||೧||

ನೀರೆಯ ಬಾವುಲಿ ಲಿಗಿಲಿಗಿನಾಡುತ
ಕಾಲುಂಗ್ರ ಪಿಲ್ಲ್ಯಾ ಝಗಝಗ ಹೊಳೆವುತ
ಹೊನ್ನಾ-ಭರಣಾ ಹರಡಿಗಿ ಮಲಕಽ
ಹೊನ್ನ ಪುತ್ತಳಿ ರುಳಿ ಸರಿಗಿಟಗೊಂಡು
ಕೋಗಿಲ ಮದ್ದಾಽನೇ ಹೆಸಿಗೇಳಽ ಸೋ ||೨||

ಇದುರಿನ ಮನಿಯೆ ಬಿದರೊಂಕೆವರ
ಮನ್ನುಸಿದಾರ ಮನಿ ಹೊಕ್ಕವರ
ಹತ್ತು ಮಂದಿಲಿ ಪಂತಿಲಿ ಕುಂಡ್ರೋ
ಚಿತ್ತಬಲ್ಲಬೋ ಶಿವಶಂಕರಗ
ಚಿತ್ರಾಂಗದರಸಾ ಹಸೀಗೇಳೋ ಸೋ ||೩||

ನಿಲಗುದರೆಂಬೋ ತೇಜಿಯನೇರಿ
ಮದನಾರಿ ಬಂದು ಬಾಗಿಲ್ಗಿ ನಿಂತಽ
ವಾರಿಗಿ ಗೆಳೆದ್ಯಾರು ಒಡಗೊಂಡು ಕರದರ
ಬಾ ಎನ್ನ ಮಡಽದೀ ಹಸಿಗೇಳಽ ಸೋ ||೪||

ಇಂಜನ ಮಳಿಯ ಗಂಧದ ಗೀರ
ಇಂದ್ನಮ ತಂಗೆಮನ ಗಂಡನ ಸದರಽ
ಇಂದ್ರನ ಖಳಿಯುಳ ಚಂದ್ರನ ಮಗಳ
ಇಂದ ಮನ್ನ ಸರೇ ಶುಬಽದಿಂದ ಸೋ ||೫||
*****

ಈ ಹಾಡಿನಲ್ಲಿ ಮೊದಲಿನ ಎರಡು ನುಡಿಗಳಲ್ಲಿ ಕನ್ನೆಯ ಅಲಂಕಾರ ವರ್ಣನೆಯಿದೆ. ಮೂರನೆಯ ನುಡಿಯಲ್ಲಿ ವರನ ಘನವಂತಿಕೆಯನ್ನು ಹೇಳಿದೆ. ನಾಲ್ಕನೆಯ ಮತ್ತು ಐದನೆಯ ನುಡಿಗಳಲ್ಲಿ ಕನ್ನೆಯನ್ನು ಗೆಳತಿಯರು ಮನ್ನಿಸುತ್ತಾರೆ.

ಛಂದಸ್ಸು:- ಮಂದಾನಿಲ ರಗಳೆ.

ಶಬ್ದಪ್ರಯೋಗಗಳು:- ಗಿರಾಕಿ=ಹರದಿ (ಸುಂದರಿ). ವಾನ್ಯಾಡು ತುರಬ=ಅಲೆದಾಡುವ ಮುಡಿ. ವನಪಿಲೆ=ಒಯ್ಯಾರದಿಂದ. ಖನ್ನಿ=ಕನ್ನೆ. ಚಿತ್ತ ಒಲ್ಲಬೊ=ಚಿತ್ತವಲ್ಲಭ (ಪ್ರೀಯ). ನಿಲಗುದರಿ=ನಿಲುವಿಕೆಯುಳ್ಳೆ ಕುದುರೆ. ಮದನಾರಿ=ಯೌವನೆ. ಸದರ=ಸರಿಗದ್ದುಗೆ. ಇಂಜನ ಮಳಿಯ ಗಂಧದ ಗೀರ=ಭೋರಮಳೆಯ ಹಸಿಯ ಧಾರೆಗಳಂತೆ ಒಪ್ಪುವ ಗಂಧದ ಗೀರುಗಳು (ಕೈಗೆ).

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೈವಿಕ ಡಿಸೆಲ್ – ಹೊಂಗೆ ಎಣ್ಣೆ
Next post ನಿನ್ನ ನಾನರಿಯೆನೈ

ಸಣ್ಣ ಕತೆ

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…