ವಿದ್ಯುತ್ ಬಿಲ್ಲೂಸಹ ಇನ್ನು ಕಂಪ್ಯುಟರಿಕೃತ ಯಂತ್ರದಿಂದ

ವಿದ್ಯುತ್ ಬಿಲ್ಲೂಸಹ ಇನ್ನು ಕಂಪ್ಯುಟರಿಕೃತ ಯಂತ್ರದಿಂದ

ತಪ್ಪು ಲೆಕ್ಕಾಚಾರ, ಕೂಡಿಸುವುದು, ಬಾಕಿ ತೋರಿಸುವುದು, ಮೀಟರ್‌ಗಳ ತಪ್ಪಿನಿಂದಾಗಿ ಹೆಚ್ಚು ಬಿಲ್ಲು ಬರೆದುಕೊಡುವುದು. ಇದೆಲ್ಲ ಗ್ರಾಹಕರಿಗೆ ಮಾಮೂಲಾಗಿದೆ. ಕೆ.ಪಿ.ಟಿ.ಸಿ. ಎಲ್. ನಿಂದಾದ ಕಿರಿಕಿರಿಗಳೆಂದು ಇದುವರೆಗೆ ಜನಭಾವಿಸಿದ್ದರು. ಇನ್ನು ಮುಂದೆ ಹಾಗಗಲಾರದು. ರಸೀದಿಯನ್ನಷ್ಟೇ ಕಂಪುಟರಿನಲ್ಲಿ ಕೊಡುವುದರ ಬದಲು ಮೀಟರ್ ರೀಡಿಂಗ್ ಸಹ ಪುಟ್ಟ ಯಂತ್ರದಲ್ಲಿ ತೋರಿಸಿ ಅಲ್ಲಿಯೇ ಒಂದಿಷ್ಟು ತಪ್ಪಾಗದಂತೆ ಬಿಲ್ಲುತೋರಿಸಿ, ರಸೀದಿ ನೀಡುವ ವ್ಯವಸ್ಥೆ ಗೊಳಿಸಲಾಗಿದೆ.

ನಗರ ಪಟ್ಟಣ ಪ್ರದೇಶಗಳಲ್ಲದೇ ಹಳ್ಳಿಹಳ್ಳಿಗೂ ತಲುಪಿ ಹೊಸ ಹೊಸ ರೀತಿಯ ವಿದ್ಯುತ್‌ಬಿಲ್ ನೀಡುವ ಮೂಲಕ ಗ್ರಾಹಕರಿಗೆ ಕುತೂಹಲ ಕೆರಳಿಸಿದೆ. ಹಿಂದಿನಂತೆ ಪದೇ ಪದೇ ತಲೆ ಎತ್ತಿ ನೋಡುವ ಕ್ರಿಯೆಗೆ ಸೆನ್ಸಾರ್ ಹಾಕಿರುವ ಈ ಯಂತ್ರ ಒಂದು ರೀತಿಯ ಕ್ಯಾಲ್ಯುಕುಲೇಟರ್ನಂತೆಯೇ ಕೆಲಸಮಾಡುತ್ತದೆ. ಮತ್ತು ವಿದ್ಯುತ್ ಮೂಲಕ ಬಿಲ್ಲು ನೀಡುವಾಗ ಒಮ್ಮೆ ಮೀಟರ್‌ನ ನಂಬರ್ ಹಾಗೂ ಮೀಟರ ಓಡಿರುವ ಯುನಿಟ್‌ಗಳನ್ನು ಫೀಡ್ ಮಾಡಿದರೆ ಸಾಕು. ಮಿಕ್ಕೆಲ್ಲ ಕೆಲಸಗಳನ್ನು ತನ್ನಿಂದ ತಾನೇ ಮಾಡಿ ಬಾಕಿ ಹಣ ಉಳಿದಿದ್ದರೆ ಅದನ್ನು ಸುಲಭವಾಗಿ ಈ ಯಂತ್ರ ತೋರಿಸುತ್ತದೆ. ಆರಂಭದಲ್ಲಿ ಕೆಲ ಬಿಲ್ಲುಗಳ ರೀಡರ್‌ಗಳ ತಪ್ಪಿನಿಂದಾಗಿ ಗೊಂದಲ ಸೃಷ್ಟಿಯಾಗುತ್ತಿತ್ತು. ಈ ಕಂಪ್ಯೂಟರಿಕೃತ ಬಿಲ್‌ರೀಡಿಂಗ್ ಯಂತ್ರವು ಸುವ್ಯವಸ್ಥಿತವಾಗಿ ಗೊಂದಲಗಳನ್ನು ನಿವಾರಿಸಿ ನೂತನ ಯಂತ್ರದ ಸಹಾಯದಿಂದ ಗ್ರಾಹಕರಿಗೆ ತಲುಪಿಸುತ್ತದೆ (ರಸೀದಿ) . ಜತೆಗೆ ಬಿಲ್ ಫೀಡ್ ಮಾಡಿದವರ ಹೆಸರೂ ಸಹ ಇದರಲ್ಲಿ ಅಚ್ಚಾಗಿರುತ್ತದೆ. ಒಟ್ಟಿನಲ್ಲಿ ವಿದ್ಯುತ್ ರೀಡಿಂಗ್ ಬಿಲ್ ಸಹ ಕಂಪ್ಯೂಟರೀಕರಣಗೊಂಡುದದು ಆಧುನಿಕತೆಗೆ ಸಾಕ್ಷಿಯಾಗಿದೆ. ಈ ಬಿಲ್ ರೀಡಿಂಗ್ ನಿಂದ ರಸೀದಿ ಪುಸ್ತಕಗಳನ್ನು ಮಾಡಿಸುವುದು, ಅವುಗಳನ್ನು ಫೈಲ್ ಮಾಡುವುದು ಕೂಡ ತಪ್ಪುತ್ತದೆ. ಇದು ಪ್ರತಿ ತಿಂಗಳೂ ಬರುತ್ತದೆ. ಈ ಯಂತ್ರದಿಂದ ಕಾರ್ಯಕ್ಷಮತೆ ಹೆಚ್ಚುತ್ತದೆ. ಗ್ರಾಹಕರಿಗೆ ಯಾಂತ್ರೀಕೃತ ಬಿಲ್ ನೀಡುವ ಮೂಲಕ ರಸೀದಿಯಲ್ಲಿ ತಿದ್ದುವ ತಪ್ಪು ಲೆಕ್ಕ ಬರೆಯಲು ಆಸ್ಪದ ಆಗದೇ ಇರುವುದರಿಂದ ಇದೊಂದು ವಿಜ್ಞಾನ ಕ್ಷೇತ್ರದ ಕೊಡುಗೆಯಾಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯುಗಾದಿಯ ನೆನಪು
Next post ಬಯಕೆಯ ಹಾಡು

ಸಣ್ಣ ಕತೆ

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

cheap jordans|wholesale air max|wholesale jordans|wholesale jewelry|wholesale jerseys