ವಿದ್ಯುತ್ ಬಿಲ್ಲೂಸಹ ಇನ್ನು ಕಂಪ್ಯುಟರಿಕೃತ ಯಂತ್ರದಿಂದ

ವಿದ್ಯುತ್ ಬಿಲ್ಲೂಸಹ ಇನ್ನು ಕಂಪ್ಯುಟರಿಕೃತ ಯಂತ್ರದಿಂದ

ತಪ್ಪು ಲೆಕ್ಕಾಚಾರ, ಕೂಡಿಸುವುದು, ಬಾಕಿ ತೋರಿಸುವುದು, ಮೀಟರ್‌ಗಳ ತಪ್ಪಿನಿಂದಾಗಿ ಹೆಚ್ಚು ಬಿಲ್ಲು ಬರೆದುಕೊಡುವುದು. ಇದೆಲ್ಲ ಗ್ರಾಹಕರಿಗೆ ಮಾಮೂಲಾಗಿದೆ. ಕೆ.ಪಿ.ಟಿ.ಸಿ. ಎಲ್. ನಿಂದಾದ ಕಿರಿಕಿರಿಗಳೆಂದು ಇದುವರೆಗೆ ಜನಭಾವಿಸಿದ್ದರು. ಇನ್ನು ಮುಂದೆ ಹಾಗಗಲಾರದು. ರಸೀದಿಯನ್ನಷ್ಟೇ ಕಂಪುಟರಿನಲ್ಲಿ ಕೊಡುವುದರ ಬದಲು ಮೀಟರ್ ರೀಡಿಂಗ್ ಸಹ ಪುಟ್ಟ ಯಂತ್ರದಲ್ಲಿ ತೋರಿಸಿ ಅಲ್ಲಿಯೇ ಒಂದಿಷ್ಟು ತಪ್ಪಾಗದಂತೆ ಬಿಲ್ಲುತೋರಿಸಿ, ರಸೀದಿ ನೀಡುವ ವ್ಯವಸ್ಥೆ ಗೊಳಿಸಲಾಗಿದೆ.

ನಗರ ಪಟ್ಟಣ ಪ್ರದೇಶಗಳಲ್ಲದೇ ಹಳ್ಳಿಹಳ್ಳಿಗೂ ತಲುಪಿ ಹೊಸ ಹೊಸ ರೀತಿಯ ವಿದ್ಯುತ್‌ಬಿಲ್ ನೀಡುವ ಮೂಲಕ ಗ್ರಾಹಕರಿಗೆ ಕುತೂಹಲ ಕೆರಳಿಸಿದೆ. ಹಿಂದಿನಂತೆ ಪದೇ ಪದೇ ತಲೆ ಎತ್ತಿ ನೋಡುವ ಕ್ರಿಯೆಗೆ ಸೆನ್ಸಾರ್ ಹಾಕಿರುವ ಈ ಯಂತ್ರ ಒಂದು ರೀತಿಯ ಕ್ಯಾಲ್ಯುಕುಲೇಟರ್ನಂತೆಯೇ ಕೆಲಸಮಾಡುತ್ತದೆ. ಮತ್ತು ವಿದ್ಯುತ್ ಮೂಲಕ ಬಿಲ್ಲು ನೀಡುವಾಗ ಒಮ್ಮೆ ಮೀಟರ್‌ನ ನಂಬರ್ ಹಾಗೂ ಮೀಟರ ಓಡಿರುವ ಯುನಿಟ್‌ಗಳನ್ನು ಫೀಡ್ ಮಾಡಿದರೆ ಸಾಕು. ಮಿಕ್ಕೆಲ್ಲ ಕೆಲಸಗಳನ್ನು ತನ್ನಿಂದ ತಾನೇ ಮಾಡಿ ಬಾಕಿ ಹಣ ಉಳಿದಿದ್ದರೆ ಅದನ್ನು ಸುಲಭವಾಗಿ ಈ ಯಂತ್ರ ತೋರಿಸುತ್ತದೆ. ಆರಂಭದಲ್ಲಿ ಕೆಲ ಬಿಲ್ಲುಗಳ ರೀಡರ್‌ಗಳ ತಪ್ಪಿನಿಂದಾಗಿ ಗೊಂದಲ ಸೃಷ್ಟಿಯಾಗುತ್ತಿತ್ತು. ಈ ಕಂಪ್ಯೂಟರಿಕೃತ ಬಿಲ್‌ರೀಡಿಂಗ್ ಯಂತ್ರವು ಸುವ್ಯವಸ್ಥಿತವಾಗಿ ಗೊಂದಲಗಳನ್ನು ನಿವಾರಿಸಿ ನೂತನ ಯಂತ್ರದ ಸಹಾಯದಿಂದ ಗ್ರಾಹಕರಿಗೆ ತಲುಪಿಸುತ್ತದೆ (ರಸೀದಿ) . ಜತೆಗೆ ಬಿಲ್ ಫೀಡ್ ಮಾಡಿದವರ ಹೆಸರೂ ಸಹ ಇದರಲ್ಲಿ ಅಚ್ಚಾಗಿರುತ್ತದೆ. ಒಟ್ಟಿನಲ್ಲಿ ವಿದ್ಯುತ್ ರೀಡಿಂಗ್ ಬಿಲ್ ಸಹ ಕಂಪ್ಯೂಟರೀಕರಣಗೊಂಡುದದು ಆಧುನಿಕತೆಗೆ ಸಾಕ್ಷಿಯಾಗಿದೆ. ಈ ಬಿಲ್ ರೀಡಿಂಗ್ ನಿಂದ ರಸೀದಿ ಪುಸ್ತಕಗಳನ್ನು ಮಾಡಿಸುವುದು, ಅವುಗಳನ್ನು ಫೈಲ್ ಮಾಡುವುದು ಕೂಡ ತಪ್ಪುತ್ತದೆ. ಇದು ಪ್ರತಿ ತಿಂಗಳೂ ಬರುತ್ತದೆ. ಈ ಯಂತ್ರದಿಂದ ಕಾರ್ಯಕ್ಷಮತೆ ಹೆಚ್ಚುತ್ತದೆ. ಗ್ರಾಹಕರಿಗೆ ಯಾಂತ್ರೀಕೃತ ಬಿಲ್ ನೀಡುವ ಮೂಲಕ ರಸೀದಿಯಲ್ಲಿ ತಿದ್ದುವ ತಪ್ಪು ಲೆಕ್ಕ ಬರೆಯಲು ಆಸ್ಪದ ಆಗದೇ ಇರುವುದರಿಂದ ಇದೊಂದು ವಿಜ್ಞಾನ ಕ್ಷೇತ್ರದ ಕೊಡುಗೆಯಾಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯುಗಾದಿಯ ನೆನಪು
Next post ಬಯಕೆಯ ಹಾಡು

ಸಣ್ಣ ಕತೆ

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…