ಬಯಕೆಯ ಹಾಡು

ಕಸಕಸಿ ಕೊಬ್ಬರಿ ಹಸನುಳ್ಳ ಜಿಲಿಬಿಲಿ|
ಬಿಸಿಯ ಹೂರಣಗಡಬ ಬಿಳಿಯ ಬೆಲ್ಲಽಽ|
ರಸಬಾಳಿ ಖಬ್ಬ ಸುಲಿದು ಮುಂದಿಟ್ಟರ|
ಇಸಮಾಡಿ ಒಂದ ತುತ್ತ ತಿಂದೇನ ತಾಯಿ|
ಬಂಕಿ ಕಾಡತಾವ ತಾಯಿ ಪರಿಪರಿಯಿಂದ
ಬಂಕಿ ಕಾಡತಾವ ||೧||

ಆಕಳ ಹಾಲಾಗ ದುಮ್ಮಸ ಮಾಡ|
ಪರಡಿ ಸವತೀಬೀಜ ಪಾಯಸ ಮಾಡ|
ಯಾಲಕ್ಕಾಯ ಪತ್ತುರಿ ಜಾಜಿಕಾಯಿ ಮೊದಲುಮಾಡಿ|
ಇಷ್ಟ ಸಾಹಿತನೆಲ್ಲ ಹದಮಾಡ ತಾಯಿ|
ಬಂಕಿ ಕಾಡತಾವ ||೨||

ಗಂಗಾಳ ಝರಗಿ ಝಳಝಳ ಬೆಳಗ|
ತೆಂಬೀಗಿ ತುಂಬಿ ಬದಿಯಲ್ಲಿ ಇಡಽ|
ಡೊಣ್ಣಿ ತುಂಬ ತುಪ್ಪ ತಂದು ಮುಂದಿಟ್ಟಿರ|
ಬಟ್ಟೆದ್ದಿ ಬಾಯಾಗ ಇಟ್ಟೀನ ತಾಯಿ|
ಬಂಕಿ ಕಾಡತಾವ ||೩||

ಎಳ್ಳ ಹಚ್ಚಿದ ರೊಟ್ಟಿ ಎಣ್ಣಿ ಬದನೀಕಾಯಿ|
ಮಸರ ಕಲಸಿದ ಬುತ್ತಿ ಬಿಸಿಯ ಬಾನ|
ಅಲ್ಲ, ಮಾಗುಣಿ ಬೇರ, ಬೆಲ್ಲ, ಬೆಳವಲದ್ಹಣ್ಣ|
ಮನ ಬೇಡಿ ನನ ಜೀವ ಬಗಸ್ಯಾದ ತಾಯಿ|
ಬಂಕಿ ಕಾಡತಾವ ||೪||

ಹೋಳಿಹೆಣ್ಣಿವಿ ಸುತ್ತ ತನುಗಾಳಿ ಬೀಸ್ಯಾವ|
ಮಾಳೀಗಿ ಏರಿ ಬೆಳಖಿಂಡಿ ಮುಚ್ಚ|
ಬಣ್ಣಽದ ಹಚ್ಚಡ ಬಿಗಿಬಿಗಿದು ಹೊಚ್ಚಿದರ|
ಕಣ್ತುಂಬ ಒಂದು ನಿದ್ದಿ ಮಾಡೇನ ತಾಯೀ|
ಬಂಕಿ ಕಾಡತಾವ ||೫||

ಕುಂತಽರ ಆಕಡಿಕಿ ನಿಂತರ ತೂಕಡಿಕಿ|
ತಾಳಲಾರೆನೆ ತಾಯಿ ತೋಳಾರೆ ತಾರ|
ಮಂಚಕ ಒಪ್ಪತ ಹಾಸೀಗಿ ಮಾಡ|
ಮಂಚಕ ಎನ್ನ ಎಳದ್ಹಾಕ ತಾಯೀ|
ಬಂಕಿ ಕಾಡತಾವ ||೬||
*****
ಬಯಕೆಯ ಹಾಡು

ಒಬ್ಬ ಗರ್ಭಿಣಿಗೆ ಬಯಕೆಗಳು ಕಾಡುತ್ವೆ. ಅವಳು ತಾಯಿಯಲ್ಲಿ ತನ್ನ ಬಯಕೆಗಳನ್ನೆಲ್ಲ ಬೇಡುತ್ತಾಳೆ. ಅವಳ ಸಲಿಗೆಯ ಮಾತು ಹೇಳುವ ಬಗೆ ಎಶ್ಟು ಸೊಗಸಾಗಿವೆ; `ಕಸಕಸಿ ಕೊಬ್ಬರಿ, ಹೆಸನುಳ್ಳ ಜಿಲಿಬಿಲಿ, ಬಿಳಿಯ ಬೆಲ್ಲದ ಬಿಸಿಯ ಹೊರಣಗಡುಬು… ಇವನ್ನು ಮುಂದಿಟ್ಟರೆ ಇಸಮಾಡಿ ಒಂದು ತುತ್ತ ತಿಂದೇನು’ ಎನ್ನುತ್ತಾಳೆ! ಇದರಂತೆಯೆ `ಬಟ್ಟೆದ್ದಿ ಬಾಯಾಗ ಇಟ್ಟೇನು ತಾಯಿ’ `ತಾಳಲಾರೆನೆ ತಾಯಿ ತೋಳಾರೆ ತಾರ’-ಮೊದಲಾದುವು.

ಛಂದಸ್ಸು:- ಕುಸುಮಷಟ್ಟದಿಗೆ ಹೊಂದುತ್ತದೆ.

ಶಬ್ದ ಪ್ರಯೋಗಗಳು:- ಇಸ=ವಿಷ. ದುಮ್ಮಸ ಮಾಡ=ಅದರಲ್ಲಿ ಅಡಿಗೆ ಮಾಡು. ಮಸರ=ಮೊಸರು. ಬಾನ=ಬೋನ. ತನುಗಾಳಿ=ತಂಪುಗಾಳಿ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿದ್ಯುತ್ ಬಿಲ್ಲೂಸಹ ಇನ್ನು ಕಂಪ್ಯುಟರಿಕೃತ ಯಂತ್ರದಿಂದ
Next post ಹೊನಲ ಹಾಡು

ಸಣ್ಣ ಕತೆ

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…