Home / ಕವನ / ಕವಿತೆ / ಹೊನಲ ಹಾಡು

ಹೊನಲ ಹಾಡು

ಸ್ಥವಿರ ಗಿರಿಯ ಚಲನದಾಸೆ,
ಮೂಕ ವನದ ಗೀತದಾಸೆ,
ಸೃಷ್ಟಿ ಹೊರೆಯ ಹೊತ್ತ ತಿರೆಯ
ನಗುವಿನಾಸೆ ನಾ.
ಬಾಳ್ವೆಗೆಲ್ಲ ನಾನೆ ನಚ್ಚು,
ಲೋಕಕೆಲ್ಲ ಅಚ್ಚುಮೆಚ್ಚು,
ನಾನೆ ನಾನೆ ವಿಧಿಯ ಹುಚ್ಚು,
ಹೊನಲ ರಾಣಿ ನಾ.

ಕಿರಣ ನೆಯ್ದ ಸರಿಗೆಯುಡಿಗೆ,
ಇರುಳು ಕೊಟ್ಟ ತಾರೆತೊಡಿಗೆ,
ಇಂದುಕಳೆಯ ಹೂವೆ ಮುಡಿಗೆ –
ದೇವಕನ್ಯ ನಾ.
ಬೆಳ್ಳಿ ನೊರೆಯ ನಗೆ ನಗುತ್ತ,
ತೆರೆಯ ನಿರಿಯ ಚಿಮುಕಿಸುತ್ತ,
ಕಡಲ ವರಿಸೆ ತವಕಿಸುತ್ತ,
ನಡೆವ ವಧುವೆ ನಾ.

ನಲಿತ ಕುಣಿತವೆನ್ನ ಶೀಲ,
ಚಲನವೆನ್ನ ಜೀವಾಳ,
ಲುಪ್ತಮಾಗೆ ದೇಶಕಾಲ
ಎನ್ನ ಗಾಯನಾ.
ದಡದ ಗಿಡಕೆ ಪುಷ್ಪಹಾಸ,
ಸನಿಯದಿಳೆಗೆ ಸಸ್ಯಹಾಸ,
ಹಾಸಕೀರ್ಣ, ಹಾಸಪೂರ್ಣ,
ಎನ್ನ ಜೀವನಾ.

ಹೂವಿನಾಸೆಯನ್ನು ತೋರಿ
ಎಲೆಯ ಕಣ್ಣನೀರ ಕಾರಿ
ರೆಂಬೆಯಡ್ಡಗಟ್ಟಿ, ಹಳುವು
ಆಡೆ ಕರೆವುದು;
ಬೆಟ್ಟ ಮುದ್ದು ಮಾಡಲೆಂದು,
ಮಡುವು ಹಾದಿ ತಂಗಲೆಂದು,
ಕಡಲು ಒಲುಮೆ ಸಾಲದೆಂದು-
ನನ್ನ ತಡೆವುದು.

ನಾನು ನಿಲ್ವುದೊಂದೆ ಚಣಂ
ಸತತ ಕರ್ಮವೆನ್ನ ಗುಣಂ
ಅದಕೆ, ಕಾಣೆ ಗೋಳನಣಂ
ಹರ್ಷಮೆನಗೆ ಚಿರಂತಣಂ.

ಗವಿಗಳಲ್ಲಿ ಹುಳನಡಗಿ
ಬಂಡೆ ಮೇಲೆ ಹವ್ವನೆರಗಿ
ಮಡುವಿನಿಂದ ಮೆಲನೆ ಜರುಗಿ
ಕಡಲಿಗೋಡುವೆ;
ಬಿಸಿಲ ಕೋಲ ಹಿಡಿದು ಹತ್ತಿ
ನೀರ ತೇರನೇರಿ ಸುತ್ತಿ
ತಿರುಗಿ ತಿರೆಯ ಮಡಿಲಿನಲ್ಲಿ
ಧುಮುಕಿ ಹರಿಯುವೆ.

ಅಚರ ಜಗದ ಚಲನದಾಸೆ
ಮೂಕ ಜಗದ ಗೀತದಾಸೆ
ನಿಯತಿ ನಿಯಮ ನಿಯತ ಜಗದ
ನಗುವಿನಾಸೆ ನಾ.
ವನವಿನೋದ, ಮಲೆಯ ಮೋದ,
ಮುಗಿಲ ಮೇಲ್ಮೆ, ನಾಡ ನಲ್ಮೆ,
ನಾನೆ ನಾನೆ ದಿವದ ಕೂರ್ಮೆ-
ಪೊನಲ ರಾಣಿ ನಾ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...