ಪರಿಸರ ಮಾಲಿನ್ಯಗೊಳಿಸುವ ಪ್ಲಾಸ್ಟಿಕ್ ಬದಲು ಪಾಲಿಮರ್

ಪರಿಸರ ಮಾಲಿನ್ಯಗೊಳಿಸುವ ಪ್ಲಾಸ್ಟಿಕ್ ಬದಲು ಪಾಲಿಮರ್

‘ಪ್ಲಾಸ್ಟಿಕ್’ ಎಂದ ತಕ್ಷಣ ಪರಿಸರಕ್ಕೆ ಎಲ್ಲ ರೀತಿಗಳಿಂದಲೂ ‘ಮಾರಕ’ ವೆಂಬ ಸತ್ಯ ಜನಸಾಮಾನ್ಯರಿಗೆ ತಿಳಿದಿದೆ. ಪ್ಲಾಸ್ಟಿಕ್ ಹಾಳೆ, ಚೀಲ, ಹೊದಿಕೆ ಇನ್ನಿತರ ವಸ್ತುಗಳು ಬಣ್ಣಗಳಲ್ಲಿ ಬಿಡುಗಡೆಯಾಗುತ್ತಿದೆ. ಇವುಗಳಿಂದ ಹಾನಿಯಾಗುತ್ತದೆ ಎಂಬ ಸತ್ಯ ಗೊತ್ತಾದ ನಂತರ ವಿಜ್ಞಾನಿಗಳು ಇವುಗಳ ಬದಲಿಗೆ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಬಹುಕೃತ ಬಳಕೆಯಾಗಬಲ್ಲ ‘ಪಾಲಿಮರ್’ ಅನ್ನು ಕಂಡು ಹಿಡಿದಿದ್ದಾರೆ. ಬಯೊಡಿಗ್ರೆಡ್ ಆಗಬಲ್ಲ ಹೊಸವಸ್ತುಗಳ ಬಗ್ಗೆ ವಿಜ್ಞಾನಿಗಳು ಈ ಪಾಲಿಮಾರನ್ನು ಆವಿಷ್ಕಾರಗೊಳಿಸಿದ್ದಾರೆ. ಈ ನಿಟ್ಟಿನಲ್ಲಿ ಸ್ಟಾರ್‍ಚ್ ಮತ್ತು ಜೇಡಿ (ಕ್ಲೆ) ಮಣ್ಣಿನಿಂದ ಆಧರಿತವಾದ ಪ್ಲಾಸ್ಟಿಕ್ (ಥರ್‍ಮೋಪ್ಲಾಸ್ಪಿಕ್) ವಂತೆಯೇ ತಯಾರಿಸಲ್ಪಡುವ ಬಯೋಪಾಲಿಮರನ್ನು ಆವಿಷ್ಕಾರಗೊಳಿಸಲಾಗಿದೆ. ಇದು ಪ್ಲಾಸ್ಬಿಕ್ ನಷ್ಟೇ ಶಕ್ತಿಸಾಮರ್ಥ್ಯ ಮತ್ತು ಮೃದುತ್ವ ಗುಣಗಳನ್ನು (ಫ್ಲೆಕ್ಸಿಬಿಲಿಟಿ) ಹೊಂದಿದೆ. ಪ್ರಾಣವಾಯು ಇಂಗಾಲದ ಡೈ ಆಕ್ಸೈಡ್ ಮತ್ತು ನೀರಾವಿಗಳನ್ನು ತಯಾರಿಸಬಲ್ಲದಾಗಿದೆ. ಮುಖ್ಯವಾಗಿ ಇದು ಬಯೋಡಿಗ್ರೆಡೆಬಲ್ ಆಗಿದೆ. ಇದರ ಹಾಳೆಗಳಿಂದ ರಕ್ಷಿಸಿದ ಆಹಾರ ಪದಾರ್ಥಗಳ ಮೇಲೆ ಯಾವುದೇ ತರಹದ ದುಷ್ಟರಿಣಾಮಗಳು ಇದುವರೆಗೆ ಕಂಡು ಬಂದಿಲ್ಲವಾದ್ದರಿಂದ ಫಲಿತಾಂಶ ಯಶಸ್ವಿ ಎನಿಸಿದೆ. ಇದೊಂದು ಅತ್ಯುತ್ತಮ ಪ್ಯಾಕೆಜಿಂಗ್, ವಸ್ತುಗಳಿಗೆ ಬಳೆಸಬಹುದಾದ ವಸ್ತುವಾಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಹಾತ್ಮರ ಉಪವಾಸ
Next post ಹಸುಮಗಳಽ ನೀಲಮ್ಮ

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…