Home / ಲೇಖನ / ವಿಜ್ಞಾನ / ಪರಿಸರ ಮಾಲಿನ್ಯಗೊಳಿಸುವ ಪ್ಲಾಸ್ಟಿಕ್ ಬದಲು ಪಾಲಿಮರ್

ಪರಿಸರ ಮಾಲಿನ್ಯಗೊಳಿಸುವ ಪ್ಲಾಸ್ಟಿಕ್ ಬದಲು ಪಾಲಿಮರ್

‘ಪ್ಲಾಸ್ಟಿಕ್’ ಎಂದ ತಕ್ಷಣ ಪರಿಸರಕ್ಕೆ ಎಲ್ಲ ರೀತಿಗಳಿಂದಲೂ ‘ಮಾರಕ’ ವೆಂಬ ಸತ್ಯ ಜನಸಾಮಾನ್ಯರಿಗೆ ತಿಳಿದಿದೆ. ಪ್ಲಾಸ್ಟಿಕ್ ಹಾಳೆ, ಚೀಲ, ಹೊದಿಕೆ ಇನ್ನಿತರ ವಸ್ತುಗಳು ಬಣ್ಣಗಳಲ್ಲಿ ಬಿಡುಗಡೆಯಾಗುತ್ತಿದೆ. ಇವುಗಳಿಂದ ಹಾನಿಯಾಗುತ್ತದೆ ಎಂಬ ಸತ್ಯ ಗೊತ್ತಾದ ನಂತರ ವಿಜ್ಞಾನಿಗಳು ಇವುಗಳ ಬದಲಿಗೆ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಬಹುಕೃತ ಬಳಕೆಯಾಗಬಲ್ಲ ‘ಪಾಲಿಮರ್’ ಅನ್ನು ಕಂಡು ಹಿಡಿದಿದ್ದಾರೆ. ಬಯೊಡಿಗ್ರೆಡ್ ಆಗಬಲ್ಲ ಹೊಸವಸ್ತುಗಳ ಬಗ್ಗೆ ವಿಜ್ಞಾನಿಗಳು ಈ ಪಾಲಿಮಾರನ್ನು ಆವಿಷ್ಕಾರಗೊಳಿಸಿದ್ದಾರೆ. ಈ ನಿಟ್ಟಿನಲ್ಲಿ ಸ್ಟಾರ್‍ಚ್ ಮತ್ತು ಜೇಡಿ (ಕ್ಲೆ) ಮಣ್ಣಿನಿಂದ ಆಧರಿತವಾದ ಪ್ಲಾಸ್ಟಿಕ್ (ಥರ್‍ಮೋಪ್ಲಾಸ್ಪಿಕ್) ವಂತೆಯೇ ತಯಾರಿಸಲ್ಪಡುವ ಬಯೋಪಾಲಿಮರನ್ನು ಆವಿಷ್ಕಾರಗೊಳಿಸಲಾಗಿದೆ. ಇದು ಪ್ಲಾಸ್ಬಿಕ್ ನಷ್ಟೇ ಶಕ್ತಿಸಾಮರ್ಥ್ಯ ಮತ್ತು ಮೃದುತ್ವ ಗುಣಗಳನ್ನು (ಫ್ಲೆಕ್ಸಿಬಿಲಿಟಿ) ಹೊಂದಿದೆ. ಪ್ರಾಣವಾಯು ಇಂಗಾಲದ ಡೈ ಆಕ್ಸೈಡ್ ಮತ್ತು ನೀರಾವಿಗಳನ್ನು ತಯಾರಿಸಬಲ್ಲದಾಗಿದೆ. ಮುಖ್ಯವಾಗಿ ಇದು ಬಯೋಡಿಗ್ರೆಡೆಬಲ್ ಆಗಿದೆ. ಇದರ ಹಾಳೆಗಳಿಂದ ರಕ್ಷಿಸಿದ ಆಹಾರ ಪದಾರ್ಥಗಳ ಮೇಲೆ ಯಾವುದೇ ತರಹದ ದುಷ್ಟರಿಣಾಮಗಳು ಇದುವರೆಗೆ ಕಂಡು ಬಂದಿಲ್ಲವಾದ್ದರಿಂದ ಫಲಿತಾಂಶ ಯಶಸ್ವಿ ಎನಿಸಿದೆ. ಇದೊಂದು ಅತ್ಯುತ್ತಮ ಪ್ಯಾಕೆಜಿಂಗ್, ವಸ್ತುಗಳಿಗೆ ಬಳೆಸಬಹುದಾದ ವಸ್ತುವಾಗಿದೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...