Home / ಕವನ / ಕವಿತೆ / ಹಸುಮಗಳಽ ನೀಲಮ್ಮ

ಹಸುಮಗಳಽ ನೀಲಮ್ಮ

ಹಸುಮಗಳ ನೀಲಮ್ಮ ಬಸವಗ ಶರಣೆನ್ನ|
ನಸಲಿ ಮಾರಗದ ವಡಿಯಾಗ| ಈ ಶರಣವು ಮಾಡಿ|
ಹಸಿಗಿ ಬಾಗನ್ನಿ ಗರುಡಽವ ||೧||

ಹಕ್ಕಿ ಹಸಿಗೊಯ್ಯ ಕೋಗಿಲ ಪತ್ತಽಲೊಯ್ಯ|
ಅಕ್ಕ ನಾಗಮ್ಮ ಕತೀ ನಡಿಸ| ಈ ಸೋಬಾನಾ|
ಸಾಗನೂರವರ ಮನಿಯಾಗ ||೨||

ಆರಸರ ಹೆಂಡಽರ್‍ಯಾ ಅರವತ್ತಿನ ರಾಣ್ಯರ್‍ಯಾ|
ನೀಲವಽರಣ ಬಳಿಯವರ್‍ಯಾ| ನಮ್ಮವ್ವಗಳಿರ್‍ಯಾ|
ಬೇಗ ಸೋಬನಕ ಬರಽಬೇಕ ||೩||

ಗೌಡರ ಹೆಂಡರ್‍ಯಾ ಅರವತ್ತಿನ ರಾಣ್ಯಾರ್‍ಯಾ|
ನೀಲವಽರಣದ ಬಳಿಯವರ್‍ಯಾ| ನಮ್ಮವ್ವಗಳಿರ್‍ಯಾ|
ಬೇಗ ಸೋಬನಕ ಬರಽಬೇಕ ||೪||

ಹೆಂದಽರ ಮ್ಯಾಲಲ್ಲಿ ಜೋಡೆಡ್ಡು ಗಿಣಿ ಕೂತು|
ಪಂಕನಲ್ಲಾಡಿ ನಗತಾವ| ಅವು ಮಾತಾಡ್ಯಾವ|
ಅಕ್ಕ ಭಾವಾಗ ವರನಂದ ||೫||

ಕುಂಬೀಯನೆ ಮ್ಯಾಲ ಜೋಡೆಡ್ಡ ಗಿಣಿ ಕೂತು|
ಕಂಗನಲ್ಲಾಡಿ ನಗತಾವ| ಅವು ಮಾತಾಡ್ಯಾವ|
ತಂಗಿ ಮೈದುನಗ ವರನಂದ ||೬||

ಇಟ್ಟು ಹಾಡನೆಲ್ಲ ಒತ್ತಿ ಭರಣವ ತುಂಬಿ|
ವಜ್ಜರದ ಕೀಲಿ ಜಡಽದೇವ| ಈ ನಮ್ಮಽ ಹಾಡ|
ಸೋಬನಿದ್ದಲ್ಲಿ ತಗಽದೇವ ||೭||
*****

ಫಲಶೋಭನದ ಸಂಭ್ರಮವು ಇದರಲ್ಲಿ ವರ್ಣಿಸಲ್ಪಟ್ಟಿದೆ.

ಛಂದಸ್ಸು:- ತ್ರಿಪದಿ.

ಶಬ್ದ ಪ್ರಯೋಗಗಳು:- ನಸಲಿಮಾರಗ=ನೊಸಲಮಾರ್ಗ(?) ಅರವತ್ತಿನ ರಾಣ್ಯರ್‍ಯಾ=ದೊಡ್ಡ ಮನೆತನದ ಮೂಲಕ ಮನೆಗೆಲಸವು ಮುಗಿಯುವುದಕ್ಕೆ ತಡೆವಾಗುವುದರಿಂದ ಅರವೊತ್ತಿಗೆ ಸರವೊತ್ತಿಗೆ ಊಟ ಮಾಡುವರು. ಎಡ್ಡು=ಎರಡು. ಪಂಕನಲ್ಲಾಡಿ-ಪಕ್ಕಗಳನ್ನು ಅಲುಗಿಸಿ. ಕಂಗದಲ್ಲಾಡಿ=ಗರಿಗಳನ್ನು ಅದುರಿಸಿ. ವರ=ತಕ್ಕ. ಹೆಕ್ಕಿ ಹಸಿಗೊಯ್ಯ=ಹಕ್ಕಿಗಳಿರಾ ಸೇಸೆ ಎರೆಯಿರಿ. ಕತೀ ನಡಿಸು=ಕಾರ್ಯವನ್ನು ಸಾಗಿಸು.

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...