Home / ಕವನ / ಕವಿತೆ / ಹಸುಮಗಳಽ ನೀಲಮ್ಮ

ಹಸುಮಗಳಽ ನೀಲಮ್ಮ

ಹಸುಮಗಳ ನೀಲಮ್ಮ ಬಸವಗ ಶರಣೆನ್ನ|
ನಸಲಿ ಮಾರಗದ ವಡಿಯಾಗ| ಈ ಶರಣವು ಮಾಡಿ|
ಹಸಿಗಿ ಬಾಗನ್ನಿ ಗರುಡಽವ ||೧||

ಹಕ್ಕಿ ಹಸಿಗೊಯ್ಯ ಕೋಗಿಲ ಪತ್ತಽಲೊಯ್ಯ|
ಅಕ್ಕ ನಾಗಮ್ಮ ಕತೀ ನಡಿಸ| ಈ ಸೋಬಾನಾ|
ಸಾಗನೂರವರ ಮನಿಯಾಗ ||೨||

ಆರಸರ ಹೆಂಡಽರ್‍ಯಾ ಅರವತ್ತಿನ ರಾಣ್ಯರ್‍ಯಾ|
ನೀಲವಽರಣ ಬಳಿಯವರ್‍ಯಾ| ನಮ್ಮವ್ವಗಳಿರ್‍ಯಾ|
ಬೇಗ ಸೋಬನಕ ಬರಽಬೇಕ ||೩||

ಗೌಡರ ಹೆಂಡರ್‍ಯಾ ಅರವತ್ತಿನ ರಾಣ್ಯಾರ್‍ಯಾ|
ನೀಲವಽರಣದ ಬಳಿಯವರ್‍ಯಾ| ನಮ್ಮವ್ವಗಳಿರ್‍ಯಾ|
ಬೇಗ ಸೋಬನಕ ಬರಽಬೇಕ ||೪||

ಹೆಂದಽರ ಮ್ಯಾಲಲ್ಲಿ ಜೋಡೆಡ್ಡು ಗಿಣಿ ಕೂತು|
ಪಂಕನಲ್ಲಾಡಿ ನಗತಾವ| ಅವು ಮಾತಾಡ್ಯಾವ|
ಅಕ್ಕ ಭಾವಾಗ ವರನಂದ ||೫||

ಕುಂಬೀಯನೆ ಮ್ಯಾಲ ಜೋಡೆಡ್ಡ ಗಿಣಿ ಕೂತು|
ಕಂಗನಲ್ಲಾಡಿ ನಗತಾವ| ಅವು ಮಾತಾಡ್ಯಾವ|
ತಂಗಿ ಮೈದುನಗ ವರನಂದ ||೬||

ಇಟ್ಟು ಹಾಡನೆಲ್ಲ ಒತ್ತಿ ಭರಣವ ತುಂಬಿ|
ವಜ್ಜರದ ಕೀಲಿ ಜಡಽದೇವ| ಈ ನಮ್ಮಽ ಹಾಡ|
ಸೋಬನಿದ್ದಲ್ಲಿ ತಗಽದೇವ ||೭||
*****

ಫಲಶೋಭನದ ಸಂಭ್ರಮವು ಇದರಲ್ಲಿ ವರ್ಣಿಸಲ್ಪಟ್ಟಿದೆ.

ಛಂದಸ್ಸು:- ತ್ರಿಪದಿ.

ಶಬ್ದ ಪ್ರಯೋಗಗಳು:- ನಸಲಿಮಾರಗ=ನೊಸಲಮಾರ್ಗ(?) ಅರವತ್ತಿನ ರಾಣ್ಯರ್‍ಯಾ=ದೊಡ್ಡ ಮನೆತನದ ಮೂಲಕ ಮನೆಗೆಲಸವು ಮುಗಿಯುವುದಕ್ಕೆ ತಡೆವಾಗುವುದರಿಂದ ಅರವೊತ್ತಿಗೆ ಸರವೊತ್ತಿಗೆ ಊಟ ಮಾಡುವರು. ಎಡ್ಡು=ಎರಡು. ಪಂಕನಲ್ಲಾಡಿ-ಪಕ್ಕಗಳನ್ನು ಅಲುಗಿಸಿ. ಕಂಗದಲ್ಲಾಡಿ=ಗರಿಗಳನ್ನು ಅದುರಿಸಿ. ವರ=ತಕ್ಕ. ಹೆಕ್ಕಿ ಹಸಿಗೊಯ್ಯ=ಹಕ್ಕಿಗಳಿರಾ ಸೇಸೆ ಎರೆಯಿರಿ. ಕತೀ ನಡಿಸು=ಕಾರ್ಯವನ್ನು ಸಾಗಿಸು.

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...