Home / ಕವನ / ಕವಿತೆ / ಹಸುಮಗಳಽ ನೀಲಮ್ಮ

ಹಸುಮಗಳಽ ನೀಲಮ್ಮ

ಹಸುಮಗಳ ನೀಲಮ್ಮ ಬಸವಗ ಶರಣೆನ್ನ|
ನಸಲಿ ಮಾರಗದ ವಡಿಯಾಗ| ಈ ಶರಣವು ಮಾಡಿ|
ಹಸಿಗಿ ಬಾಗನ್ನಿ ಗರುಡಽವ ||೧||

ಹಕ್ಕಿ ಹಸಿಗೊಯ್ಯ ಕೋಗಿಲ ಪತ್ತಽಲೊಯ್ಯ|
ಅಕ್ಕ ನಾಗಮ್ಮ ಕತೀ ನಡಿಸ| ಈ ಸೋಬಾನಾ|
ಸಾಗನೂರವರ ಮನಿಯಾಗ ||೨||

ಆರಸರ ಹೆಂಡಽರ್‍ಯಾ ಅರವತ್ತಿನ ರಾಣ್ಯರ್‍ಯಾ|
ನೀಲವಽರಣ ಬಳಿಯವರ್‍ಯಾ| ನಮ್ಮವ್ವಗಳಿರ್‍ಯಾ|
ಬೇಗ ಸೋಬನಕ ಬರಽಬೇಕ ||೩||

ಗೌಡರ ಹೆಂಡರ್‍ಯಾ ಅರವತ್ತಿನ ರಾಣ್ಯಾರ್‍ಯಾ|
ನೀಲವಽರಣದ ಬಳಿಯವರ್‍ಯಾ| ನಮ್ಮವ್ವಗಳಿರ್‍ಯಾ|
ಬೇಗ ಸೋಬನಕ ಬರಽಬೇಕ ||೪||

ಹೆಂದಽರ ಮ್ಯಾಲಲ್ಲಿ ಜೋಡೆಡ್ಡು ಗಿಣಿ ಕೂತು|
ಪಂಕನಲ್ಲಾಡಿ ನಗತಾವ| ಅವು ಮಾತಾಡ್ಯಾವ|
ಅಕ್ಕ ಭಾವಾಗ ವರನಂದ ||೫||

ಕುಂಬೀಯನೆ ಮ್ಯಾಲ ಜೋಡೆಡ್ಡ ಗಿಣಿ ಕೂತು|
ಕಂಗನಲ್ಲಾಡಿ ನಗತಾವ| ಅವು ಮಾತಾಡ್ಯಾವ|
ತಂಗಿ ಮೈದುನಗ ವರನಂದ ||೬||

ಇಟ್ಟು ಹಾಡನೆಲ್ಲ ಒತ್ತಿ ಭರಣವ ತುಂಬಿ|
ವಜ್ಜರದ ಕೀಲಿ ಜಡಽದೇವ| ಈ ನಮ್ಮಽ ಹಾಡ|
ಸೋಬನಿದ್ದಲ್ಲಿ ತಗಽದೇವ ||೭||
*****

ಫಲಶೋಭನದ ಸಂಭ್ರಮವು ಇದರಲ್ಲಿ ವರ್ಣಿಸಲ್ಪಟ್ಟಿದೆ.

ಛಂದಸ್ಸು:- ತ್ರಿಪದಿ.

ಶಬ್ದ ಪ್ರಯೋಗಗಳು:- ನಸಲಿಮಾರಗ=ನೊಸಲಮಾರ್ಗ(?) ಅರವತ್ತಿನ ರಾಣ್ಯರ್‍ಯಾ=ದೊಡ್ಡ ಮನೆತನದ ಮೂಲಕ ಮನೆಗೆಲಸವು ಮುಗಿಯುವುದಕ್ಕೆ ತಡೆವಾಗುವುದರಿಂದ ಅರವೊತ್ತಿಗೆ ಸರವೊತ್ತಿಗೆ ಊಟ ಮಾಡುವರು. ಎಡ್ಡು=ಎರಡು. ಪಂಕನಲ್ಲಾಡಿ-ಪಕ್ಕಗಳನ್ನು ಅಲುಗಿಸಿ. ಕಂಗದಲ್ಲಾಡಿ=ಗರಿಗಳನ್ನು ಅದುರಿಸಿ. ವರ=ತಕ್ಕ. ಹೆಕ್ಕಿ ಹಸಿಗೊಯ್ಯ=ಹಕ್ಕಿಗಳಿರಾ ಸೇಸೆ ಎರೆಯಿರಿ. ಕತೀ ನಡಿಸು=ಕಾರ್ಯವನ್ನು ಸಾಗಿಸು.

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...