Home / ಕವನ / ಕವಿತೆ / ಕಾಳಗ

ಕಾಳಗ

ಇರಿಯಲೆಂದೆ ಕಟ್ಟಿದ ಚಾಕು
ಇರಿಯದಿರುವುದೆ ಎದುರಾಳಿಯ ಎದೆಹೊಕ್ಕು
ಇರಿದು ತಣಿಯಬೇಕು
ರಕ್ತದ ಮಡುವಿನಲ್ಲಿ
ಮನುಕುಲದ ರೋಷ ಕಾಯಿಸಿದ ಉಕ್ಕು

ಹತ್ತು ಹೇಂಟೆಗಳರಸ
ಇನ್ನೆಷ್ಟೋ ಮರಿಗಳ ಮೂಲಪುರುಷ
ಇಡಿಯ ಬಯಲನ್ನೆ ಅವಲೋಕಿಸಿ
ನಿಂತಿದೆ ಹೇಗೆ ಕತ್ತೆತ್ತಿ ಕಣ್ಣ ಹೊರಳಿಸಿ
ತನ್ನ ಎತ್ತರಕ್ಕಿಂತಲು ಉತ್ತರ ನಟಿಸಿ
ಕಾಲ ಕೆರೆಯುತ್ತ ಕೂಗಿ ಕರೆಯುತ್ತ
ಅದೆಂಥ ಹಸಿವೊ ಕಾಮವೊ
ಮರಣದ ಛಲವೊ!

ಕಲ್ಲಿಸಂಕದ ಪೂಂಜರೇನು ಮಾಡುತ್ತಿದ್ದಾರೆ ಇಲ್ಲಿ?
ತಮ್ಮ ಹುಂಜದ ಘಾಯ ಹೊಲಿಯುತ್ತಿದ್ದಾರೆ
ತುಂಬುತ್ತಿದ್ದಾರೆ ಅದಕ್ಕೆ ಪ್ರಾಣವಾಯು
ಕಿವಿಯಲೇನೋ ಹೇಳುತ್ತಿದ್ದಾರೆ
ಕೆರಳಿಸುತ್ತಿದ್ದಾರೆ ಇತಿಹಾಸಪೂರ್ವದ ನೆನಪುಗಳ
ಕೊನೆಗೂ ಧರೆಯಲ್ಲಿ ಮಲಗುವ ತನಕ
ಪ್ರತಿಯೊಂದು ಘಳಿಗೆಯೂ ಪುಳಕ

ಕೆರೆಯೇರಿಯಲ್ಲಿ ಹಾದು ಗುಡ್ಡಗಳ ದಾಟಿ
ಬಯಲುಗಳ ನಡೆದು ಬಂದವರು ಇವರು
ಸಂಜೆ ಮರಳುವರು
ಬಂದ ಹಾದಿಯಲಿ
ಬಟ್ಟೆಬರೆ ರಕ್ತಮಯ

ಪ್ರತಿಯೊಂದು ಸಂಕ್ರಾಂತಿಯೂ ದಿಗ್ವಿಜಯ
ತುಂಡಾದ ರೆಕ್ಕೆಪುಕ್ಕ ಯಾವ ಲೆಕ್ಕ?
ಒಂದೊಂದು ಕಂಕುಳಲ್ಲೂ
ಒಂದೊಂದು ಹಿಟ್ಟಿನ ಹುಂಜ
ಆಹ! ಕೂಗಿತೆ ಮೂರು ಬಾರಿ?
ಇಲ್ಲ, ಇದು ಕತ್ತಲೆಯ ದಾರಿ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...