ಕಾಳಗ

ಇರಿಯಲೆಂದೆ ಕಟ್ಟಿದ ಚಾಕು
ಇರಿಯದಿರುವುದೆ ಎದುರಾಳಿಯ ಎದೆಹೊಕ್ಕು
ಇರಿದು ತಣಿಯಬೇಕು
ರಕ್ತದ ಮಡುವಿನಲ್ಲಿ
ಮನುಕುಲದ ರೋಷ ಕಾಯಿಸಿದ ಉಕ್ಕು

ಹತ್ತು ಹೇಂಟೆಗಳರಸ
ಇನ್ನೆಷ್ಟೋ ಮರಿಗಳ ಮೂಲಪುರುಷ
ಇಡಿಯ ಬಯಲನ್ನೆ ಅವಲೋಕಿಸಿ
ನಿಂತಿದೆ ಹೇಗೆ ಕತ್ತೆತ್ತಿ ಕಣ್ಣ ಹೊರಳಿಸಿ
ತನ್ನ ಎತ್ತರಕ್ಕಿಂತಲು ಉತ್ತರ ನಟಿಸಿ
ಕಾಲ ಕೆರೆಯುತ್ತ ಕೂಗಿ ಕರೆಯುತ್ತ
ಅದೆಂಥ ಹಸಿವೊ ಕಾಮವೊ
ಮರಣದ ಛಲವೊ!

ಕಲ್ಲಿಸಂಕದ ಪೂಂಜರೇನು ಮಾಡುತ್ತಿದ್ದಾರೆ ಇಲ್ಲಿ?
ತಮ್ಮ ಹುಂಜದ ಘಾಯ ಹೊಲಿಯುತ್ತಿದ್ದಾರೆ
ತುಂಬುತ್ತಿದ್ದಾರೆ ಅದಕ್ಕೆ ಪ್ರಾಣವಾಯು
ಕಿವಿಯಲೇನೋ ಹೇಳುತ್ತಿದ್ದಾರೆ
ಕೆರಳಿಸುತ್ತಿದ್ದಾರೆ ಇತಿಹಾಸಪೂರ್ವದ ನೆನಪುಗಳ
ಕೊನೆಗೂ ಧರೆಯಲ್ಲಿ ಮಲಗುವ ತನಕ
ಪ್ರತಿಯೊಂದು ಘಳಿಗೆಯೂ ಪುಳಕ

ಕೆರೆಯೇರಿಯಲ್ಲಿ ಹಾದು ಗುಡ್ಡಗಳ ದಾಟಿ
ಬಯಲುಗಳ ನಡೆದು ಬಂದವರು ಇವರು
ಸಂಜೆ ಮರಳುವರು
ಬಂದ ಹಾದಿಯಲಿ
ಬಟ್ಟೆಬರೆ ರಕ್ತಮಯ

ಪ್ರತಿಯೊಂದು ಸಂಕ್ರಾಂತಿಯೂ ದಿಗ್ವಿಜಯ
ತುಂಡಾದ ರೆಕ್ಕೆಪುಕ್ಕ ಯಾವ ಲೆಕ್ಕ?
ಒಂದೊಂದು ಕಂಕುಳಲ್ಲೂ
ಒಂದೊಂದು ಹಿಟ್ಟಿನ ಹುಂಜ
ಆಹ! ಕೂಗಿತೆ ಮೂರು ಬಾರಿ?
ಇಲ್ಲ, ಇದು ಕತ್ತಲೆಯ ದಾರಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಶ್ವಕರ್ತನ ಗುಡಿ
Next post ಪ್ರಜಾವಾಣಿ

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

cheap jordans|wholesale air max|wholesale jordans|wholesale jewelry|wholesale jerseys