Home / ಕವನ / ಕವಿತೆ / ಪಂಚರಾತ್ರ (ತೊಗಲುಬೊಂಬೆಯಾಟ)

ಪಂಚರಾತ್ರ (ತೊಗಲುಬೊಂಬೆಯಾಟ)

ಜಗದ ಜನಶಕ್ತಿಗೆ
ನಮೋ ನಮೋ ||

ಬಣ್ಣದಾಟದ ನೆಲೆಗೆ
ನಮೋ ನಮೋ ||

ಕಲಾ ಸ್ವಾದಕನಿಗೆ
ನಮೋ ನಮೋ ||

ಕಲಾ ಪ್ರೋತ್ಸಾಹಕನಿಗೆ
ನಮೋ ನಮೋ ||

ಧನ್ಯತೆಯಿಂ ಕೈಮುಗಿವೆ
ಎನ್ನೆದುರಿನ ಜನಶಕ್ತಿಗೆ

ನಮೋ ನಮೋ ಎನ್ನುವೆ
ಎನ್ನೆದುರಿನ ಮನಶಕ್ತಿಗೆ
ನಮೋ ನಮೋ
ನಮೋ ನಮೋ
ನಮೋ ನಮೋ
ನಮೋ ನಮೋ

ಹಾಡು ೧ :     ಭಾರತವಿದು ಭಾರತ
ಜನ ಮಹಾಭಾರತ ||

ವ್ಯಾಸರಿಂ ರಚಿತ ಭಾರತ
ಕೋಟಿ ಕಿರಣ ಪ್ರಭಾತ
ಜಗವ ಕಾಣ್ವ ಬಂಧನ
ಸಕಲವೂ ನವ ದರ್ಶನ ||

ಅದರೊಂದು ತುಣುಕು
ಈ ಆಟದ ಇಣಕು
ಭಾಸನೆಂಬ ಕವಿಯು
ಸಂಸ್ಕೃತ ಪ್ರತಿಭೆಯು ||

ಅವ ಕಂಡ ಭಾರತವಿದು
ಕತೆ ವಿರಾಟ ಪರ್ವದ್ದು
ಹೆಸರಿಟ್ಟನು ಪಂಚರಾತ್ರ
ನೋಡಿ ಶಾಂತಿಯ ಪಾತ್ರ ||

ಹಾಡು ೨ :     ರಾಜಸೂಯ ಯಾಗವನು
ಮಾಡಿ ಧೀರ ದುರ್ಯೋಧನನು
ನೆರೆದರು ಸಕಲರಸರು
ಏಕಛತ್ರಾಧಿಪತ್ಯವನೊಪ್ಪಲೆಂದು ||

ಯಾಗದಲಿ ಸಂತೃಪ್ತಿ
ಭೂರಿ ಬೋಜನಗಳಾದವು
ಅರಸುಗುಳಿಯಿತು ಬಾಕಿ
ದ್ವಿಜರ ಕೊಡುಗೆ ಕಾಣಿಕೆ ||

ಹಾಡು ೩ :     ಹೇಗೆ ಹೇಳಲಿ ವತ್ಸ
ಮನದೊಳಗಣ ವ್ಯಥೆಯನು
ತಾಳಲಾರದೆ ಉಮ್ಮಳಿತ
ಲೋಚನ ಜಲಕಳಿತವನು ||

ಹಡು ೪ :     ಕೊಡುವುದು ಕೊಡುವಲ್ಲಿ
ಇಹುದು ದೊಡ್ಡತನವು
ಕೊಡದೆ ಕೊಸರಾಡಿದರೆ
ಬಹುದು ದಡ್ಡತನವು ||

ಹಾಡು ೫ :     ಪಂಚರಾತ್ರದೊಳು ತನ್ನಿ
ಪಾಂಡವರಿಹ ಕುರುಹನ್ನು
ಪಡೆಯಿರಿ ಅರ್ಧ ರಾಜ್ಯ
ಮುಕ್ತ ದಾಯಾದಿ ವ್ಯಾಜ್ಯ ||

ಹಾಡು ೬ :     ನಡೆವ ಗೋಗ್ರಹಣ
ದೊರೆ ವಿರಾಟನ ಮಾನ ಹರಣ
ಶಕುನಿ ಒಡ್ಡಿದ ತಂತ್ರ
ಭೀಷ್ಮ ದ್ರೋಣದರ ನವಮಂತ್ರ ||

ಹಾಡು ೭ :     ಕೇಳಿಗುಂಪು ಗೋವುಗಳೆ
ಗಾನದಿಂಪಿನ ಸಂಗಾತಿಗಳೆ
ಸೊಂಪು ಮೇವಿನ ಬನದಲ್ಲಿ
ಚಂದ ಮೇಯಿರಿ ಹಗಲಲ್ಲಿ ||

ನಮ್ಮದಿದುವೆ ಗೋಕುಲ
ವಿರಾಟನ ಹೈನು ಸಂಕುಲ
ಬನ್ನಿ ಮಕ್ಕಳೆ ಬನ್ನಿ ಕುಣಿಯಲು
ತುರುವ ನಗರಕೆ ಅಟ್ಟಲು ||

ಇಂದು ರಾಜನ ವರ್ಧಂತಿ
ನಮಗೆ ಉಲ್ಲಸದಾ ಪಂಕ್ತಿ
ಕುಣಿದು ಹಾಡುತ ನಲಿಯುತ
ನಮ್ಮ ನೋವನು ಮರೆಯುತ ||

ಹಾಡು ೮ :     ಇವಳೆ ಬೃಹನ್ನಳೆ
ಇವನೆ ಬೃಹನ್ನಳ ||

ಗಂಡಿನೊಳಿಹ ಹೆಣ್ಣೆ
ಹೆಣ್ಣಿನೊಳಿಹ ಗಂಡೆ
ದ್ವೈತವದ್ವೈತವಾದ
ಮಾನವ ಪ್ರತೀಕವೆ ||

ಗಿರಿಜೇಶನರ್ಧ ನಾರಿ
ಜಗದೇಕತೆ ತೋರಿ
ಗಂಡ್ಹೆಣ್ಣು ಒಟ್ಟಾಗಿ
ಇರುವುದೆ ಬದುಕಾಗಿ ||

ಒಮ್ಮುಖ ಹೆಣ್ಣು
ಇಮ್ಮುಖ ಗಂಡು
ಸೇರಿ ಎರಡೂ
ಜಗಮುಖವಾಗಿ ||

ಹಾಡು ೯ :     ತಪ್ಪಿತೊಂದು ಯುದ್ಧ
ಗೋಗ್ರಹಣ ಪ್ರಸಿದ್ಧ ||

ಶಾಂತಿ ಪ್ರತೀಕದೀ ಯುದ್ಧ
ಅಜ್ಞಾತವಾಸದಲ್ಲಿದ್ದ
ಪಾಂಡವ ಗುರ್ತೀಗೆ ಸಿದ್ಧ
ಬೃಹನ್ನಳೆಯೇ ಗೆದ್ದ ||

ಕಾಲು ಕರೆದ ಯುದ್ಧ
ಮದುವೆಗಾಗಿ ಸಿದ್ಧ
ಗೋ ಸಂಕುಲವೆಲ್ಲ
ರಕ್ಷಿತವೊ ರಕ್ಷಿತ ||

ಹಾಡು ೧೦ :     ಕಾಲು ಕೆರೆದ ಯುದ್ಧ
ಕೌರವರಿಗೊ ಅಪದ್ಧ ||

ಗೋಗ್ರಹಣಕೆ ಹೋಗಿ
ಗಣ್ಯರಿಗೆ ಭಂಗವಾಗಿ
ಚಿಂತೆಯಲ್ಲಿ ಮುಳುಗಿ
ಸುಮಾರ್ಗ ಇಲ್ಲವಾಗಿ ||

ಅತಿರಥರಿಗೆಲ್ಲಾ
ಮಾನ ಹೋದವಲ್ಲ
ತಪ್ಪಿ ಯುದ್ಧ ಘೋರ
ಸಿಕ್ಕಿಬಿದ್ದ ಕುಮಾರ ||

ಹಾಡು ೧೧ :     ಧರ್ಮದ ಶ್ರೇಷ್ಠತೆ ಶಾಂತಿ
ಯುದ್ಧದ ಬೀಜ ಅಶಾಂತಿ ||

ಕೊಂದು ಕೊಲಿಸಿದ ಮಾನವ
ಆದನಯ್ಯೋ ಛೆ ದಾನವ
ಯುದ್ಧ ಮಾಡಿ ಗೆದ್ದವನು
ಸೋತು ದುಃಖವ ತಿಂದನು ||

ಸಾವನು ಬಯಸಿದ ಬಸಿರು
ಸಾಧಿಸಲಿ ಶಾಂತಿಯ ಹಸಿರು
ಯುದ್ಧ ತಪ್ಪಿಸದ ಕೀರ್ತಿಯು
ನವ ಜೀವನದ ಮದುವೆಯು ||

ಕೊಡುವ ಭಾಗವ ಕೊಟ್ಟರೆ
ಉಳಿವುದೇನದು ಕೆಟ್ಟರೆ
ಪ್ರೀತಿ ಮಮತೆ ಅಕ್ಕರೆ
ಬದುಕಿಗೆ ಜೀವ ಇವಿರೆ ||

*****

Leave a Reply

Your email address will not be published. Required fields are marked *

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...