ವಿಶ್ವಕರ್ತನ ಗುಡಿ

ಗರ್ಭಗುಡಿಯ ಕತ್ತಲು
ಜಡಿದ ಬಾಗಿಲ ಬೀಗ
ಶಿವನು ಆಗಿಹನೆ ಅಲ್ಲಿ ಬಂಧಿ
ವಿಶ್ವ ಕರ್ತನ ತಂದು
ಗುಡಿಯ ಬಂಧನವಿಟ್ಟು
ಮೆರೆದ ಮೌಢ್ಯವು ಮನುಜ ಬುದ್ಧಿ

ಹಲವು ನಾಮದ ಒಡೆಯ
ಸಕಲ ಸೃಷ್ಟಿಯ ಸುಧೆಯ
ಹರಿಸುವಾತಗೆ ಬೇಕೆ ಒಂದು ಮನೆಯು
ಜೀವ ಜೀವದ ಒಳಗೆ
ಹುದುಗಿರುವ ಆತ್ಮನವ
ಭಾವಿಸಲು ಸರ್ವರೂ ಅವನ ಕುಡಿಯು

ಸರ್ವಶಕ್ತನು ಅವನು ಸರ್ವಜ್ಞನು
ರವಿರಶ್ಮಿ ಪ್ರಭೆಯಲ್ಲೂ
ರಮ್ಯಶಶಿ ಕಳೆಯಲ್ಲೂ
ನೀಲಾಮಂಬುಧಿ ಆಳದಲ್ಲೂ
ಅಣುರಣತೃಣ ಕಾಷ್ಟದಲ್ಲೂ
ಸರ್ವವ್ಯಾಪಕನು

ಬಿಡು ನಿನ್ನ ಅಜ್ಞಾನ
ತಿಳಿ ಆತ್ಮವಿಜ್ಞಾನ
ಬೆಳಗುವುದು ಅವಿರತದಿ ಬ್ರಹ್ಮಜ್ಞಾನ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಮಾಧಾನ
Next post ಕಾಳಗ

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…