ಗರ್ಭಗುಡಿಯ ಕತ್ತಲು
ಜಡಿದ ಬಾಗಿಲ ಬೀಗ
ಶಿವನು ಆಗಿಹನೆ ಅಲ್ಲಿ ಬಂಧಿ
ವಿಶ್ವ ಕರ್ತನ ತಂದು
ಗುಡಿಯ ಬಂಧನವಿಟ್ಟು
ಮೆರೆದ ಮೌಢ್ಯವು ಮನುಜ ಬುದ್ಧಿ
ಹಲವು ನಾಮದ ಒಡೆಯ
ಸಕಲ ಸೃಷ್ಟಿಯ ಸುಧೆಯ
ಹರಿಸುವಾತಗೆ ಬೇಕೆ ಒಂದು ಮನೆಯು
ಜೀವ ಜೀವದ ಒಳಗೆ
ಹುದುಗಿರುವ ಆತ್ಮನವ
ಭಾವಿಸಲು ಸರ್ವರೂ ಅವನ ಕುಡಿಯು
ಸರ್ವಶಕ್ತನು ಅವನು ಸರ್ವಜ್ಞನು
ರವಿರಶ್ಮಿ ಪ್ರಭೆಯಲ್ಲೂ
ರಮ್ಯಶಶಿ ಕಳೆಯಲ್ಲೂ
ನೀಲಾಮಂಬುಧಿ ಆಳದಲ್ಲೂ
ಅಣುರಣತೃಣ ಕಾಷ್ಟದಲ್ಲೂ
ಸರ್ವವ್ಯಾಪಕನು
ಬಿಡು ನಿನ್ನ ಅಜ್ಞಾನ
ತಿಳಿ ಆತ್ಮವಿಜ್ಞಾನ
ಬೆಳಗುವುದು ಅವಿರತದಿ ಬ್ರಹ್ಮಜ್ಞಾನ
*****
ಆಂಗ್ಲಭಾಷಾ ಉಪನ್ಯಾಸಕಿ
ಪ್ರಕಟಿತ ಕೃತಿಗಳು: ಏಣಿ ಮತ್ತು ಪದಗಳೊಂದಿಗೆ ನಾನು[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ [ಅಂಕಣಬರಹ ಕೃತಿ]
ಪ್ರಶಸ್ತಿಗಳು: ಏಣಿ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ,
ಸಂಕ್ರಮಣ ಕಾವ್ಯ ಪ್ರಶಸ್ತಿ ೨೦೧೬, ರವಿಕಿರಣ ಸಾಹಿತ್ಯ ಪ್ರತಿಷ್ಠಾನ ಬೆಂಗಳೂರು ಪ್ರಥಮ ಕಥಾ ಬಹುಮಾನ ೨೦೧೮ , ತುಷಾರ ಮಾಸ ಪತ್ರಿಕೆಯ ಕ್ಯಾಲಿಫೋನರ್ಿಯಾ ಕಾವ್ಯಾಂಜಲಿ ತೃತೀಯ ಕಥಾ ಬಹುಮಾನ ೨೦೧೮ ಇತ್ಯಾದಿ ಬಹುಮಾನ ಬಂದಿದೆ.ಮೊಗವೀರ ಮಾಸಪತ್ರಿಕೆ ಮುಂಬಯಿ ೨೦೧೭ರ ಸಮಾಧಾನಕರ ಕಥಾ ಬಹುಮಾನ, ಕರಾವಳಿ ಮುಂಜಾವು ದಿನಪತ್ರಿಕೆಯ ದೀಪಾವಳಿ ಕಥಾ ಸ್ಪಧರ್ೆಗಳಲ್ಲಿ ಬಹುಮಾನ ಇತ್ಯಾದಿ ಬಂದಿರುತ್ತವೆ.