ವಿಶ್ವಕರ್ತನ ಗುಡಿ

ಗರ್ಭಗುಡಿಯ ಕತ್ತಲು
ಜಡಿದ ಬಾಗಿಲ ಬೀಗ
ಶಿವನು ಆಗಿಹನೆ ಅಲ್ಲಿ ಬಂಧಿ
ವಿಶ್ವ ಕರ್ತನ ತಂದು
ಗುಡಿಯ ಬಂಧನವಿಟ್ಟು
ಮೆರೆದ ಮೌಢ್ಯವು ಮನುಜ ಬುದ್ಧಿ

ಹಲವು ನಾಮದ ಒಡೆಯ
ಸಕಲ ಸೃಷ್ಟಿಯ ಸುಧೆಯ
ಹರಿಸುವಾತಗೆ ಬೇಕೆ ಒಂದು ಮನೆಯು
ಜೀವ ಜೀವದ ಒಳಗೆ
ಹುದುಗಿರುವ ಆತ್ಮನವ
ಭಾವಿಸಲು ಸರ್ವರೂ ಅವನ ಕುಡಿಯು

ಸರ್ವಶಕ್ತನು ಅವನು ಸರ್ವಜ್ಞನು
ರವಿರಶ್ಮಿ ಪ್ರಭೆಯಲ್ಲೂ
ರಮ್ಯಶಶಿ ಕಳೆಯಲ್ಲೂ
ನೀಲಾಮಂಬುಧಿ ಆಳದಲ್ಲೂ
ಅಣುರಣತೃಣ ಕಾಷ್ಟದಲ್ಲೂ
ಸರ್ವವ್ಯಾಪಕನು

ಬಿಡು ನಿನ್ನ ಅಜ್ಞಾನ
ತಿಳಿ ಆತ್ಮವಿಜ್ಞಾನ
ಬೆಳಗುವುದು ಅವಿರತದಿ ಬ್ರಹ್ಮಜ್ಞಾನ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಮಾಧಾನ
Next post ಕಾಳಗ

ಸಣ್ಣ ಕತೆ

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

cheap jordans|wholesale air max|wholesale jordans|wholesale jewelry|wholesale jerseys