ವಿಶ್ವಕರ್ತನ ಗುಡಿ

ಗರ್ಭಗುಡಿಯ ಕತ್ತಲು
ಜಡಿದ ಬಾಗಿಲ ಬೀಗ
ಶಿವನು ಆಗಿಹನೆ ಅಲ್ಲಿ ಬಂಧಿ
ವಿಶ್ವ ಕರ್ತನ ತಂದು
ಗುಡಿಯ ಬಂಧನವಿಟ್ಟು
ಮೆರೆದ ಮೌಢ್ಯವು ಮನುಜ ಬುದ್ಧಿ

ಹಲವು ನಾಮದ ಒಡೆಯ
ಸಕಲ ಸೃಷ್ಟಿಯ ಸುಧೆಯ
ಹರಿಸುವಾತಗೆ ಬೇಕೆ ಒಂದು ಮನೆಯು
ಜೀವ ಜೀವದ ಒಳಗೆ
ಹುದುಗಿರುವ ಆತ್ಮನವ
ಭಾವಿಸಲು ಸರ್ವರೂ ಅವನ ಕುಡಿಯು

ಸರ್ವಶಕ್ತನು ಅವನು ಸರ್ವಜ್ಞನು
ರವಿರಶ್ಮಿ ಪ್ರಭೆಯಲ್ಲೂ
ರಮ್ಯಶಶಿ ಕಳೆಯಲ್ಲೂ
ನೀಲಾಮಂಬುಧಿ ಆಳದಲ್ಲೂ
ಅಣುರಣತೃಣ ಕಾಷ್ಟದಲ್ಲೂ
ಸರ್ವವ್ಯಾಪಕನು

ಬಿಡು ನಿನ್ನ ಅಜ್ಞಾನ
ತಿಳಿ ಆತ್ಮವಿಜ್ಞಾನ
ಬೆಳಗುವುದು ಅವಿರತದಿ ಬ್ರಹ್ಮಜ್ಞಾನ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಮಾಧಾನ
Next post ಕಾಳಗ

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…