ಜ್ಞಾನಯೋಗಿ

ಯಾರಿಗಿದೆ?
ಭವ್ಯ ಭವಿತವ್ಯದ ಮನಗಳಲಿ
ಅರಿವಿನ ಬೀಜ ಬಿತ್ತುವ
ಶಿವ ಕಾಯಕ.

ಯಾರಿಗಿದೆ?
ಅಲೆ ಅಲೆಯಾಗಿ ಸಾಗಿ ಬರುವ
ಶಕ್ತಿ ಸ್ವರೂಪಿಗಳ ಜೊತೆ
ಆತ್ಮೀಯ ಸಂಬಂಧಗಳಲಿ ರಾರಾಜಿಸಿ
ಶಾಶ್ವತ ಸಂಬಂಧ ಬೆಸೆಯುವ
ಸುವರ್ಣಾವಕಾಶ

ಯಾರಿಗಿದೆ?
ಇಣುಕಿ ಜೀವ ಸಂಪುಟಗಳಲಿ
ಪ್ರತಿಭಾ ಮಣಿಗಳ ಗುರುತಿಸಿ
ಪುಟವಿಟ್ಟು ಕರ್ತೃತ್ವ ಶೀಲರನ್ನಾಗಿ ಕಂಡರಿಸಿ
ನಾಡಿಗರ್ಪಿಸುವ ದೈವ.

ಯಾರಿಗಿದೆ?
ಕೂಡಿ ಆಡುವ, ಕಲಿಯುವ
ಸತ್ಯ ಚಿಂತನ, ಮಂಥನವ ಬಿಳೆಸಿ; ಬೆಳೆಯುವ,
ಜ್ಲಾನಯೋಗಿ ಪಥ.

ತಾರದಿರುವುದೇ?
ಹೋದಲ್ಲಿ, ಬಂದಲ್ಲಿ ಮಧುರ ಭಾವವ ಸೂಸುವ
ನಕ್ಷತ್ರ ನಗು
ಸಾರ್ಥಕ ಬಾಳಿನ ಸಂತಸ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಹುತಿ
Next post ಕಾಸಿದಡುಗೆ ಇದು ಕಾಸಿದ್ದು ಸರಿ ಇದೆಯಾ ?

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಕನಸು ದಿಟವಾಯಿತು

    ಪ್ರಕರಣ ೨ ಸೂರ್ಯೋದಯವಾಯಿತು. ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಕಾಫಿ ಸೇವನೆಯನ್ನು ಮಾಡುತ್ತಾ ರಂಗಣ್ಣನು ಹೆಂಡತಿಗೆ ಕನಸಿನ ಸಮಾಚಾರವನ್ನು ತಿಳಿಸಿದನು. ಆಕೆ- ಸರಿ, ಇನ್ನು ಈ ಹುಚ್ಚೊಂದು ನಿಮಗೆ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…