ಇವನು

ನನಗೆ ಗೊತ್ತು, ಈ ದೊಡ್ಡ ಕತೆ:
ನಾನು ನೆಪೋಲಿಯನ್, ನಾನು ಏಸು
ಎಂದು ಕಲ್ಪಿಸಿಕೊಂಡ ಹುಚ್ಚ ಕರುಣಾಜನಕ ಜೀವಿಗಳ
ಉನ್ಮಾದ, ವಿಕೃತಿ. ಸುದೀರ್ಘ ಕೇಶರಾಶಿ ಬೆಳೆಸುತ್ತ
ಮಂಡೆ ಬೋಳಿಸುತ್ತ ಕನಸು ಗಪಗಪ ತಿನ್ನುತ್ತ,
ಸತ್ಯದ ಕಿಡಿಹೊತ್ತಿಸುತ್ತ ಬೇಗೆಯಲ್ಲಿ ಬಾಡುತ್ತ ಇರುವಾಗ
ಈ ಬಡರೈತ, ಸಾವಧಾನ
ಬೆವರು ಬಸಿದು ಶುದ್ಧನಾಗುತ್ತ,
ಒಳಿತು ಕೆಡುಕಿನ ಅರಿವಿನ ಮರದ
ದೊಡ್ಡ ದೊಡ್ಡ ಕೊಂಬೆ ನೆರಳಲ್ಲಿ ಉಳುತ್ತ
ಅಲ್ಲೊಂದು ಹಣ್ಣುಮಾಗುವುದು ಕಾಣುತ್ತ
ತಿನ್ನದೆ ಸುಮ್ಮನಿದ್ದಾನೆ.
*****
ಮೂಲ: ಆರ್ ಎಸ್ ಥಾಮಸ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಂದ ಬಾಬಾ ನಂದ ಬಾಬಾ
Next post ಇಡಿಪಸ್ ಕಾಂಪ್ಲೆಕ್ಸನ ಡಿ.ಎಚ್ ಲಾರೆನ್ಸ್ – ರಮ್ಯ ಆದರೆ ಅಸ್ತವ್ಯಸ್ತ ಬದುಕು

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

cheap jordans|wholesale air max|wholesale jordans|wholesale jewelry|wholesale jerseys