ಇವನು

ನನಗೆ ಗೊತ್ತು, ಈ ದೊಡ್ಡ ಕತೆ:
ನಾನು ನೆಪೋಲಿಯನ್, ನಾನು ಏಸು
ಎಂದು ಕಲ್ಪಿಸಿಕೊಂಡ ಹುಚ್ಚ ಕರುಣಾಜನಕ ಜೀವಿಗಳ
ಉನ್ಮಾದ, ವಿಕೃತಿ. ಸುದೀರ್ಘ ಕೇಶರಾಶಿ ಬೆಳೆಸುತ್ತ
ಮಂಡೆ ಬೋಳಿಸುತ್ತ ಕನಸು ಗಪಗಪ ತಿನ್ನುತ್ತ,
ಸತ್ಯದ ಕಿಡಿಹೊತ್ತಿಸುತ್ತ ಬೇಗೆಯಲ್ಲಿ ಬಾಡುತ್ತ ಇರುವಾಗ
ಈ ಬಡರೈತ, ಸಾವಧಾನ
ಬೆವರು ಬಸಿದು ಶುದ್ಧನಾಗುತ್ತ,
ಒಳಿತು ಕೆಡುಕಿನ ಅರಿವಿನ ಮರದ
ದೊಡ್ಡ ದೊಡ್ಡ ಕೊಂಬೆ ನೆರಳಲ್ಲಿ ಉಳುತ್ತ
ಅಲ್ಲೊಂದು ಹಣ್ಣುಮಾಗುವುದು ಕಾಣುತ್ತ
ತಿನ್ನದೆ ಸುಮ್ಮನಿದ್ದಾನೆ.
*****
ಮೂಲ: ಆರ್ ಎಸ್ ಥಾಮಸ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಂದ ಬಾಬಾ ನಂದ ಬಾಬಾ
Next post ಇಡಿಪಸ್ ಕಾಂಪ್ಲೆಕ್ಸನ ಡಿ.ಎಚ್ ಲಾರೆನ್ಸ್ – ರಮ್ಯ ಆದರೆ ಅಸ್ತವ್ಯಸ್ತ ಬದುಕು

ಸಣ್ಣ ಕತೆ

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…