ಬಹುರೂಪಿ ಉಪಯೋಗದ ಭತ್ತದ ಹೊಟ್ಟು

ವಿಜ್ಞಾನ ಅವಿಷ್ಕಾರಗೊಂಡಂತೆ ನಿರುಪಯುಕ್ತ ವಸ್ತುಗಳಿಂದಲೂ ಕೂಡ ಹೊಸವಸ್ತುವನ್ನು ನಿರ್ಮಾಣ ಮಾಡುವ ಪ್ರಯೋಗಗಳು ನಡೆಯುತ್ತಲಿದೆ. ನಿರುಪಯುಕ್ತ ವಸ್ತುಗಳಾದ ಕಸ, ಕಡ್ಡಿ ಎಲೆ, ಸಿಪ್ಪೆಗಳಿಂದ ಅನೇಕ ವಸ್ತುಗಳನ್ನು ತಯಾರಿಸಲಾಗುತ್ತವೆ. ಇದರಂತೆ ವಿಜ್ಞಾನಿಗಳು ಭತ್ತದ ಸಿಪ್ಪೆಯ ಬೂದಿಯನ್ನು ಬಳಸಿ ಅಮೂಲ್ಯ ವೈವಿಧ್ಯ ವಸ್ತು- ಗಳನ್ನು, ಉಪಯೋಗಗಳನ್ನು ಕಂಡು ಹಿಡಿದಿದ್ದಾರೆ. ಈ ಭತ್ತದ ಬೂದಿಯಿಂದ ಉತ್ಕೃಷ್ಠಗುಣಮಟ್ಟದ ಸಿಮೆಂಟ್ ತಯಾರಿಸಲು ವಿಜ್ಞಾನಿಗಳು ಪ್ರಯತ್ನ ನಡೆಸಿದ್ದಾರೆ. ಈಗಾಗಲೇ ಬಳಕೆಯಲ್ಲಿರುವ ಇಂತಹ ಭತ್ತದ ಸಿಪ್ಪೆಯ ಬೂದಿ ಆಧಾರಿತ ಸಿಮೆಂಟ್ ಸಾಧಾರಣ ಸಿಮೆಂಟಿಗಿಂತಲೂ ಶ್ರೇ‍ಷ್ಠಮಟ್ಟದ್ದೆಂದು ತಿಳಿದು ಬರಿದಿದೆ. ಭತ್ತದ ಸಿಪ್ಪೆಯ ಬೂದಿಯು ಕಾಂಕ್ರಿಟ್ ತಂತ್ರಜ್ಞಾನದಲ್ಲಿಯೇ ಹೊಸಶಾಖೆಯೊಂದನ್ನು ತೆರೆದಿದೆ ಮಾತ್ರವಲ್ಲ “ಬಹುಪಯೋಗಿ” ಎಂದು ಖಚಿತವಾಗುತ್ತಲಿದೆ. ಸಿಮೆಂಟಿನಂತಹ ಪುಡಿರೂಪದ ವಸ್ತು ಅಷ್ಟೇ ಅಲ್ಲದೇ ಹೊಸ ನಮೂನೆಯ ಇಟ್ಟಗೆಗಳ ತಯಾರಿಕೆಯಲ್ಲಿಯೂ ಭತ್ತದ ಸಿಪ್ಪೆಯ ಬೂದಿಯನ್ನು ಬಳಸಲಾಗುತ್ತದೆ. ಕಾಂಕ್ರೀಟ್ ರಸ್ತೆನಿರ್ಮಾಣ ಕಾರ್ಯ- ದಲ್ಲಿಯೂ ಇಂತಹ ಭತ್ತದ ಸಿಪ್ಪೆಯ ಬೂದಿಯನ್ನು ಬಳಸಿಕೊಳ್ಳಬಹುದೆಂದು ಪ್ರಯೋಗಗಳಿಂದ ಕಂಡುಹಿಡಿಯ- ಲಾಗಿದೆ. ದಿನನಿತ್ಯ ಮನೆ ಮತ್ತು ಹೋಟೆಲ್‌ಗಳಲ್ಲಿ ಭತ್ತವನ್ನು ಸುಟ್ಟು ಬೂದಿಯಾದ ನಂತರ ನಿರುಪಯುಕ್ತವೆಂದು ಬಿಸಾಕುತ್ತಾರೆ. ಬಹುತೇಕ ಭತ್ತಕುಟ್ಟುವ ಯಂತ್ರಗಳು ಉಗುಳಿದ ಹೊಟ್ಟನ ರಾಶಿಯನ್ನು ತಿಪ್ಪೆಗೆಸೆಯುತ್ತಾರೆ. ಅಥವಾ ಬಿಸಾಕುತ್ತಾರೆ. ಅತ್ಯಂತ ಉಪಯುಕ್ತವಾಗುವ ಈ ಭತ್ತದ ಹೊಟ್ಟನಿಂದಾಗುವ ಉಪಯೋಗಗಳನ್ನು ತಿಳಿದು ಸದುಪಯೋಗಪಡಿಸಿಕೊಳ್ಳಬೇಕಿದೆ. ಅಥವಾ ಇಂತಹ ತಂತ್ರಜ್ಞಾನ ಇರುವಲ್ಲಿಗೆ ಭತ್ತದ ಹೊಟ್ಟನ ಲೋಡುಗಳನ್ನು ಸಾಗಾಣಿಕೆ ಮಾಡಿ ಅದರಿಂದಲೂ ಹಣಗಳಿಸಬಹುದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಪ್ಪು ಬಣ್ಣದ ಕೃಷ್ಣ ಎಷ್ಟು ಚಂದವೋ ನೀನು!
Next post ಯಕ್ಷಗಾನ ಮೇಳ, ಚೌಕಿ ಮತ್ತು ರಂಗಸ್ಥಳ

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

cheap jordans|wholesale air max|wholesale jordans|wholesale jewelry|wholesale jerseys