ಮಂಗಳ

ನನಗು ನಿನಗೂ ನಡುವೆ ಇಂಥ ಕೊರಕಲು ಇದ್ದು
ತಿಳಿಯದಿದ್ದುದು ಹೇಗೆ ಮಾರಾಯ?
ಅಡ್ದಬಿದ್ದಿದ್ದ ಈ ಲೊಡ್ಡು ಸಂಕವ ಗಟ್ಟಿ
ನೆಲವೆಂದೆ ಭ್ರಮಿಸಿದ್ದೆ ಎಂಥ ಮಡೆಯ!

ಇಷ್ಟು ದಿನ ಅದೃಷ್ಟವಿತ್ತು ಆ ಕಡೆ ಬರಲು
ಮುರಿದುಬಿದ್ದಿತು ಈಗ ಲೊಡ್ಡು ಹಲಗೆ,
ಚಂದ್ರಮಾಯೆಯು ಕವಿದ ಸ್ವಪ್ನನಗರಿಯಲಿ
ಕರ್ಪೂರ ಭವನಕ್ಕಿದ್ದ ಪರವಾನಿಗೆ!

ಅಲ್ಲಿ ಬಂದಿದ್ದಾಗ ಏನೆಲ್ಲ ತೋರಿಸಿದೆ
ಮಂಜುಮಂಜಾಗಿದ್ದ ಮಂತ್ರಲೋಕ!
ಕನಸಿನಲ್ಲಷ್ಟೆ ಬಿಗಿದಪ್ಪಿ ಮುದ್ದಿಟ್ಟರೂ
ವಂಶ ಬೆಳೆಸುವ ಹೆಣ್ಣ ಘನ ಕಾಯಕ!

ಮುಟ್ಟಿದರೆ ಸಾಕು ಥಟ್ಟನೆ ತೆರೆದು ಬಾಗಿಲು
ರಂಭೆ ಊರ್ವಶಿ ಮೇನಕೆಯರ ಸಾಲು;
ಬೀದಿ ಹೆಣ್ಣೂ ಸಿಗದೆ ಉರಿ ಕೆರಳುತಿದ್ದಂಥ
ತಿರುಕ ಬದುಕಿಗೆ ಗಾಳಿ, ಜೇನು ಹಾಲು!

ಬೆಳುದಿಂಗಳಲಿ ಬರೆದ ಗಾಳಿಮೈ ಬಾಲೆಯರ
ಬಾಳೆತೋಟಕ್ಕೆ ನಾ ಲಗ್ಗೆ ಹೊಡೆದೆ;
ತೊಣಚಿ ಹೊಕ್ಕಿದ ಗೂಳಿ ಸೊಕ್ಕಿ ಸೊಟ್ಟಗೆ ಓಡಿ
ಬಟ್ಟೆ ತುಂಬಾ ಕೆಟ ಚಿತ್ರ ಬರೆದೆ.

ಮದುವೆಯಾಗಲು ಬಯಸಿ ಸಿಗದ ಚೆಲುವೆಯರನ್ನ
ತಂಗಿ ಎಂದಾದರೂ ಕರೆವ ಕಲೆಯ,
ಕಲಿಸಿದೆಯೊ ಕೀಟಲೆಗೆ ಮೈಮುಟ್ಚಿ ಕಣ್ಮುಚ್ಚಿ
ಜೂಟಾಟಕೆಳೆವ ಆದರ್ಶರತಿಯ!

ಎಲ್ಲಿ ದೊರೆತಾರು ಬಿಡು ನಿನ್ನಂಥ ಕಲೆಗಾರ
ಗೀರ್ವಾಣರಾಗದಲ್ಲೆ ಎಲ್ಲ ವ್ಯವಹಾರ;
ಗುಗ್ಗು ಭೋಳೇರಾಮರನ್ನು ಹಳ್ಳಕ್ಕೆ ತಳ್ಳಿ
ಆಯ್ತು ನಿನ್ನಂಗಡಿಗೆ ಪೂರ್ತಿವ್ಯಾಪಾರ!

ಸಂಕ ಮುರಿದಿದೆ, ನಡುವೆ ಗಡಿ ಎದ್ದಿದೆ,
ನಮ್ಮ ವ್ಯವಹಾರಕ್ಕೆ ಕೊನೆ ಬಿದ್ದಿದೆ;
ದಾಕ್ಷಿಣ್ಯ ದಡ್ಡತನ ಹೆಣೆದ ಸಂಬಂಧಕ್ಕೆ
ಹಳೆರಾಗದಲ್ಲಿ ಮಂಗಳ ಹಾಡುವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾರ್ಸ್‌ಮಾರಿ ರೋಗ
Next post ಬನ್ನಿ ಮಕ್ಕಳೆ ಚಂದ ಮಕ್ಕಳೆ

ಸಣ್ಣ ಕತೆ

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

cheap jordans|wholesale air max|wholesale jordans|wholesale jewelry|wholesale jerseys