Home / ಕವನ / ಕವಿತೆ / ಮಂಗಳ

ಮಂಗಳ

ನನಗು ನಿನಗೂ ನಡುವೆ ಇಂಥ ಕೊರಕಲು ಇದ್ದು
ತಿಳಿಯದಿದ್ದುದು ಹೇಗೆ ಮಾರಾಯ?
ಅಡ್ದಬಿದ್ದಿದ್ದ ಈ ಲೊಡ್ಡು ಸಂಕವ ಗಟ್ಟಿ
ನೆಲವೆಂದೆ ಭ್ರಮಿಸಿದ್ದೆ ಎಂಥ ಮಡೆಯ!

ಇಷ್ಟು ದಿನ ಅದೃಷ್ಟವಿತ್ತು ಆ ಕಡೆ ಬರಲು
ಮುರಿದುಬಿದ್ದಿತು ಈಗ ಲೊಡ್ಡು ಹಲಗೆ,
ಚಂದ್ರಮಾಯೆಯು ಕವಿದ ಸ್ವಪ್ನನಗರಿಯಲಿ
ಕರ್ಪೂರ ಭವನಕ್ಕಿದ್ದ ಪರವಾನಿಗೆ!

ಅಲ್ಲಿ ಬಂದಿದ್ದಾಗ ಏನೆಲ್ಲ ತೋರಿಸಿದೆ
ಮಂಜುಮಂಜಾಗಿದ್ದ ಮಂತ್ರಲೋಕ!
ಕನಸಿನಲ್ಲಷ್ಟೆ ಬಿಗಿದಪ್ಪಿ ಮುದ್ದಿಟ್ಟರೂ
ವಂಶ ಬೆಳೆಸುವ ಹೆಣ್ಣ ಘನ ಕಾಯಕ!

ಮುಟ್ಟಿದರೆ ಸಾಕು ಥಟ್ಟನೆ ತೆರೆದು ಬಾಗಿಲು
ರಂಭೆ ಊರ್ವಶಿ ಮೇನಕೆಯರ ಸಾಲು;
ಬೀದಿ ಹೆಣ್ಣೂ ಸಿಗದೆ ಉರಿ ಕೆರಳುತಿದ್ದಂಥ
ತಿರುಕ ಬದುಕಿಗೆ ಗಾಳಿ, ಜೇನು ಹಾಲು!

ಬೆಳುದಿಂಗಳಲಿ ಬರೆದ ಗಾಳಿಮೈ ಬಾಲೆಯರ
ಬಾಳೆತೋಟಕ್ಕೆ ನಾ ಲಗ್ಗೆ ಹೊಡೆದೆ;
ತೊಣಚಿ ಹೊಕ್ಕಿದ ಗೂಳಿ ಸೊಕ್ಕಿ ಸೊಟ್ಟಗೆ ಓಡಿ
ಬಟ್ಟೆ ತುಂಬಾ ಕೆಟ ಚಿತ್ರ ಬರೆದೆ.

ಮದುವೆಯಾಗಲು ಬಯಸಿ ಸಿಗದ ಚೆಲುವೆಯರನ್ನ
ತಂಗಿ ಎಂದಾದರೂ ಕರೆವ ಕಲೆಯ,
ಕಲಿಸಿದೆಯೊ ಕೀಟಲೆಗೆ ಮೈಮುಟ್ಚಿ ಕಣ್ಮುಚ್ಚಿ
ಜೂಟಾಟಕೆಳೆವ ಆದರ್ಶರತಿಯ!

ಎಲ್ಲಿ ದೊರೆತಾರು ಬಿಡು ನಿನ್ನಂಥ ಕಲೆಗಾರ
ಗೀರ್ವಾಣರಾಗದಲ್ಲೆ ಎಲ್ಲ ವ್ಯವಹಾರ;
ಗುಗ್ಗು ಭೋಳೇರಾಮರನ್ನು ಹಳ್ಳಕ್ಕೆ ತಳ್ಳಿ
ಆಯ್ತು ನಿನ್ನಂಗಡಿಗೆ ಪೂರ್ತಿವ್ಯಾಪಾರ!

ಸಂಕ ಮುರಿದಿದೆ, ನಡುವೆ ಗಡಿ ಎದ್ದಿದೆ,
ನಮ್ಮ ವ್ಯವಹಾರಕ್ಕೆ ಕೊನೆ ಬಿದ್ದಿದೆ;
ದಾಕ್ಷಿಣ್ಯ ದಡ್ಡತನ ಹೆಣೆದ ಸಂಬಂಧಕ್ಕೆ
ಹಳೆರಾಗದಲ್ಲಿ ಮಂಗಳ ಹಾಡುವೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...