ಭೂಮಿ ತಾಯಿ

ಪ್ರತಿ ಸಂಜೆ ಆಕಾಶದ ಒಂದು
ನಕ್ಷತ್ರ ಚಿಮಣಿ ಮಿನುಗಾಗಿ
ಅವಳ ಕೈಯಲ್ಲಿ ಇಲ್ಲಿಂದ ಅಲ್ಲಿಗೆ
ಬೆಳಕು ಹರಡಿ ಮನೆ ತುಂಬ
ಘನಿಕರಿಸಿಕೊಳ್ಳುತ್ತದೆ, ಮುಗಿಲು.

ಅವಳ ಬೆರಳ ಸ್ಪರ್ಶದಲಿ
ಬಳೆಗಳ ಸ್ವರದಲಿ ನೀಲಿ ಹರಡಿ
ತೊಟ್ಟಿಲು ಜೀಕುತ್ತದೆ ನಕ್ಷತ್ರಗಳ ಲೋಕದಲಿ.
ಏನೂ ಹೇಳಲಾಗದ ಮಾತು ಕಂದನ
ಎಳೆತುಟಿಗಳಲಿ ಅರಳಿ ಜಗದ ಗಂಧ ಸೂಸಿದೆ ಗಾಳಿ.

ಹೂ ಮನಸ್ಸಿನ ಬೆಳಕು ನೀಲಿ ಮುಗಿಲಿಂದ
ಪಡಸಾಲೆ ದಾಟಿ ಬಂದ ಘಳಿಗೆ
ಮೆದುಗಲ್ಲಕೆ ಮುತ್ತುಗಳನ್ನಿತ್ತ ತಾಯಿ
ಚಿರಂತನ ಬೆಳಕು ಕಂಡಳು ಕಂದನ ಕಣ್ಣುಗಳಲಿ
ಭೂಮಿಯೊಳಗೆ ದೇವರು ಇಳಿದ ಕ್ಷಣ ಜೀಕು.

ಸುಮ್ಮನೆ ಎತ್ತಿಕೊಂಡ ಕ್ಷಣ ಬೆಳಕು
ನಕ್ಷತ್ರಗಳು ಕಚಗುಳಿ ಇರಿಸಿದ ಸಮಯ
ಝಲ್ಲೆಂದು ಎದೆ ಕಂಪಿಸಿ ತುಂಬ ಸೊನೆ ಹಾಲು
ಅಪ್ಪಿ ಒಡಲಿಗೇರಿಸಿಕೊಂಡ ಬೆಳಕು ತುಟಿ ಇಟ್ಟು
ಹೀರಿದ ಆಕಾಶ ಭೂಮಿ ಒಂದಾದ ಸುಖದ ಕ್ಷಣ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಳೆಯ ನೀರು ಪರಿಶುದ್ಧವೆ?
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೮೩

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

cheap jordans|wholesale air max|wholesale jordans|wholesale jewelry|wholesale jerseys