ಸಂತ

ಈ ಸಂಜೆ ಗುಡಿಯ ಕಟ್ಟೆಯ
ತುದಿಯಲ್ಲಿ ಕಾಲು ಮಡಚಿ ಕುಳಿತ
ಮುದುಕನ ಕಣ್ಣ ತುಂಬ ನೀರಿನ ಪಸೆ
ಎಲುಬುಗಳು ಹಾಯ್ದ ಮುಖದ
ಆಕಾರದಲ್ಲಿ ಮುಕ್ಕಾದ ಮೂರ್‍ತಿಯ ಸ್ವರೂಪದವನು

ಅವನ ದೃಷ್ಠಿ ಹರಿವ ಉದ್ದಗಲಕೂ
ಮಾವಿನ ತೋಪಿನ ನೆರಳು ಉರಿವ
ಸೂರ್ಯ ನಾಚಿಕೆಯಿಂದ ಮರೆಯಾಗಿದ್ದಾನೆ
ನಕ್ಷತ್ರಗಳು ಅವನ ದಾರಿಗುಂಟ ಮೆರವಣಿಗೆ
ಹೊರಟಿದೆ ಸಂತೆಯಲಿ ಒಬ್ಬನೇ ನಿಂತ ಸಂತನವನು.

ಹಾಸಿ ಬೀಸಿದ ಹಕ್ಕಿಗೂಡಿನ ತುಂಬ ಧ್ವನಿ
ಚಿಲಿಪಿಲಿ ಕವಣಿ ಹೊಡೆದು ಅರಳಿದ ಬೀಜಗಳು
ಮತ್ತೆಲ್ಲಾ ಹಸಿರಾಚೆಯ ಹಳದಿ ಒಣ ಹುಲ್ಲು
ಬಂಕದ ಕಂದೀಲಿನ ತುಂಬ ಕಪ್ಪು ಕಾಡಿಗೆ
ಬರದ ಕತ್ತಲಲ್ಲಿ ಮಂಕಾಗಿ ತೂಕಡಿಸುವ ರೈತನವನು

ಇದ್ದ ಬದ್ಧ ನೆಲವೆಲ್ಲ ಒಕ್ಕಲೆಬ್ಬಿಸಿ
ಹಸಿರು ನೆಲ ಕಪ್ಪಾಗಿ ಬಿತ್ತಲಾಗದ
ಬೀಜಗಳು ಕಣ್ಣ ಪಾಸೆ ತುಂಬ ಬಿಳಿ ಹತ್ತಿ
ಕರಿಚಹಾದ ಕಪ್ಪಿನಲಿ ಗುಟುಕರಿಸಿ ಉಳಿದ ಬಿಕ್ಕು
ನೆರೆ ಸಂತ್ರಸ್ತದ ಶಿಬಿರದಲ್ಲಿ ಮೌನವಾಗಿ ಕುಳಿತ ಶಿಬಿ ಚಕ್ರವರ್ತಿ.
ಊಟ ಮಾಡುವ ನಾವು ನೀವು
ಎಲ್ಲ ಬಲ್ಲವರಂತೆ ಮಾತನಾಡುವುದು ಕಂಡ
ಕರಿಹೊಲ, ಹಸಿರು ಮೈದಾನ, ಬೀಜ ಪಿಸುಗುಡುವ
ಮೌನದಾಟಿ ಬಳಲಿದ ಕೈಗಳ ಸ್ಪರ್ಶ ಬಳಲಿ
ಒರಟಾದ ಲೆಕ್ಕವೇ ಇಲ್ಲದ ಖಾಲಿ ಕೈಯಲ್ಲಿ ಕುಳಿತ ಸಂತ.
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...