ಸಂತ

ಈ ಸಂಜೆ ಗುಡಿಯ ಕಟ್ಟೆಯ
ತುದಿಯಲ್ಲಿ ಕಾಲು ಮಡಚಿ ಕುಳಿತ
ಮುದುಕನ ಕಣ್ಣ ತುಂಬ ನೀರಿನ ಪಸೆ
ಎಲುಬುಗಳು ಹಾಯ್ದ ಮುಖದ
ಆಕಾರದಲ್ಲಿ ಮುಕ್ಕಾದ ಮೂರ್‍ತಿಯ ಸ್ವರೂಪದವನು

ಅವನ ದೃಷ್ಠಿ ಹರಿವ ಉದ್ದಗಲಕೂ
ಮಾವಿನ ತೋಪಿನ ನೆರಳು ಉರಿವ
ಸೂರ್ಯ ನಾಚಿಕೆಯಿಂದ ಮರೆಯಾಗಿದ್ದಾನೆ
ನಕ್ಷತ್ರಗಳು ಅವನ ದಾರಿಗುಂಟ ಮೆರವಣಿಗೆ
ಹೊರಟಿದೆ ಸಂತೆಯಲಿ ಒಬ್ಬನೇ ನಿಂತ ಸಂತನವನು.

ಹಾಸಿ ಬೀಸಿದ ಹಕ್ಕಿಗೂಡಿನ ತುಂಬ ಧ್ವನಿ
ಚಿಲಿಪಿಲಿ ಕವಣಿ ಹೊಡೆದು ಅರಳಿದ ಬೀಜಗಳು
ಮತ್ತೆಲ್ಲಾ ಹಸಿರಾಚೆಯ ಹಳದಿ ಒಣ ಹುಲ್ಲು
ಬಂಕದ ಕಂದೀಲಿನ ತುಂಬ ಕಪ್ಪು ಕಾಡಿಗೆ
ಬರದ ಕತ್ತಲಲ್ಲಿ ಮಂಕಾಗಿ ತೂಕಡಿಸುವ ರೈತನವನು

ಇದ್ದ ಬದ್ಧ ನೆಲವೆಲ್ಲ ಒಕ್ಕಲೆಬ್ಬಿಸಿ
ಹಸಿರು ನೆಲ ಕಪ್ಪಾಗಿ ಬಿತ್ತಲಾಗದ
ಬೀಜಗಳು ಕಣ್ಣ ಪಾಸೆ ತುಂಬ ಬಿಳಿ ಹತ್ತಿ
ಕರಿಚಹಾದ ಕಪ್ಪಿನಲಿ ಗುಟುಕರಿಸಿ ಉಳಿದ ಬಿಕ್ಕು
ನೆರೆ ಸಂತ್ರಸ್ತದ ಶಿಬಿರದಲ್ಲಿ ಮೌನವಾಗಿ ಕುಳಿತ ಶಿಬಿ ಚಕ್ರವರ್ತಿ.
ಊಟ ಮಾಡುವ ನಾವು ನೀವು
ಎಲ್ಲ ಬಲ್ಲವರಂತೆ ಮಾತನಾಡುವುದು ಕಂಡ
ಕರಿಹೊಲ, ಹಸಿರು ಮೈದಾನ, ಬೀಜ ಪಿಸುಗುಡುವ
ಮೌನದಾಟಿ ಬಳಲಿದ ಕೈಗಳ ಸ್ಪರ್ಶ ಬಳಲಿ
ಒರಟಾದ ಲೆಕ್ಕವೇ ಇಲ್ಲದ ಖಾಲಿ ಕೈಯಲ್ಲಿ ಕುಳಿತ ಸಂತ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಗತ್ಪ್ರಸಿದ್ಧ ಗೋಪುರ ಉಳಿಸಲು ಶತಪ್ರಯತ್ನ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೮೧

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…