ಸಂತ

ಈ ಸಂಜೆ ಗುಡಿಯ ಕಟ್ಟೆಯ
ತುದಿಯಲ್ಲಿ ಕಾಲು ಮಡಚಿ ಕುಳಿತ
ಮುದುಕನ ಕಣ್ಣ ತುಂಬ ನೀರಿನ ಪಸೆ
ಎಲುಬುಗಳು ಹಾಯ್ದ ಮುಖದ
ಆಕಾರದಲ್ಲಿ ಮುಕ್ಕಾದ ಮೂರ್‍ತಿಯ ಸ್ವರೂಪದವನು

ಅವನ ದೃಷ್ಠಿ ಹರಿವ ಉದ್ದಗಲಕೂ
ಮಾವಿನ ತೋಪಿನ ನೆರಳು ಉರಿವ
ಸೂರ್ಯ ನಾಚಿಕೆಯಿಂದ ಮರೆಯಾಗಿದ್ದಾನೆ
ನಕ್ಷತ್ರಗಳು ಅವನ ದಾರಿಗುಂಟ ಮೆರವಣಿಗೆ
ಹೊರಟಿದೆ ಸಂತೆಯಲಿ ಒಬ್ಬನೇ ನಿಂತ ಸಂತನವನು.

ಹಾಸಿ ಬೀಸಿದ ಹಕ್ಕಿಗೂಡಿನ ತುಂಬ ಧ್ವನಿ
ಚಿಲಿಪಿಲಿ ಕವಣಿ ಹೊಡೆದು ಅರಳಿದ ಬೀಜಗಳು
ಮತ್ತೆಲ್ಲಾ ಹಸಿರಾಚೆಯ ಹಳದಿ ಒಣ ಹುಲ್ಲು
ಬಂಕದ ಕಂದೀಲಿನ ತುಂಬ ಕಪ್ಪು ಕಾಡಿಗೆ
ಬರದ ಕತ್ತಲಲ್ಲಿ ಮಂಕಾಗಿ ತೂಕಡಿಸುವ ರೈತನವನು

ಇದ್ದ ಬದ್ಧ ನೆಲವೆಲ್ಲ ಒಕ್ಕಲೆಬ್ಬಿಸಿ
ಹಸಿರು ನೆಲ ಕಪ್ಪಾಗಿ ಬಿತ್ತಲಾಗದ
ಬೀಜಗಳು ಕಣ್ಣ ಪಾಸೆ ತುಂಬ ಬಿಳಿ ಹತ್ತಿ
ಕರಿಚಹಾದ ಕಪ್ಪಿನಲಿ ಗುಟುಕರಿಸಿ ಉಳಿದ ಬಿಕ್ಕು
ನೆರೆ ಸಂತ್ರಸ್ತದ ಶಿಬಿರದಲ್ಲಿ ಮೌನವಾಗಿ ಕುಳಿತ ಶಿಬಿ ಚಕ್ರವರ್ತಿ.
ಊಟ ಮಾಡುವ ನಾವು ನೀವು
ಎಲ್ಲ ಬಲ್ಲವರಂತೆ ಮಾತನಾಡುವುದು ಕಂಡ
ಕರಿಹೊಲ, ಹಸಿರು ಮೈದಾನ, ಬೀಜ ಪಿಸುಗುಡುವ
ಮೌನದಾಟಿ ಬಳಲಿದ ಕೈಗಳ ಸ್ಪರ್ಶ ಬಳಲಿ
ಒರಟಾದ ಲೆಕ್ಕವೇ ಇಲ್ಲದ ಖಾಲಿ ಕೈಯಲ್ಲಿ ಕುಳಿತ ಸಂತ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಗತ್ಪ್ರಸಿದ್ಧ ಗೋಪುರ ಉಳಿಸಲು ಶತಪ್ರಯತ್ನ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೮೧

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…