ಸಂತ

ಈ ಸಂಜೆ ಗುಡಿಯ ಕಟ್ಟೆಯ
ತುದಿಯಲ್ಲಿ ಕಾಲು ಮಡಚಿ ಕುಳಿತ
ಮುದುಕನ ಕಣ್ಣ ತುಂಬ ನೀರಿನ ಪಸೆ
ಎಲುಬುಗಳು ಹಾಯ್ದ ಮುಖದ
ಆಕಾರದಲ್ಲಿ ಮುಕ್ಕಾದ ಮೂರ್‍ತಿಯ ಸ್ವರೂಪದವನು

ಅವನ ದೃಷ್ಠಿ ಹರಿವ ಉದ್ದಗಲಕೂ
ಮಾವಿನ ತೋಪಿನ ನೆರಳು ಉರಿವ
ಸೂರ್ಯ ನಾಚಿಕೆಯಿಂದ ಮರೆಯಾಗಿದ್ದಾನೆ
ನಕ್ಷತ್ರಗಳು ಅವನ ದಾರಿಗುಂಟ ಮೆರವಣಿಗೆ
ಹೊರಟಿದೆ ಸಂತೆಯಲಿ ಒಬ್ಬನೇ ನಿಂತ ಸಂತನವನು.

ಹಾಸಿ ಬೀಸಿದ ಹಕ್ಕಿಗೂಡಿನ ತುಂಬ ಧ್ವನಿ
ಚಿಲಿಪಿಲಿ ಕವಣಿ ಹೊಡೆದು ಅರಳಿದ ಬೀಜಗಳು
ಮತ್ತೆಲ್ಲಾ ಹಸಿರಾಚೆಯ ಹಳದಿ ಒಣ ಹುಲ್ಲು
ಬಂಕದ ಕಂದೀಲಿನ ತುಂಬ ಕಪ್ಪು ಕಾಡಿಗೆ
ಬರದ ಕತ್ತಲಲ್ಲಿ ಮಂಕಾಗಿ ತೂಕಡಿಸುವ ರೈತನವನು

ಇದ್ದ ಬದ್ಧ ನೆಲವೆಲ್ಲ ಒಕ್ಕಲೆಬ್ಬಿಸಿ
ಹಸಿರು ನೆಲ ಕಪ್ಪಾಗಿ ಬಿತ್ತಲಾಗದ
ಬೀಜಗಳು ಕಣ್ಣ ಪಾಸೆ ತುಂಬ ಬಿಳಿ ಹತ್ತಿ
ಕರಿಚಹಾದ ಕಪ್ಪಿನಲಿ ಗುಟುಕರಿಸಿ ಉಳಿದ ಬಿಕ್ಕು
ನೆರೆ ಸಂತ್ರಸ್ತದ ಶಿಬಿರದಲ್ಲಿ ಮೌನವಾಗಿ ಕುಳಿತ ಶಿಬಿ ಚಕ್ರವರ್ತಿ.
ಊಟ ಮಾಡುವ ನಾವು ನೀವು
ಎಲ್ಲ ಬಲ್ಲವರಂತೆ ಮಾತನಾಡುವುದು ಕಂಡ
ಕರಿಹೊಲ, ಹಸಿರು ಮೈದಾನ, ಬೀಜ ಪಿಸುಗುಡುವ
ಮೌನದಾಟಿ ಬಳಲಿದ ಕೈಗಳ ಸ್ಪರ್ಶ ಬಳಲಿ
ಒರಟಾದ ಲೆಕ್ಕವೇ ಇಲ್ಲದ ಖಾಲಿ ಕೈಯಲ್ಲಿ ಕುಳಿತ ಸಂತ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...