Home / ಕವನ / ಕವಿತೆ / ದೀಪವಾಗು ಗೆಳೆಯ

ದೀಪವಾಗು ಗೆಳೆಯ

ಬಾಗೆಳೆಯಾ ಅಂಗಳಕೆ ಸಾಲು ದೀಪಗಳ
ಬೆಳಗೋಣ ದೀಪಾವಳಿ ಮಾಗಿಯ ರಾತ್ರಿಯಲಿ.

ಬಾಗೆಳೆಯಾ ಚಾವಡಿಗೆ ಬಣ್ಣಬಣ್ಣದ ಜರಿಯ
ದೀಪದ ಗೂಡು ಕಟ್ಟೋಣ ಮೌನ ದೀಪಗಳ ಕಾಂತಿಯಲಿ

ಬಾ ಗೆಳೆಯಾ ಪಡಸಾಲೆಗೆ ಮೆಲ್ಲಗೆ
ಹಚ್ಚೋಣ ಸುರುಸುರು ಬತ್ತಿ ನನ್ನ ನಿನ್ನ ಕಣ್ಣೊಳಗಿನ
ನೂರು ಕನಸುಗಳ ಬಾನಿನಲಿ ಅರಳಿಸಲು.

ಬಾ ಗೆಳೆಯ ಮನೆಗೆ ಸುಮ್ಮನೆ
ಸಿಹಿ ಉಂಡು ಸಿಹಿ ಹಂಚೋಣ ಮೌನವಾಗಿ ಕೈ ಕೈ ಹಿಡಿದು
ಬದುಕು ಹಂಚುವ ವಿಸ್ತಾರವಿದು ನವ ಉಲ್ಲಾಸ ಹರಡಲಿ ಪ್ರತಿದಿನವೂ

ಬಾ ಗೆಳೆಯಾ ನನ್ನ ಕತ್ತಲಿನ ದಾರಿಯಲಿ
ಬೆಳಕಿನ ಕಿರಣ ಸೂಸಿ ನವ ಉಲ್ಲಾಸ ಹರಡಲಿ ಪ್ರತಿ
ಮುಂಜಾನೆಯಲಿ ಬೆಳ್ಳಕ್ಕಿ ಹಿಂಡು ಸಾಗಲಿ ನೀಲಿ ಆಕಾಶದಲ್ಲಿ.

ಬಾ ಗೆಳೆಯ ಎಲ್ಲಾ ಭೀತಿಗಳ ಹೊಡೆದೋಡಿಸಿ
ಅವರ ಚಿತ್ತ ಮನದ ಸುತ್ತ ಬೆಳಗಲೆಂದು ಜ್ಯೋತಿ.
ಪ್ರತಿ ಹಗುರ ಭಾವದಲಿ ಎಲ್ಲಾ ರಾಗಗಳು ಹಾಡಾಗಿ ಎದೆಗಿಳಿವ ಹೊತ್ತಿನಲ್ಲಿ.
ಬಾ ಗೆಳೆಯಾ ಮಿಂಚು ದೀಪಗಳಾಗಿ ಎಲ್ಲವನು
ಮರೆಸಿ ಹರಿಸಿ ಸ್ಪುರಿಸಿ ಪ್ರೀತಿಯ ಎಣ್ಣೆಯಲಿ
ಬತ್ತಿಯಾಗುವ ಹಂಬಲಕೆ ಕರಗದ ನೇಯ್ಗೆಯಾಗು ಬಾಳಿನ ಬಟ್ಟೆಯಲಿ.
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...