Home / ಕವನ / ಕವಿತೆ / ದೀಪವಾಗು ಗೆಳೆಯ

ದೀಪವಾಗು ಗೆಳೆಯ

ಬಾಗೆಳೆಯಾ ಅಂಗಳಕೆ ಸಾಲು ದೀಪಗಳ
ಬೆಳಗೋಣ ದೀಪಾವಳಿ ಮಾಗಿಯ ರಾತ್ರಿಯಲಿ.

ಬಾಗೆಳೆಯಾ ಚಾವಡಿಗೆ ಬಣ್ಣಬಣ್ಣದ ಜರಿಯ
ದೀಪದ ಗೂಡು ಕಟ್ಟೋಣ ಮೌನ ದೀಪಗಳ ಕಾಂತಿಯಲಿ

ಬಾ ಗೆಳೆಯಾ ಪಡಸಾಲೆಗೆ ಮೆಲ್ಲಗೆ
ಹಚ್ಚೋಣ ಸುರುಸುರು ಬತ್ತಿ ನನ್ನ ನಿನ್ನ ಕಣ್ಣೊಳಗಿನ
ನೂರು ಕನಸುಗಳ ಬಾನಿನಲಿ ಅರಳಿಸಲು.

ಬಾ ಗೆಳೆಯ ಮನೆಗೆ ಸುಮ್ಮನೆ
ಸಿಹಿ ಉಂಡು ಸಿಹಿ ಹಂಚೋಣ ಮೌನವಾಗಿ ಕೈ ಕೈ ಹಿಡಿದು
ಬದುಕು ಹಂಚುವ ವಿಸ್ತಾರವಿದು ನವ ಉಲ್ಲಾಸ ಹರಡಲಿ ಪ್ರತಿದಿನವೂ

ಬಾ ಗೆಳೆಯಾ ನನ್ನ ಕತ್ತಲಿನ ದಾರಿಯಲಿ
ಬೆಳಕಿನ ಕಿರಣ ಸೂಸಿ ನವ ಉಲ್ಲಾಸ ಹರಡಲಿ ಪ್ರತಿ
ಮುಂಜಾನೆಯಲಿ ಬೆಳ್ಳಕ್ಕಿ ಹಿಂಡು ಸಾಗಲಿ ನೀಲಿ ಆಕಾಶದಲ್ಲಿ.

ಬಾ ಗೆಳೆಯ ಎಲ್ಲಾ ಭೀತಿಗಳ ಹೊಡೆದೋಡಿಸಿ
ಅವರ ಚಿತ್ತ ಮನದ ಸುತ್ತ ಬೆಳಗಲೆಂದು ಜ್ಯೋತಿ.
ಪ್ರತಿ ಹಗುರ ಭಾವದಲಿ ಎಲ್ಲಾ ರಾಗಗಳು ಹಾಡಾಗಿ ಎದೆಗಿಳಿವ ಹೊತ್ತಿನಲ್ಲಿ.
ಬಾ ಗೆಳೆಯಾ ಮಿಂಚು ದೀಪಗಳಾಗಿ ಎಲ್ಲವನು
ಮರೆಸಿ ಹರಿಸಿ ಸ್ಪುರಿಸಿ ಪ್ರೀತಿಯ ಎಣ್ಣೆಯಲಿ
ಬತ್ತಿಯಾಗುವ ಹಂಬಲಕೆ ಕರಗದ ನೇಯ್ಗೆಯಾಗು ಬಾಳಿನ ಬಟ್ಟೆಯಲಿ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...