Home / ಲೇಖನ / ವಿಜ್ಞಾನ / ಆಸ್ಪ್ರಿನ್ ನಿಂದ ಬ್ರೇನ್ ಹ್ಯಾಮರೇಜ್

ಆಸ್ಪ್ರಿನ್ ನಿಂದ ಬ್ರೇನ್ ಹ್ಯಾಮರೇಜ್

ಇದೊಂದು ನೋವು ನಿವಾರಕ ಔಷಧಿ. ನೋವನ್ನು ನಿವಾರಿಸುವ ಈ ಔಷಧಿ ಬಗೆಗೆ ನಂಬಿಕೆ ಇಟ್ಟಿದ್ದ ಜನಕ್ಕೆ ಒಂದು ಶಾಕ್ ಆಗುವ ಸುದ್ಧಿ ಹೊರಬಿದ್ದಿದೆ. ನ್ಯೂ‌ಆರ್ಲಿಯನ್ಸನಲ್ಲಿ ವಾಸಿಸುವ ಟೂಲೆನ್ ಯುನಿವರ್ಸಿಟಿಯ ಸ್ಕೂಲ್ ಆಫ್ ಪ್ಲಬಿಕ್‌ಹೆಲ್ಥ್ Tapicol Medician ನ ಡಾ|| ಜಿಯೆಂಗ್ ಹೀ ಮತ್ತು ಅವರ ತಂಡವು ಇದರ ಸೇವನೆಯಿಂದ “ಬ್ರೇನ್ ಹ್ಯಾಮರೇಜ್” ಆಕ್ರಮಣವಾಗುತ್ತದೆಂದು ಪ್ರಯೋಗಗಳಿಂದ ಸ್ಥಿರೀಕರಿಸಿದ್ದಾರೆ. ಜತೆಗೆ ಇಸೆಮಿಕ್ ಕೂಡ ಆಕ್ರಮಿಸುತ್ತದೆಂದು ಹೇಳುತ್ತಾರೆ.

ಇದನ್ನು ಸೇವಿಸುವುದರಿಂದ ದಮನಿಗಳಲ್ಲಿ ಅಡಚಣೆಯುಂಟಾಗಿ ಪರಿಣಾಮವಾಗಿ ಮೆದುಳಿಗೆ ರಕ್ತ ಹಾಗೂ ಪ್ರಾಣವಾಯುವಿನ ಪೂರೈಕೆಯು ಆಗುವುದಿಲ್ಲವೆಂದು ವಿವರಿಸುತ್ತಾರೆ. ವೃದ್ಧರು ವಿಶೇಷವಾಗಿ ಹೈಬ್ಲಡ್ ಪ್ರೆಶರ್ ಇರುವ ರೋಗಿಗಳಿಗೆ ಬ್ರೇನ್ ಹ್ಯಾಮರೇಜಿನ ಅಪಾಯ ಹೆಚ್ಚಾಗಿರುತ್ತದೆ. ವಿಪರೀತ ತಲೆನೋವು, ಒಮ್ಮಲೆ – ಮೂರ್ಚೆ ಹೋಗುವುದು, ಧ್ವನಿಬಾರದಿರುವುದು. ಮುಖ ಹಾಗು ಕೈ ಕಾಲುಗಳಲ್ಲಿ ಲಕ್ವ ಹೊಡೆದಂತಾಗಿ ನಿಶಕ್ತಿ ಆವರಿಸುವುದು ಮುಂತಾದವು ಇದರ ಲಕ್ಷಣಗಳಾಗಿವೆ.

ಹೀ ಮತ್ತು ಇವರ ಅನುಮಾಯಿಗಳು ೧೮ ವಿಭಿನ್ನ ಪರೀಕ್ಷೆಗಳಲ್ಲಿ೫೫,೪೬೨ ರೋಗಿಗಳಿಗೆ ಆಸ್ಟ್ರೀನ್ ಸೇವನೆ ಮಾಡಿಸಿ ನಂತರ ಪರೀಕ್ಷಿಸಿದಾಗ ಇವರಲ್ಲಿ ಶೇ. ೧೫ ರಷ್ಟು ರೋಗಿಗಳಿಗೆ ಬ್ರೇನ್ ಹ್ಯಾಮರೇಜ್ ಆಕ್ರಮಣವಾದುದು ದೃಢಪಟ್ಟಿತು. ಉಳಿದಂತೆ ರೋಗಿಗಳಿಗೆ ಇಸೆಮಿಕ್ ಅಟ್ಯಾಕ್ ಆಗಿತ್ತು. ಆದ್ದರಿಂದ ನೋವು ನಿವಾರಕವೆಂದು ಇದನ್ನು ಸೇವಿಸುವ ರೋಗಿಗಳು ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸಿ ಸೇವಿಸುವುದು ಅಗತ್ಯ. ಕೆಲವು ಔಷಧಿಗಳು ತಕ್ಷಣಕ್ಕೆ ಪರಿಹಾರವನ್ನು ಸೂಚಿಸಿದರೂ ನಿಧಾನವಾಗಿ ಸ್ಲೋಪಾಯಿಜನ್ ಆಗುವ ಭೀತಿ ಇರುತ್ತದೆ. ಹಾಗಾದರೆ ಈ ದೇಹ ನೆಟ್ಟಗಿರಬೇಕಾದರೆ ಯಾವುದನ್ನು ಸೇವಿಸಬೇಕು? ಎಲ್ಲವನ್ನು ಒಬ್ಬ ಸಾಮಾನ್ಯ ರೋಗಿ ವೈಜ್ಞಾನಿಕವಾಗಿ ಪರೀಕ್ಷೆಗೆ ಗುರಿ ಮಾಡುತ್ತಾನೆಯೋ? ಎಂಬ ಪ್ರಶ್ನೆ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್