Home / ಲೇಖನ / ವಿಜ್ಞಾನ / ಮೊಟ್ಟೆ ಅಪಾಯಕಾರಿ ಎಂದು ಹೇಳುತ್ತಾರೆ

ಮೊಟ್ಟೆ ಅಪಾಯಕಾರಿ ಎಂದು ಹೇಳುತ್ತಾರೆ

ಅಶಕ್ತರಾದಾಗ ವೈದ್ಯರು ಮೊಟ್ಟೆಗಳನ್ನು ತಿನ್ನಲು ಹೇಳುತ್ತಾರೆ. ಮೊಟ್ಟೆಯಲ್ಲಿ ಜೀವಸತ್ವ ಇರುವುದರಿಂದ ಶಕ್ತಿವರ್‍ಧಕವೆಂದು ತಿಳಿಸುವ ವೈದ್ಯರ ಈ ಸಿಫಾರಸ್ ಈಗ ತಿರುಮರುವಾಗಿದೆ. ಜತೆಗೆ ಮೊಟ್ಟೆ ಮಾಂಸಾಹಾರಿ ಅಲ್ಲವೆಂಬ ಸತ್ಯವನ್ನು ಸಹ ತಲೆಕೆಳಗೆ ಮಾಡಿ ಇದೊಂದು ಮಾಂಸಾಹಾರಿಯೇ ಎಂದು ತಿರ್‍ಮಾನಿಸಲಾಗಿದೆ. ಮೊಟ್ಟೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಅಂದರೆ ಪ್ರತಿಶತ ೨೫೦ ಮಿ ಗ್ರಾಂನಿಂದ ೩೦೦ ಮಿ ಗ್ರಾಂ ನಷ್ಟು ಕೊಲಸ್ಟರಾಲ್ ಸಂಗ್ರಹವಿದೆ. ಆರೋಗ್ಯಕ್ಕೆ ಅಗತ್ಯವಾಗಿ ಬೇಕಾದ ನಾರಿನಂಶ ಮೊಟ್ಟೆಯಲ್ಲಿ ಇಲ್ಲವೇ ಇಲ್ಲ. ಹಾಗೆಯೇ ಶಕ್ತಿಯ ಉತ್ಪಾದನೆಗೆ ಅಗತ್ಯವಾಗಿ ಬೇಕಾದ ಕಾರ್‍ಬೋಹೈಡ್ರೆಟ್ ಮೊಟ್ಟೆಯಲ್ಲಿ ಇಲ್ಲ. ನಿಸರ್‍ಗದಲ್ಲಿ ಮೊಟ್ಟೆ ತಿನ್ನುವ ಪ್ರಾಣಿ ಮಾನವನ್ನೊಬ್ಬನೇ ಎಂದು ವಿಜ್ಞಾನಿಗಳು ಹೇಳುತ್ತಾರೆ ಡಾ| ಇನ್ನಾ ಎಂಬ ಆಹಾರ ವಿಜ್ಞಾನಿಗಳ ಪ್ರಕಾರ ಮೊಟ್ಟೆ ವಿಷ ಆಹಾರವೆಂದು ಹೇಳಲಾಗುತ್ತದೆ. ಆದ್ದರಿಂದ ಸಸ್ಯಮೂಲದ ಪ್ರೋಟೀನ್, ವಿಟಮಿನ್, ಕಾರ್‍ಬೊಹೈಡ್ರೆಟ್, ನಾರಿನಂಶ, ಕೊಬ್ಬು ಪ್ರಕೃತಿಯಲ್ಲಿ ಸಾಕಷ್ಟು ಇರುವಾಗ ಆರೋಗ್ಯವನ್ನು ಹಾಳು ಮಾಡುವ ಮೊಟ್ಟೆಗಳನ್ನು ಸೇವಿಸುವುದು ಅಪಾಯವೆಂದು ಈ ವಿಜ್ಞಾನಿಗಳು ತಿಳಿಸುತ್ತಾರೆ. ಮೊಟ್ಟೆಯ ಹೊರಕವಚದಲ್ಲಿ ಸು. ೧೫ ರಿಂದ ೨೦ ಸಾವಿರ ಸೂಕ್ಷ್ಮರಂಧ್ರಗಳಿರುತ್ತವೆ. ಮೊಟ್ಟೆ ಮರಿಯಾಗಲು ಈ ಸೂಕ್ಷ್ಮ ರಂಧ್ರದ ಮೂಲಕ ಆಮ್ಲಜನಕ ಪೂರೈಕೆಯಾಗುತ್ತದೆ. ೨೪ ಗಂಟೆಗಳಿಗೂ ಅಧಿಕ ಕಾಲ ಮೊಟ್ಟೆಗಳನ್ನು ಶೇಖರಿಸಿಟ್ಟರೆ ಬ್ಯಾಕ್ಟೀರಿಯಾಗಳು ಮೊಟ್ಟೆಯ ಒಳಮೈ ಪ್ರವೇಶಿಸಿ ತಿನ್ನುವವರಿಗೆ ಕೂಡಲೇ ಅಪಾಯ ತರಬಹುದೆಂದು ಹೇಳುತ್ತಾರೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...