ಮಳೆ

ಮಳೆ ಎಂದರೆ ಭರ್ರೆಂದು ಎಲ್ಲಾ ಕೊಚ್ಚಿ
ರೊಚ್ಚಿ ಸೀಳಿ ಹಾಯ್ದು ಹರಿದು
ತಲ್ಲಣಗಳ ಬಂಡಾಟಗಳ ಕಳವಳ
ಸೊಂಯ್ಯ ಎಂದು ಸೆಳೆದು ಸಮುದ್ರ
ಅಲೆಗಳ ಅಬ್ಬರಿಕೆ ಹೆಚ್ಚುವ ಬಿಂದುಗಳು.

ಮಳೆ ಎಂದರೆ ಸಣ್ಣಗೆ ಒಡಲು
ಕಂಪಿಸಿ ಬೀಜಗಳ ಮರ್ಮರ ಎದೆಗೆ
ಹಾಯಿಸಿ ಒಳಗೊಳಗೆ ಕುದಿದ ಕಾವಿಗೆ ಸ್ಪರ್ಶ
ಕೊಟ್ಟು ರೆಂಬೆ ಕೊಂಬೆಗಳ ಬೇರುಗಳಿಗೆ
ಹಸಿರು ಉಸಿರು ಹಾಯಿಸಿದ ಜೀವ ಪದಗಳು

ಮಳೆ ಎಂದರೆ ಭೂಗರ್ಭದ ತುಂಬಿದ
ಜೀವ ಜಲಕೆ, ಮೆಲ್ಲಗೆ ಮುಲಕಾಡುವ
ರಸಚೇತನ ಸುರಿಸಿ ಅಲ್ಲೊಂದು ಹುಟ್ಟು
ಸ್ಪುರಿಸಿ ಮೆದು ಹಾಲು ತುಂಬಿದ ಎದೆ
ಕಾಳುಗಳು ಒಡಲು ತುಂಬಿದ ಸಿರಿ ರಾಗಗಳು.

ಮಳೆ ಎಂದರೆ ತೇಲಿ ತೇಲಿ ಮೋಡಗಳು
ಕನಸು ತುಂಬಿದ ಪಡಸಾಲೆ ಜೋಕಾಲಿ ಜೀಕಿ
ಒಲೆಯ ಮುಂದೆ ಅರಳಿದ ರಂಗೋಲಿ ಕುದಿದ
ಗಂಜೀ ಸುವಾಸನೆ, ಅಂಗಳದಲ್ಲಿ ಬಿದ್ದ ಹೊಂಡಗಳ
ಗುರುತು, ಆತ್ಮಕೆ ಅಮರುವ ತಂಪು ಹನಿಗಳು.

ಮಳೆ ಎಂದರೆ ಇಳಿದ ಬಿಂದುಗಳು
ರಾಗಗಳು ಹನಿಗಳು ಪದಗಳು
ಅವಿರ್ಭವಿಸಿ ಅಂತರಂಗದಲಿ ಮರುಹುಟ್ಟು
ಮೋಡಗಳಾಗಿ ಬದುಕು ಬಯಲ ಬಾನ ತುಂಬಾ
ಹರಡಿ ಹಸಿರಾಗಿ, ನೀಲಿಯಾಗಿ, ಖುಷಿಯಾಗಿ, ಮತ್ತೆ
ಹೊಯ್ಯುವ ಅಮೃತ ವಾಹಿನಿಗಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಧೂಮಪಾನ, ಮದ್ಯಪಾನ ಬೇಡ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೭೨

ಸಣ್ಣ ಕತೆ

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…