ಮಳೆ

ಮಳೆ ಎಂದರೆ ಭರ್ರೆಂದು ಎಲ್ಲಾ ಕೊಚ್ಚಿ
ರೊಚ್ಚಿ ಸೀಳಿ ಹಾಯ್ದು ಹರಿದು
ತಲ್ಲಣಗಳ ಬಂಡಾಟಗಳ ಕಳವಳ
ಸೊಂಯ್ಯ ಎಂದು ಸೆಳೆದು ಸಮುದ್ರ
ಅಲೆಗಳ ಅಬ್ಬರಿಕೆ ಹೆಚ್ಚುವ ಬಿಂದುಗಳು.

ಮಳೆ ಎಂದರೆ ಸಣ್ಣಗೆ ಒಡಲು
ಕಂಪಿಸಿ ಬೀಜಗಳ ಮರ್ಮರ ಎದೆಗೆ
ಹಾಯಿಸಿ ಒಳಗೊಳಗೆ ಕುದಿದ ಕಾವಿಗೆ ಸ್ಪರ್ಶ
ಕೊಟ್ಟು ರೆಂಬೆ ಕೊಂಬೆಗಳ ಬೇರುಗಳಿಗೆ
ಹಸಿರು ಉಸಿರು ಹಾಯಿಸಿದ ಜೀವ ಪದಗಳು

ಮಳೆ ಎಂದರೆ ಭೂಗರ್ಭದ ತುಂಬಿದ
ಜೀವ ಜಲಕೆ, ಮೆಲ್ಲಗೆ ಮುಲಕಾಡುವ
ರಸಚೇತನ ಸುರಿಸಿ ಅಲ್ಲೊಂದು ಹುಟ್ಟು
ಸ್ಪುರಿಸಿ ಮೆದು ಹಾಲು ತುಂಬಿದ ಎದೆ
ಕಾಳುಗಳು ಒಡಲು ತುಂಬಿದ ಸಿರಿ ರಾಗಗಳು.

ಮಳೆ ಎಂದರೆ ತೇಲಿ ತೇಲಿ ಮೋಡಗಳು
ಕನಸು ತುಂಬಿದ ಪಡಸಾಲೆ ಜೋಕಾಲಿ ಜೀಕಿ
ಒಲೆಯ ಮುಂದೆ ಅರಳಿದ ರಂಗೋಲಿ ಕುದಿದ
ಗಂಜೀ ಸುವಾಸನೆ, ಅಂಗಳದಲ್ಲಿ ಬಿದ್ದ ಹೊಂಡಗಳ
ಗುರುತು, ಆತ್ಮಕೆ ಅಮರುವ ತಂಪು ಹನಿಗಳು.

ಮಳೆ ಎಂದರೆ ಇಳಿದ ಬಿಂದುಗಳು
ರಾಗಗಳು ಹನಿಗಳು ಪದಗಳು
ಅವಿರ್ಭವಿಸಿ ಅಂತರಂಗದಲಿ ಮರುಹುಟ್ಟು
ಮೋಡಗಳಾಗಿ ಬದುಕು ಬಯಲ ಬಾನ ತುಂಬಾ
ಹರಡಿ ಹಸಿರಾಗಿ, ನೀಲಿಯಾಗಿ, ಖುಷಿಯಾಗಿ, ಮತ್ತೆ
ಹೊಯ್ಯುವ ಅಮೃತ ವಾಹಿನಿಗಳು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...