Home / ಕವನ / ಕವಿತೆ / ಇರಬಹುದು ಬದುಕು

ಇರಬಹುದು ಬದುಕು

ನಮ್ಮೆಲ್ಲರ ಪಯಣದ ದಾರಿ
ತುಂಬ ಗಿಡಮರ ಹಕ್ಕಿ ಚಕ್ಕಿ
ವಿಸ್ಮಯಗಳ ನೋಟ ಕೂಟದಲ್ಲಿ
ನಾನೀನಾಗಿ ನೀನಾನಾಗಿ ಬಿಟ್ಟು
ಬಂದ ನಡೆದ ದಾರಿ ಹಸಿಬಿಸಿ
ಎಲ್ಲವೂ ಇದ್ದು ಒಮ್ಮೆ ತಿರುಗಿ
ನೋಡಿ ನರಳೋಣ ಇದು ಇರಬಹುದು ಬದುಕು

ಏನೇನೋ ಹುಡುಕಾಟ ತಲ್ಲಣ
ಶೃತಿ ಅಪಶೃತಿಗಳ ನಡುವೆ ಎಲ್ಲರೂ
ಎಲ್ಲವೂ ಸಹಜ ಮತ್ತೆ ಬೇರೆ ಏನೋ
ಹರಿದು ಹರಡಿ ವಿಸ್ತರಿಸಿದ ಹಮ್ಮುಬಿಮ್ಮು
ಯಾವುದೋ ಬೇಟೆ, ಎಲ್ಲಿಯದೋ ನೋಟ
ಓಣಿದಾಟಿ ಬಂದವರೆಲ್ಲಾ ಕುಣಿದು ಹಾಡಿದರು
ಇದು ಇರಬಹುದು ಅಸ್ತಿತ್ವದ ಬದುಕು.

ಎಲ್ಲ ಪಯಣವೂ ಆರಂಭವಾಗಿ
ನನ್ನನ್ನಿನ್ನಲಿ ಅಂತ್ಯಗೊಳ್ಳುವುದು ಅದೇ
ದಾರಿಯಲಿ ಕೌನೆರಳು ಬಸಿಲುಗಳಾಟದಲಿ
ಮುಟ್ಟಿತಟ್ಟಿ ವಟಗುಟ್ಟಿದ ರಾಮಾಯಣ
ಮಹಾಭರತದ ಪಾತ್ರಗಳು ಸಂತೈಸಿ
ಸಮಾಧಾನಿಸಿ ಮತ್ತೆ ಕೆರಳಿಸಿದ ಕನವರಿಕೆ
ಇದು ಇರಬಹುದು ಅಹಮಿಕೆಯ ಬದುಕು.

ನಡೆವದಾರಿಗುಂಟ ಬಂಡಾಯ ಸಾವಿರ
ನೋವುಗಳ ನರಳಾಟ ಸುಮ್ಮನೆ ರಾತ್ರಿಗಳು
ಮಲಗಿದೆ ಮೌನದ ಕತ್ತಲೆಯಲ್ಲಿ ಎಲ್ಲೋ
ಹೊಳೆದ ತಾರೆಗಳು ತಿಂಗಳ ಬೆಳಕಿನ
ನೆರಳಲಿ ಅವನ ಅವಳ ಹುಡುಕಾಟ
ಉರಿವಗ್ನಿಕುಂಡಸುತ್ತ ಕರುಳ ಹಾಡು
ಹುಡಿಮಣ್ಣಿನ ವಾಸನೆಯ ತಾಕಲಾಟ
ಇದು ಇರಬಹುದು ನಿಜದ ಬದುಕು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...