Home / ಕವನ / ಕವಿತೆ / ಇರಬಹುದು ಬದುಕು

ಇರಬಹುದು ಬದುಕು

ನಮ್ಮೆಲ್ಲರ ಪಯಣದ ದಾರಿ
ತುಂಬ ಗಿಡಮರ ಹಕ್ಕಿ ಚಕ್ಕಿ
ವಿಸ್ಮಯಗಳ ನೋಟ ಕೂಟದಲ್ಲಿ
ನಾನೀನಾಗಿ ನೀನಾನಾಗಿ ಬಿಟ್ಟು
ಬಂದ ನಡೆದ ದಾರಿ ಹಸಿಬಿಸಿ
ಎಲ್ಲವೂ ಇದ್ದು ಒಮ್ಮೆ ತಿರುಗಿ
ನೋಡಿ ನರಳೋಣ ಇದು ಇರಬಹುದು ಬದುಕು

ಏನೇನೋ ಹುಡುಕಾಟ ತಲ್ಲಣ
ಶೃತಿ ಅಪಶೃತಿಗಳ ನಡುವೆ ಎಲ್ಲರೂ
ಎಲ್ಲವೂ ಸಹಜ ಮತ್ತೆ ಬೇರೆ ಏನೋ
ಹರಿದು ಹರಡಿ ವಿಸ್ತರಿಸಿದ ಹಮ್ಮುಬಿಮ್ಮು
ಯಾವುದೋ ಬೇಟೆ, ಎಲ್ಲಿಯದೋ ನೋಟ
ಓಣಿದಾಟಿ ಬಂದವರೆಲ್ಲಾ ಕುಣಿದು ಹಾಡಿದರು
ಇದು ಇರಬಹುದು ಅಸ್ತಿತ್ವದ ಬದುಕು.

ಎಲ್ಲ ಪಯಣವೂ ಆರಂಭವಾಗಿ
ನನ್ನನ್ನಿನ್ನಲಿ ಅಂತ್ಯಗೊಳ್ಳುವುದು ಅದೇ
ದಾರಿಯಲಿ ಕೌನೆರಳು ಬಸಿಲುಗಳಾಟದಲಿ
ಮುಟ್ಟಿತಟ್ಟಿ ವಟಗುಟ್ಟಿದ ರಾಮಾಯಣ
ಮಹಾಭರತದ ಪಾತ್ರಗಳು ಸಂತೈಸಿ
ಸಮಾಧಾನಿಸಿ ಮತ್ತೆ ಕೆರಳಿಸಿದ ಕನವರಿಕೆ
ಇದು ಇರಬಹುದು ಅಹಮಿಕೆಯ ಬದುಕು.

ನಡೆವದಾರಿಗುಂಟ ಬಂಡಾಯ ಸಾವಿರ
ನೋವುಗಳ ನರಳಾಟ ಸುಮ್ಮನೆ ರಾತ್ರಿಗಳು
ಮಲಗಿದೆ ಮೌನದ ಕತ್ತಲೆಯಲ್ಲಿ ಎಲ್ಲೋ
ಹೊಳೆದ ತಾರೆಗಳು ತಿಂಗಳ ಬೆಳಕಿನ
ನೆರಳಲಿ ಅವನ ಅವಳ ಹುಡುಕಾಟ
ಉರಿವಗ್ನಿಕುಂಡಸುತ್ತ ಕರುಳ ಹಾಡು
ಹುಡಿಮಣ್ಣಿನ ವಾಸನೆಯ ತಾಕಲಾಟ
ಇದು ಇರಬಹುದು ನಿಜದ ಬದುಕು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...