Home / ಕವನ / ಕವಿತೆ / ಇರಬಹುದು ಬದುಕು

ಇರಬಹುದು ಬದುಕು

ನಮ್ಮೆಲ್ಲರ ಪಯಣದ ದಾರಿ
ತುಂಬ ಗಿಡಮರ ಹಕ್ಕಿ ಚಕ್ಕಿ
ವಿಸ್ಮಯಗಳ ನೋಟ ಕೂಟದಲ್ಲಿ
ನಾನೀನಾಗಿ ನೀನಾನಾಗಿ ಬಿಟ್ಟು
ಬಂದ ನಡೆದ ದಾರಿ ಹಸಿಬಿಸಿ
ಎಲ್ಲವೂ ಇದ್ದು ಒಮ್ಮೆ ತಿರುಗಿ
ನೋಡಿ ನರಳೋಣ ಇದು ಇರಬಹುದು ಬದುಕು

ಏನೇನೋ ಹುಡುಕಾಟ ತಲ್ಲಣ
ಶೃತಿ ಅಪಶೃತಿಗಳ ನಡುವೆ ಎಲ್ಲರೂ
ಎಲ್ಲವೂ ಸಹಜ ಮತ್ತೆ ಬೇರೆ ಏನೋ
ಹರಿದು ಹರಡಿ ವಿಸ್ತರಿಸಿದ ಹಮ್ಮುಬಿಮ್ಮು
ಯಾವುದೋ ಬೇಟೆ, ಎಲ್ಲಿಯದೋ ನೋಟ
ಓಣಿದಾಟಿ ಬಂದವರೆಲ್ಲಾ ಕುಣಿದು ಹಾಡಿದರು
ಇದು ಇರಬಹುದು ಅಸ್ತಿತ್ವದ ಬದುಕು.

ಎಲ್ಲ ಪಯಣವೂ ಆರಂಭವಾಗಿ
ನನ್ನನ್ನಿನ್ನಲಿ ಅಂತ್ಯಗೊಳ್ಳುವುದು ಅದೇ
ದಾರಿಯಲಿ ಕೌನೆರಳು ಬಸಿಲುಗಳಾಟದಲಿ
ಮುಟ್ಟಿತಟ್ಟಿ ವಟಗುಟ್ಟಿದ ರಾಮಾಯಣ
ಮಹಾಭರತದ ಪಾತ್ರಗಳು ಸಂತೈಸಿ
ಸಮಾಧಾನಿಸಿ ಮತ್ತೆ ಕೆರಳಿಸಿದ ಕನವರಿಕೆ
ಇದು ಇರಬಹುದು ಅಹಮಿಕೆಯ ಬದುಕು.

ನಡೆವದಾರಿಗುಂಟ ಬಂಡಾಯ ಸಾವಿರ
ನೋವುಗಳ ನರಳಾಟ ಸುಮ್ಮನೆ ರಾತ್ರಿಗಳು
ಮಲಗಿದೆ ಮೌನದ ಕತ್ತಲೆಯಲ್ಲಿ ಎಲ್ಲೋ
ಹೊಳೆದ ತಾರೆಗಳು ತಿಂಗಳ ಬೆಳಕಿನ
ನೆರಳಲಿ ಅವನ ಅವಳ ಹುಡುಕಾಟ
ಉರಿವಗ್ನಿಕುಂಡಸುತ್ತ ಕರುಳ ಹಾಡು
ಹುಡಿಮಣ್ಣಿನ ವಾಸನೆಯ ತಾಕಲಾಟ
ಇದು ಇರಬಹುದು ನಿಜದ ಬದುಕು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...