Home / ಕವನ / ಕವಿತೆ / ಬೋರಂಗಿ

ಬೋರಂಗಿ

ದಟ್ಟ ಮೆಳೆಯ ಬದುವಿನಲಿ
ಅಂಡಲೆಯುತ್ತಿದ್ದ ಗೆಳತಿಗೆ
ಎಲ್ಲೋ ಮರದ ತುದಿಯಲಿ
ಪಕ್ಕನೆ ಕೈಸಿಕ್ಕ ಕೆಂಪು ಹಸುರಿನ
ಬೋರಂಗಿ ಸಾಹಸದಿಂದ
ಹಿಡಿದು ತಂದ ಮದರಂಗಿ.

ಅದು ಪುರ್ರನೆ ಹಾರಿ ಮೈಯಲ್ಲಾ
ರೋಮಾಂಚನ ಪುಟ್ಟ ಅಂಗೈತುಂಬ
ಚೆಲುವಿನ ಚಿತ್ತಾರ ಸಾವಿರ ಸೂರ್ಯ
ಹೊಳೆಯುವ ಬೆಳಕು ಕಾಡಿಗೆ ಕಣ್ಣ ತುಂಬ
ಪುಟ್ಟ ಕೈಗಳು ಅಲ್ಲಾವುದ್ದೀನ್ ಅದ್ಭುತ ದೀಪ.

ಮರದ ಮೇಲಿನ ಹಾರಾಟ ಬೋರಾಟ
ಬೆಂಕಿ ಪೊಟ್ಟಣದ ತುಂಬಾ ಚೂರು
ಎಲೆ ಹಸಿರು ಬಳಿ ಹಿಟ್ಟು ಪುಡಿ
ಜೊತೆಯಲ್ಲೇ ಮಲಗಿದ್ದ ಬಣ್ಣದ ಹುಳ
ಹರಡಿದ ಕನಸುಗಳು ತುಂಬ ರಂಗು
ಹೊಸ ಕವಿತೆಗಳು ಹುಟ್ಟಿದ ಮನಸ್ಸಿನ ಗುಂಗು.

ದೇವರ ಮುಂದೆ ಹುಟ್ಟಿದ ಹಾಡು
ಎದೆಯಿಂದ ಎದೆಗೆ ಹರಿದ ಪಾಡು
‘ನಿನ್ನ ನೆನಪಿಗೆ ಕೊಟ್ಟು ಬಿಡು ಇನ್ನೇನು
ಬೇಡುವದಿಲ್ಲ, ಚಿಗಳಿ ಕುಟ್ಟಿಕೊಡಲು
ಮನೆಯಲಿ ಖಾಲಿ ಪಾತ್ರೆಗಳ ಸುಗ್ಗಿ
ಬರೆದು ಕೊಡುವೆ ಮೂವತ್ತರ ತನಕ ಮಗ್ಗಿ’

ಕೊಟ್ಟು ಕೂಡುವ ಇರಾದ ಲೆಕ್ಕ
ಗೆಳತಿ ಇಟ್ಟಳು ಮಟ್ಟಸ
ಹುಡುಕುವಾಗ ಹಬ್ಬಿದ ದಾವಂತ
ಎಣಿಕೆಗೆ ಸಿಗವೇ ಜಾರಿದ ಅಂತ
ಎಲ್ಲೋ ಬಸಿವ ನೆನಪಿಗೆ ಇಲ್ಲಿ
ಕುಸಿಯುವ ಆತ್ಮ ನಿಂದನೆ ಕನ್ನಡಿ
ಇಂದಿಗೂ ಇಡಲಿಲ್ಲ ಖಾಲಿ ಪೊಟ್ಟಣದಲಿ ಬೋರಂಗಿ

ಖಾಲಿ ಮನೆ ರೋಧಿಸುತ್ತಿದೆ
ತಣ್ಣೆಯ ಗಾಳಿ ಮೊಳಕೆ ಒಡೆಯದ
ದಿನದಲಿ ಸೂರ್ಯನ ಪಣತಿ ಹಚ್ಚಿ
ನಿನ್ನ ನಿರೀಕ್ಷೆಯಲಿ ಕಾದಿರುವೆ ಇನ್ನಾದರೂ
ಒಮ್ಮೆ ಬಂದು ಬಿಡು ಈ
ಖಾಲಿ ಎದೆಯ ಪದದೊಳಗೆ
ಬೇಸಿಗೆಯ ಬಿರು ಬಿಸಿಲಿನ ಹಗಲೊಳಗೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...