Home / ಕವನ / ಕವಿತೆ / ಬೋರಂಗಿ

ಬೋರಂಗಿ

ದಟ್ಟ ಮೆಳೆಯ ಬದುವಿನಲಿ
ಅಂಡಲೆಯುತ್ತಿದ್ದ ಗೆಳತಿಗೆ
ಎಲ್ಲೋ ಮರದ ತುದಿಯಲಿ
ಪಕ್ಕನೆ ಕೈಸಿಕ್ಕ ಕೆಂಪು ಹಸುರಿನ
ಬೋರಂಗಿ ಸಾಹಸದಿಂದ
ಹಿಡಿದು ತಂದ ಮದರಂಗಿ.

ಅದು ಪುರ್ರನೆ ಹಾರಿ ಮೈಯಲ್ಲಾ
ರೋಮಾಂಚನ ಪುಟ್ಟ ಅಂಗೈತುಂಬ
ಚೆಲುವಿನ ಚಿತ್ತಾರ ಸಾವಿರ ಸೂರ್ಯ
ಹೊಳೆಯುವ ಬೆಳಕು ಕಾಡಿಗೆ ಕಣ್ಣ ತುಂಬ
ಪುಟ್ಟ ಕೈಗಳು ಅಲ್ಲಾವುದ್ದೀನ್ ಅದ್ಭುತ ದೀಪ.

ಮರದ ಮೇಲಿನ ಹಾರಾಟ ಬೋರಾಟ
ಬೆಂಕಿ ಪೊಟ್ಟಣದ ತುಂಬಾ ಚೂರು
ಎಲೆ ಹಸಿರು ಬಳಿ ಹಿಟ್ಟು ಪುಡಿ
ಜೊತೆಯಲ್ಲೇ ಮಲಗಿದ್ದ ಬಣ್ಣದ ಹುಳ
ಹರಡಿದ ಕನಸುಗಳು ತುಂಬ ರಂಗು
ಹೊಸ ಕವಿತೆಗಳು ಹುಟ್ಟಿದ ಮನಸ್ಸಿನ ಗುಂಗು.

ದೇವರ ಮುಂದೆ ಹುಟ್ಟಿದ ಹಾಡು
ಎದೆಯಿಂದ ಎದೆಗೆ ಹರಿದ ಪಾಡು
‘ನಿನ್ನ ನೆನಪಿಗೆ ಕೊಟ್ಟು ಬಿಡು ಇನ್ನೇನು
ಬೇಡುವದಿಲ್ಲ, ಚಿಗಳಿ ಕುಟ್ಟಿಕೊಡಲು
ಮನೆಯಲಿ ಖಾಲಿ ಪಾತ್ರೆಗಳ ಸುಗ್ಗಿ
ಬರೆದು ಕೊಡುವೆ ಮೂವತ್ತರ ತನಕ ಮಗ್ಗಿ’

ಕೊಟ್ಟು ಕೂಡುವ ಇರಾದ ಲೆಕ್ಕ
ಗೆಳತಿ ಇಟ್ಟಳು ಮಟ್ಟಸ
ಹುಡುಕುವಾಗ ಹಬ್ಬಿದ ದಾವಂತ
ಎಣಿಕೆಗೆ ಸಿಗವೇ ಜಾರಿದ ಅಂತ
ಎಲ್ಲೋ ಬಸಿವ ನೆನಪಿಗೆ ಇಲ್ಲಿ
ಕುಸಿಯುವ ಆತ್ಮ ನಿಂದನೆ ಕನ್ನಡಿ
ಇಂದಿಗೂ ಇಡಲಿಲ್ಲ ಖಾಲಿ ಪೊಟ್ಟಣದಲಿ ಬೋರಂಗಿ

ಖಾಲಿ ಮನೆ ರೋಧಿಸುತ್ತಿದೆ
ತಣ್ಣೆಯ ಗಾಳಿ ಮೊಳಕೆ ಒಡೆಯದ
ದಿನದಲಿ ಸೂರ್ಯನ ಪಣತಿ ಹಚ್ಚಿ
ನಿನ್ನ ನಿರೀಕ್ಷೆಯಲಿ ಕಾದಿರುವೆ ಇನ್ನಾದರೂ
ಒಮ್ಮೆ ಬಂದು ಬಿಡು ಈ
ಖಾಲಿ ಎದೆಯ ಪದದೊಳಗೆ
ಬೇಸಿಗೆಯ ಬಿರು ಬಿಸಿಲಿನ ಹಗಲೊಳಗೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...