ಬೋರಂಗಿ

ದಟ್ಟ ಮೆಳೆಯ ಬದುವಿನಲಿ
ಅಂಡಲೆಯುತ್ತಿದ್ದ ಗೆಳತಿಗೆ
ಎಲ್ಲೋ ಮರದ ತುದಿಯಲಿ
ಪಕ್ಕನೆ ಕೈಸಿಕ್ಕ ಕೆಂಪು ಹಸುರಿನ
ಬೋರಂಗಿ ಸಾಹಸದಿಂದ
ಹಿಡಿದು ತಂದ ಮದರಂಗಿ.

ಅದು ಪುರ್ರನೆ ಹಾರಿ ಮೈಯಲ್ಲಾ
ರೋಮಾಂಚನ ಪುಟ್ಟ ಅಂಗೈತುಂಬ
ಚೆಲುವಿನ ಚಿತ್ತಾರ ಸಾವಿರ ಸೂರ್ಯ
ಹೊಳೆಯುವ ಬೆಳಕು ಕಾಡಿಗೆ ಕಣ್ಣ ತುಂಬ
ಪುಟ್ಟ ಕೈಗಳು ಅಲ್ಲಾವುದ್ದೀನ್ ಅದ್ಭುತ ದೀಪ.

ಮರದ ಮೇಲಿನ ಹಾರಾಟ ಬೋರಾಟ
ಬೆಂಕಿ ಪೊಟ್ಟಣದ ತುಂಬಾ ಚೂರು
ಎಲೆ ಹಸಿರು ಬಳಿ ಹಿಟ್ಟು ಪುಡಿ
ಜೊತೆಯಲ್ಲೇ ಮಲಗಿದ್ದ ಬಣ್ಣದ ಹುಳ
ಹರಡಿದ ಕನಸುಗಳು ತುಂಬ ರಂಗು
ಹೊಸ ಕವಿತೆಗಳು ಹುಟ್ಟಿದ ಮನಸ್ಸಿನ ಗುಂಗು.

ದೇವರ ಮುಂದೆ ಹುಟ್ಟಿದ ಹಾಡು
ಎದೆಯಿಂದ ಎದೆಗೆ ಹರಿದ ಪಾಡು
‘ನಿನ್ನ ನೆನಪಿಗೆ ಕೊಟ್ಟು ಬಿಡು ಇನ್ನೇನು
ಬೇಡುವದಿಲ್ಲ, ಚಿಗಳಿ ಕುಟ್ಟಿಕೊಡಲು
ಮನೆಯಲಿ ಖಾಲಿ ಪಾತ್ರೆಗಳ ಸುಗ್ಗಿ
ಬರೆದು ಕೊಡುವೆ ಮೂವತ್ತರ ತನಕ ಮಗ್ಗಿ’

ಕೊಟ್ಟು ಕೂಡುವ ಇರಾದ ಲೆಕ್ಕ
ಗೆಳತಿ ಇಟ್ಟಳು ಮಟ್ಟಸ
ಹುಡುಕುವಾಗ ಹಬ್ಬಿದ ದಾವಂತ
ಎಣಿಕೆಗೆ ಸಿಗವೇ ಜಾರಿದ ಅಂತ
ಎಲ್ಲೋ ಬಸಿವ ನೆನಪಿಗೆ ಇಲ್ಲಿ
ಕುಸಿಯುವ ಆತ್ಮ ನಿಂದನೆ ಕನ್ನಡಿ
ಇಂದಿಗೂ ಇಡಲಿಲ್ಲ ಖಾಲಿ ಪೊಟ್ಟಣದಲಿ ಬೋರಂಗಿ

ಖಾಲಿ ಮನೆ ರೋಧಿಸುತ್ತಿದೆ
ತಣ್ಣೆಯ ಗಾಳಿ ಮೊಳಕೆ ಒಡೆಯದ
ದಿನದಲಿ ಸೂರ್ಯನ ಪಣತಿ ಹಚ್ಚಿ
ನಿನ್ನ ನಿರೀಕ್ಷೆಯಲಿ ಕಾದಿರುವೆ ಇನ್ನಾದರೂ
ಒಮ್ಮೆ ಬಂದು ಬಿಡು ಈ
ಖಾಲಿ ಎದೆಯ ಪದದೊಳಗೆ
ಬೇಸಿಗೆಯ ಬಿರು ಬಿಸಿಲಿನ ಹಗಲೊಳಗೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆತ್ಮವಿಶ್ವಾಸ ಮತ್ತು ಸ್ವಾಭಿಮಾನದ ಕೊರತೆ, ಕೀಳರಿಮೆ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೬೦

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…