ಯಾ ಇಮಾಮ ಹಸನೈನ ಎನ್ನುತಲಿ

ಯಾ ಇಮಾಮ ಹಸನೈನ ಎನ್ನುತಲಿ
ಭೂಮಿ ಸ್ಥಲದಲಿ ಯುವಜಾತ ನೇಮಗೊಂಡು
ವನವಾಸ ಹೊರಟನು ವಿರಾಟನಲ್ಲಿ ಇದ್ದನು ಜೀತಾ ||ಪ||

ಬಗಿಯನರಿಯದೆ ಶಕುನಿ ಸಾರಿದ
ಆಗ ಪಾಂಡು ಪುಣ್ಯಕದಾತಾ
ವಿಗಡ ಕಾಳಿಕಾ ಬಂದು ಕಾಡುತಿರೆ || ಆ. ಪ.||

ಜಗದೊಳಗೆ ದ್ರೌಪದಿ ಸೋತಾ
ಮುಕ್ತಿಕಾಂಬುವ ಮಾರ್ಗದಿ ರೂಪ ಅಳಿದು ನಿಂತಾ
ಸಕಲ ರಾಜ್ಕ ಸೌಭಾಗ್ಯಪದತ್ವ
ಅಖಿಳವಾಗಿ ಎಲ್ಲನು ಸೋತಾ
ಅಖಿಳ ಧರ್ಮದ ಸಾರವ ಹಿಡಿದು
ವಿರಾಟರಾಜನ ಗರಿಗೆ ಬೆದರಿ ತಾ || ೧ ||

ಧಾತ್ರಿಯೊಳು ಹದಿಮೂರು ಸಂವತ್ಸರ
ವೃತ್ತದಿಂದ ತಿರುಗುತ್ತಿರಲು
ಉತ್ತರಕುಮಾರನ ಜಗಳದಿ ಹೋಗಿ
ಅರ್ಜುನನು ಬಿಡಿಸುತ್ತಿರಲು
ಸತ್ಯ ಪಾಂಡು ಪುತ್ರರಿಗೆ ಗೊತ್ತು
ಶಿಶುನಾಳ ರಿವಾಯತ || ೨ ||

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಐಸುರ ಮೋರುಮ ಎರಡರ ಮಧ್ಯದಿ
Next post ನಿಗೂಢ

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…