ಐಸುರ ಮೋರುಮ ಎರಡರ ಮಧ್ಯದಿ

ಐಸುರ ಮೋರುಮ ಎರಡರ ಮಧ್ಯದಿ
ನಾಶವಾಯಿತು ಲಂಕಾದ್ರಿ ಪುರಾ
ಭಾಸುರ ಕಿರಣವ ನುಂಗಿದ ಹನುಮನು
ಈಸಿ ಅಸುರ ಕುಲ ಸಂಹಾರ       ||ಪ||

ಒಂದು ದಿವಸ ಆನಂದಕಾಲದಲಿ
ಸುಂದರಶ್ರೀ ಮುಖ್ಯಪ್ರಾಣಾ
ಚಂದದಿ ರಾಮನ ಕೇಳಿ ನಡದನು
ನೋಡಬೇಕೆನುತಲಿ ಮದೀನಾ
ಬಂದು ಹೊಕ್ಕು ಹಜರತಲಿ ಗರಡಿಯ
ಹೊಂದಿ ಸಾಮದಂಡಯನೆವನಾ
ಬಂಧುರ ಭುಜಕರ ಅಪ್ಪಿ ತಾನು
ಚಪ್ಪರಸಿ ನಿಂದು ಚಲ್ವರಿದು ಘನಾ      ||೧||

ಬ್ಯಾಟಿ ಆಡಿ ಮೌಲಾ ಆಲಿ ತನ್ನಯ
ತೋಟದ ಬಳಿ ತಾಲೀಮ ನೋಡಿ
ಕೀಟಕ ಮರ್ಕಟ ರೂಪವ ಕಾಣುತ
ತಾಟಾಡ್ಸಿ ಕುಸ್ತಿಯ ಹೂಡಿ
ನೀಟನಿಂತು ನಿಜಭೂಮಿಗೆ ಕೆಡಹಿ
ಬೋಟಸೀಳಲೆನುತಲ್ಲಾಡಿ
ಗೊತ್ತುಹಿಡಿದು ಜಿಗಿದ್ಹಾಕು ಸಮಯದಿ
ರಾಮ ಎಂಬುವುದು ಕೇಳಿ ನುಡಿ            ||೨||

ಭಂಗಪಡಿಸಿ ಆ ಮಂಗನ ಮಾತಿಗೆ
ಕಂಗಾಲಾಗದೆ ಕಾಲ್ಮಲಕಿಕ್ಕಿ
ರಂಗಿನಿಂದ ರಾಜೀವಲೋಚನ
ಜಂಗವರಿದು ಜಗ್ಗುತ ನೂಕಿ
ಸಂಗಬಲಿದು ಸಾರಂಗನ ಖಾಗ್ರದಿ
ಲಂಗಿಸಿ ಹೊಡೆದನು ತಪರಾಕಿ
ತುಂಗ ಶಿಶುನಾಳಧೀಶನ ಕರುಣದಿ
ಸಾರುವೆ ರಾಮಾಯಣದಂಕೀ              ||೩||

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೫೬
Next post ಯಾ ಇಮಾಮ ಹಸನೈನ ಎನ್ನುತಲಿ

ಸಣ್ಣ ಕತೆ

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…