ಐಸುರ ಮೋರುಮ ಎರಡರ ಮಧ್ಯದಿ

ಐಸುರ ಮೋರುಮ ಎರಡರ ಮಧ್ಯದಿ
ನಾಶವಾಯಿತು ಲಂಕಾದ್ರಿ ಪುರಾ
ಭಾಸುರ ಕಿರಣವ ನುಂಗಿದ ಹನುಮನು
ಈಸಿ ಅಸುರ ಕುಲ ಸಂಹಾರ       ||ಪ||

ಒಂದು ದಿವಸ ಆನಂದಕಾಲದಲಿ
ಸುಂದರಶ್ರೀ ಮುಖ್ಯಪ್ರಾಣಾ
ಚಂದದಿ ರಾಮನ ಕೇಳಿ ನಡದನು
ನೋಡಬೇಕೆನುತಲಿ ಮದೀನಾ
ಬಂದು ಹೊಕ್ಕು ಹಜರತಲಿ ಗರಡಿಯ
ಹೊಂದಿ ಸಾಮದಂಡಯನೆವನಾ
ಬಂಧುರ ಭುಜಕರ ಅಪ್ಪಿ ತಾನು
ಚಪ್ಪರಸಿ ನಿಂದು ಚಲ್ವರಿದು ಘನಾ      ||೧||

ಬ್ಯಾಟಿ ಆಡಿ ಮೌಲಾ ಆಲಿ ತನ್ನಯ
ತೋಟದ ಬಳಿ ತಾಲೀಮ ನೋಡಿ
ಕೀಟಕ ಮರ್ಕಟ ರೂಪವ ಕಾಣುತ
ತಾಟಾಡ್ಸಿ ಕುಸ್ತಿಯ ಹೂಡಿ
ನೀಟನಿಂತು ನಿಜಭೂಮಿಗೆ ಕೆಡಹಿ
ಬೋಟಸೀಳಲೆನುತಲ್ಲಾಡಿ
ಗೊತ್ತುಹಿಡಿದು ಜಿಗಿದ್ಹಾಕು ಸಮಯದಿ
ರಾಮ ಎಂಬುವುದು ಕೇಳಿ ನುಡಿ            ||೨||

ಭಂಗಪಡಿಸಿ ಆ ಮಂಗನ ಮಾತಿಗೆ
ಕಂಗಾಲಾಗದೆ ಕಾಲ್ಮಲಕಿಕ್ಕಿ
ರಂಗಿನಿಂದ ರಾಜೀವಲೋಚನ
ಜಂಗವರಿದು ಜಗ್ಗುತ ನೂಕಿ
ಸಂಗಬಲಿದು ಸಾರಂಗನ ಖಾಗ್ರದಿ
ಲಂಗಿಸಿ ಹೊಡೆದನು ತಪರಾಕಿ
ತುಂಗ ಶಿಶುನಾಳಧೀಶನ ಕರುಣದಿ
ಸಾರುವೆ ರಾಮಾಯಣದಂಕೀ              ||೩||

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೫೬
Next post ಯಾ ಇಮಾಮ ಹಸನೈನ ಎನ್ನುತಲಿ

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…