Home / ಕವನ / ಕವಿತೆ / ತೆರೆದ ಪರದೆ

ತೆರೆದ ಪರದೆ

ಅದೊಂದು ಗಿಜಿಗಿಜಿ ಗೂಡು
ಗಲಿಬಿಲಿ, ಗದ್ದಲ, ಅವಸರ
ಧಾವಂತ ಪರಿಪರಿಯ
ಪದಗಳಿಗೂ ಮೀರಿದ ಗಡಿಬಿಡಿ
ಹತ್ತುವವರು, ಇಳಿಯುವವರು
ಮಿಸ್ಸಾದವರು, ಮಿಸ್ಸು ಮಾಡಿಕೊಂಡವರು
ತೆರೆದ ಪರದೆಯ ಮೇಲೆ ಚಿತ್ರದಂತೆ

ಪಾಪಕ್ಕೆ ಹುಟ್ಟಿದ ಪಾಪು
ಪಲ್ಲಟಗೊಂಡ ಬದುಕಿನ
ಪುಟ್ಟಮ್ಮ ಎಷ್ಟೆಲ್ಲಾ ವೈವಿಧ್ಯತೆಗಳು
ಚೆಲ್ಲು ಚೆಲ್ಲು ಗಿರಾಕಿಗಳು
ಕಿಸೆಗೆ ಕತ್ತರಿ ಬೀಳಿಸಿಕೊಂಡವರು
ಕತ್ತರಿಗೆ ಕೈಯಾದವರು
ಎಲ್ಲ ಒಂದೇ ತಟದಲ್ಲಿ
ಕಣಜದಲಿ ಕದ್ದರೆ ಕರಕರೆಯೇ ಇಲ್ಲ
ಅಲ್ಲಲ್ಲಿ ರಕ್ತಪಿಪಾಸುಗಳು
ಮಾಂಸದಂಧೆಯ ಹೈಟೆಕ್ಕು
ರಕ್ತಕೆಂಪಿನ ತುಟಿಗಳು
ಚಿಲ್ಲರೆ ವ್ಯಾಪಾರಿಗಳು
ಅಂಕುಡೊಂಕಿನ ರಸ್ತೆಯಲ್ಲಿ
ತೆವಳುವ ರೋಗಗ್ರಸ್ತ ದೇಹಗಳು
ಮುಗ್ಗರಿಸುವ ಜನ
ಎದ್ದು ನಡೆಯುವ ಜನ
ಹೆದ್ದಾರಿಗೇರದೆ
ಸಣ್ಣ ಕಾಲುದಾರಿಯಲ್ಲೇ
ಸುಖ ಕಾಣುವವರು
ಮತ್ತೆ ಮುಖ್ಯದ್ವಾರಕ್ಕೆ ಕನ್ನ ಇಡುವವರು
ಎಷ್ಟೊಂದು ಬಗೆಯ ಗಡಿಬಿಡಿ
ಬಗೆಬಗೆಯ ಪಾನೀಯ ಅಮಲು
ನಾಟಕದ ನೂರೊಂದು ಮಜಲು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...