ನನ್ನ ಮನದಂಗಳದಿ ಬಂದು
ನಿಲ್ಲುವನಾ ರಾಯ
ಜರಿನೂಲ ಜೋಪಡಿಯ ಕಟ್ಟಬಹುದು.
ಬೆಳ್ಳಿನಿದ್ದೆಗೆ ಕೂಡಿ
ಸ್ವಪ್ನ ಜತನದಿ ಹೂಡಿ
ನಿತ್ಯ ಮಲ್ಲಿಗೆ ಮಾಲೆ ಮೂಡಿಸಬಹುದು.
ಸ್ವಾಭಿಮಾನದ ಗೋಡೆ
ಸುಮ್ಮನೆ ಹುಟ್ಟುವುದು
ಸಹನೆ ಸಾಧನ ಬಾಳ್ಗೆ ಸತ್ಯವಹುದು.
ಹುಲ್ಲುಗಾವಲ ಒಳಗೆ
ಹುಳ ಹುಪ್ಪಡಿಯ ಕೋಟೆ
ಹಂಬಲಿಸಿ ಹಾಕದಿರು ಮರಳಗೋಡೆ
ಬಾಳು ಬದುಕಿದು ಸುಳ್ಳೆ
ನೀರ ಮೇಲಿನ ಗುಳ್ಳೆ
ಭವಸಾಗರದಿ ಬವಣೆ ಭಾರವಿರದೆ!
ಇದ್ದರೂ ಇರಲೇಳು
ಈಸಬೇಕು ಇದ್ದು ಜೈಸಬೇಕು
ಜವರಾಯ ಬಂದೊಡನೆ ಜೈಎನ್ನಬೇಕು.
*****
ಆಂಗ್ಲಭಾಷಾ ಉಪನ್ಯಾಸಕಿ
ಪ್ರಕಟಿತ ಕೃತಿಗಳು: ಏಣಿ ಮತ್ತು ಪದಗಳೊಂದಿಗೆ ನಾನು[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ [ಅಂಕಣಬರಹ ಕೃತಿ]
ಪ್ರಶಸ್ತಿಗಳು: ಏಣಿ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ,
ಸಂಕ್ರಮಣ ಕಾವ್ಯ ಪ್ರಶಸ್ತಿ ೨೦೧೬, ರವಿಕಿರಣ ಸಾಹಿತ್ಯ ಪ್ರತಿಷ್ಠಾನ ಬೆಂಗಳೂರು ಪ್ರಥಮ ಕಥಾ ಬಹುಮಾನ ೨೦೧೮ , ತುಷಾರ ಮಾಸ ಪತ್ರಿಕೆಯ ಕ್ಯಾಲಿಫೋನರ್ಿಯಾ ಕಾವ್ಯಾಂಜಲಿ ತೃತೀಯ ಕಥಾ ಬಹುಮಾನ ೨೦೧೮ ಇತ್ಯಾದಿ ಬಹುಮಾನ ಬಂದಿದೆ.ಮೊಗವೀರ ಮಾಸಪತ್ರಿಕೆ ಮುಂಬಯಿ ೨೦೧೭ರ ಸಮಾಧಾನಕರ ಕಥಾ ಬಹುಮಾನ, ಕರಾವಳಿ ಮುಂಜಾವು ದಿನಪತ್ರಿಕೆಯ ದೀಪಾವಳಿ ಕಥಾ ಸ್ಪಧರ್ೆಗಳಲ್ಲಿ ಬಹುಮಾನ ಇತ್ಯಾದಿ ಬಂದಿರುತ್ತವೆ.