ಬಾಳಹಾಡು

ನನ್ನ ಮನದಂಗಳದಿ ಬಂದು
ನಿಲ್ಲುವನಾ ರಾಯ
ಜರಿನೂಲ ಜೋಪಡಿಯ ಕಟ್ಟಬಹುದು.

ಬೆಳ್ಳಿನಿದ್ದೆಗೆ ಕೂಡಿ
ಸ್ವಪ್ನ ಜತನದಿ ಹೂಡಿ
ನಿತ್ಯ ಮಲ್ಲಿಗೆ ಮಾಲೆ ಮೂಡಿಸಬಹುದು.

ಸ್ವಾಭಿಮಾನದ ಗೋಡೆ
ಸುಮ್ಮನೆ ಹುಟ್ಟುವುದು
ಸಹನೆ ಸಾಧನ ಬಾಳ್ಗೆ ಸತ್ಯವಹುದು.

ಹುಲ್ಲುಗಾವಲ ಒಳಗೆ
ಹುಳ ಹುಪ್ಪಡಿಯ ಕೋಟೆ
ಹಂಬಲಿಸಿ ಹಾಕದಿರು ಮರಳಗೋಡೆ

ಬಾಳು ಬದುಕಿದು ಸುಳ್ಳೆ
ನೀರ ಮೇಲಿನ ಗುಳ್ಳೆ
ಭವಸಾಗರದಿ ಬವಣೆ ಭಾರವಿರದೆ!

ಇದ್ದರೂ ಇರಲೇಳು
ಈಸಬೇಕು ಇದ್ದು ಜೈಸಬೇಕು
ಜವರಾಯ ಬಂದೊಡನೆ ಜೈ‌ಎನ್ನಬೇಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೀತಿಸುವ
Next post ಪಂಡಿತ

ಸಣ್ಣ ಕತೆ

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

cheap jordans|wholesale air max|wholesale jordans|wholesale jewelry|wholesale jerseys