ಬರೆಯದ ಕವಿತೆಗಳು

ಈ ಬಾರಿಯ ತಿರುವುಗಳಾ ಬಯಲಿನ ಹರಹುಗ-
ಳೀ ಹುಡುಗಿಯ ಹುಬ್ಬುಗಳಾ ಸಂಜೆಯ ಮಬ್ಬುಗ-
ಳಷ್ಟೆತ್ತರ ಬೆಟ್ವಗಳೀ ತೀರದ ತಗ್ಗುಗ-
ಳಿನ್ನಿಲ್ಲ ಸಂಜೆಗಳು

ಮತ್ತೀ ಬೆಳಕಿನ ಸುತ್ತಲ ಬೆತ್ತಲು
ಆ ಕಣಿವೆಯ ಕೆಳಗಿನ ಕತ್ತಲು
ಯಾವುದೊ ಕೋಟೆಯ ಸುತ್ತಲು
ಇನ್ನಾವುದೊ ಪ್ರತಿಮೆಯ ಕೆತ್ತಲು

ಯಾರಿಗು ಕೇಳದ ಧ್ವನಿಗಳ
ಯಾರಿಗು ಹೇಳದ ಭಯಗಳ
ಪ್ರೀತಿಗಳ-ಯಾರಿಗು ತಲುಪದ
ಮಾತಿಗು ಬರದ

ನನಗನಿಸಿತ್ತು
ಈ ಕ್ಷಣಗಳ ಹಿಡಿಯುವೆ
ನುಡಿಯೊಳಗಾರೂ ನುಡಿಯದ ತರ
ಪಡೆಯುವೆ-ಆದರೆ

ಓ ದೇವರೆ!
ಈ ಮಗ್ಗುಲ ಮೈಬಿಸಿ
ನೆಲ ಜಲ ಉಸಿರಾಟದ ಹೋರಾಟದ ಧಗೆ
ಬದುಕಿನ ಹಸಿ ಹಸಿ

ಕೇವಲ ಖುಷಿ
ಹಿಡಿಯಲಿ ಹೇಗೆ ?
ಸಂತಯಲಿದ್ದೇ ಖುಷಿಯಾಗುವ ಬಗೆ
ತಿಳಿಯಲಿ ಹೇಗೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪತ್ರ ೩
Next post ಗೌರಿಯಾಕಳು ಮತ್ತು ನಾನು

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…