ಗೌರಿಯಾಕಳು ಮತ್ತು ನಾನು

ಕರೆಮೊಗೆಯ ಹಿಡಿದು ಹೊರಟೆ
ಕೈಗೊಂದಿಷ್ಟು ಗೌರಿಯಾಕಳ
ಹಾಲಿನ ತುಪ್ಪ ಸವರಿ
ಕರು ಮೆಲ್ಲುತ್ತಿತ್ತು ಹುಲ್ಲು
ಅಂಬಾ ಎನ್ನುತ್ತ ದಾಂಬು ಎಳೆಯತೊಡಗಿತ್ತು
ವಾಸನೆ ಗೃಹಿಸಿ,
ದುಣಕಲು ತುಂಬಿದ ಹುಲ್ಲು ರುಚಿಯಿಲ್ಲ
ತೊಳಕಲು ಅಕ್ಕಚ್ಚು ಮೆಚ್ಚಿಲ್ಲ.
ಅಚ್ಚು ಮೆಚ್ಚುಗಳೆಲ್ಲ ಹಡದಬ್ಬೆ ಮೊಲೆಹಾಲೇ
ತೆರೆದ ಕೆಚ್ಚಲು ಕಚ್ಚಿ ಘಾಸುಕೊಟ್ಟು
ಚೀಪುಲದು ಕಳಸದೊಳಗಣ ಅಮೃತ.
ನನಗೀಗ ಹುರುಪು
ಸೆರೆ ಬಿಟ್ಟಿತು ಕೆಚ್ಚಲು ಕರುವಿನ
ಬಾಯಿ ಘಾಸಿಗೆ,
ಎಳೆಯತೊಡಗಿದೆ ದಾಂಬು
ಕೈಹಾಕಿ ಹಿಂಡಿ ಹಾಲು ಕರೆಯಲು
ಗಿಂಡಿ ತುಂಬಬೇಕು.

ಗೌರಿಯೀಗ ತಾಯಿ-ಬೆರಕಿಯಾಗಲೇ ಬೇಕು
ಆದರೂ ಮಣ್ಣು ಮುಕ್ಕಿಸಲಾಗದು ಅದಕೆ
ನರಜಾತಿಯ ಒಡತಿ ನಾನು
ಕಪಟತೆಯ ಕಲಿಸಬೇಕಿಲ್ಲ. ಕಣಕಣದ ಗುಣ
ಕೈ ಸ್ಪರ್ಶಕ್ಕೆ ಸಿಕ್ಕಂತೆ ಆಳಕ್ಕೆ
ಎಳೆದುಕೊಳ್ಳುವ ಅವಳ ತಂತ್ರಕ್ಕೆ
ಪ್ರತಿತಂತ್ರ ಹೂಡುತ್ತ ಮತ್ತೆ ಬಿಚ್ಚಿದೆ ಕರು
ಕೆಚ್ಚಲಿಗೆ, ಸುರ್ರನೆ ಸೆರೆ ಬಿಡುವ ಗಂಗೆ
ಮತ್ತೆ ಮೇಲಕ್ಕೆ ಎಳೆದುಕೊಳ್ಳುವ ಭರದಲ್ಲಿ
ಸಮರಕ್ಕೆ ನಿಂತಂತೆ ಮತ್ತು ಕರು ಎಳೆದು ಕಟ್ಟುವ
ನಾನು, ತಡೆದು ತಡೆದು
ಸೆರೆಯುಬ್ಬಿ ಸೊರಸೊರನೆ ಸುರಿಯತೊಡಗಿತು ಹಾಲು
ಭರಭರನೇ ಗಿಂಡಿತುಂಬತೊಡಗಿದೆ ನಾನು.
ಗತ್ತಿನಿಂದ ದಕ್ಕಿಸಿಕೊಂಡು,
ನನ್ನದಲ್ಲದ ಎಲ್ಲವೂ ನನ್ನದೇ
ಅದಕ್ಕೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬರೆಯದ ಕವಿತೆಗಳು
Next post ಶಬರಿ – ೧೬

ಸಣ್ಣ ಕತೆ

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…