Home / ಕವನ / ಕವಿತೆ / ಗೌರಿಯಾಕಳು ಮತ್ತು ನಾನು

ಗೌರಿಯಾಕಳು ಮತ್ತು ನಾನು

ಕರೆಮೊಗೆಯ ಹಿಡಿದು ಹೊರಟೆ
ಕೈಗೊಂದಿಷ್ಟು ಗೌರಿಯಾಕಳ
ಹಾಲಿನ ತುಪ್ಪ ಸವರಿ
ಕರು ಮೆಲ್ಲುತ್ತಿತ್ತು ಹುಲ್ಲು
ಅಂಬಾ ಎನ್ನುತ್ತ ದಾಂಬು ಎಳೆಯತೊಡಗಿತ್ತು
ವಾಸನೆ ಗೃಹಿಸಿ,
ದುಣಕಲು ತುಂಬಿದ ಹುಲ್ಲು ರುಚಿಯಿಲ್ಲ
ತೊಳಕಲು ಅಕ್ಕಚ್ಚು ಮೆಚ್ಚಿಲ್ಲ.
ಅಚ್ಚು ಮೆಚ್ಚುಗಳೆಲ್ಲ ಹಡದಬ್ಬೆ ಮೊಲೆಹಾಲೇ
ತೆರೆದ ಕೆಚ್ಚಲು ಕಚ್ಚಿ ಘಾಸುಕೊಟ್ಟು
ಚೀಪುಲದು ಕಳಸದೊಳಗಣ ಅಮೃತ.
ನನಗೀಗ ಹುರುಪು
ಸೆರೆ ಬಿಟ್ಟಿತು ಕೆಚ್ಚಲು ಕರುವಿನ
ಬಾಯಿ ಘಾಸಿಗೆ,
ಎಳೆಯತೊಡಗಿದೆ ದಾಂಬು
ಕೈಹಾಕಿ ಹಿಂಡಿ ಹಾಲು ಕರೆಯಲು
ಗಿಂಡಿ ತುಂಬಬೇಕು.

ಗೌರಿಯೀಗ ತಾಯಿ-ಬೆರಕಿಯಾಗಲೇ ಬೇಕು
ಆದರೂ ಮಣ್ಣು ಮುಕ್ಕಿಸಲಾಗದು ಅದಕೆ
ನರಜಾತಿಯ ಒಡತಿ ನಾನು
ಕಪಟತೆಯ ಕಲಿಸಬೇಕಿಲ್ಲ. ಕಣಕಣದ ಗುಣ
ಕೈ ಸ್ಪರ್ಶಕ್ಕೆ ಸಿಕ್ಕಂತೆ ಆಳಕ್ಕೆ
ಎಳೆದುಕೊಳ್ಳುವ ಅವಳ ತಂತ್ರಕ್ಕೆ
ಪ್ರತಿತಂತ್ರ ಹೂಡುತ್ತ ಮತ್ತೆ ಬಿಚ್ಚಿದೆ ಕರು
ಕೆಚ್ಚಲಿಗೆ, ಸುರ್ರನೆ ಸೆರೆ ಬಿಡುವ ಗಂಗೆ
ಮತ್ತೆ ಮೇಲಕ್ಕೆ ಎಳೆದುಕೊಳ್ಳುವ ಭರದಲ್ಲಿ
ಸಮರಕ್ಕೆ ನಿಂತಂತೆ ಮತ್ತು ಕರು ಎಳೆದು ಕಟ್ಟುವ
ನಾನು, ತಡೆದು ತಡೆದು
ಸೆರೆಯುಬ್ಬಿ ಸೊರಸೊರನೆ ಸುರಿಯತೊಡಗಿತು ಹಾಲು
ಭರಭರನೇ ಗಿಂಡಿತುಂಬತೊಡಗಿದೆ ನಾನು.
ಗತ್ತಿನಿಂದ ದಕ್ಕಿಸಿಕೊಂಡು,
ನನ್ನದಲ್ಲದ ಎಲ್ಲವೂ ನನ್ನದೇ
ಅದಕ್ಕೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...