Home / ಕವನ / ಕವಿತೆ / ಗೌರಿಯಾಕಳು ಮತ್ತು ನಾನು

ಗೌರಿಯಾಕಳು ಮತ್ತು ನಾನು

ಕರೆಮೊಗೆಯ ಹಿಡಿದು ಹೊರಟೆ
ಕೈಗೊಂದಿಷ್ಟು ಗೌರಿಯಾಕಳ
ಹಾಲಿನ ತುಪ್ಪ ಸವರಿ
ಕರು ಮೆಲ್ಲುತ್ತಿತ್ತು ಹುಲ್ಲು
ಅಂಬಾ ಎನ್ನುತ್ತ ದಾಂಬು ಎಳೆಯತೊಡಗಿತ್ತು
ವಾಸನೆ ಗೃಹಿಸಿ,
ದುಣಕಲು ತುಂಬಿದ ಹುಲ್ಲು ರುಚಿಯಿಲ್ಲ
ತೊಳಕಲು ಅಕ್ಕಚ್ಚು ಮೆಚ್ಚಿಲ್ಲ.
ಅಚ್ಚು ಮೆಚ್ಚುಗಳೆಲ್ಲ ಹಡದಬ್ಬೆ ಮೊಲೆಹಾಲೇ
ತೆರೆದ ಕೆಚ್ಚಲು ಕಚ್ಚಿ ಘಾಸುಕೊಟ್ಟು
ಚೀಪುಲದು ಕಳಸದೊಳಗಣ ಅಮೃತ.
ನನಗೀಗ ಹುರುಪು
ಸೆರೆ ಬಿಟ್ಟಿತು ಕೆಚ್ಚಲು ಕರುವಿನ
ಬಾಯಿ ಘಾಸಿಗೆ,
ಎಳೆಯತೊಡಗಿದೆ ದಾಂಬು
ಕೈಹಾಕಿ ಹಿಂಡಿ ಹಾಲು ಕರೆಯಲು
ಗಿಂಡಿ ತುಂಬಬೇಕು.

ಗೌರಿಯೀಗ ತಾಯಿ-ಬೆರಕಿಯಾಗಲೇ ಬೇಕು
ಆದರೂ ಮಣ್ಣು ಮುಕ್ಕಿಸಲಾಗದು ಅದಕೆ
ನರಜಾತಿಯ ಒಡತಿ ನಾನು
ಕಪಟತೆಯ ಕಲಿಸಬೇಕಿಲ್ಲ. ಕಣಕಣದ ಗುಣ
ಕೈ ಸ್ಪರ್ಶಕ್ಕೆ ಸಿಕ್ಕಂತೆ ಆಳಕ್ಕೆ
ಎಳೆದುಕೊಳ್ಳುವ ಅವಳ ತಂತ್ರಕ್ಕೆ
ಪ್ರತಿತಂತ್ರ ಹೂಡುತ್ತ ಮತ್ತೆ ಬಿಚ್ಚಿದೆ ಕರು
ಕೆಚ್ಚಲಿಗೆ, ಸುರ್ರನೆ ಸೆರೆ ಬಿಡುವ ಗಂಗೆ
ಮತ್ತೆ ಮೇಲಕ್ಕೆ ಎಳೆದುಕೊಳ್ಳುವ ಭರದಲ್ಲಿ
ಸಮರಕ್ಕೆ ನಿಂತಂತೆ ಮತ್ತು ಕರು ಎಳೆದು ಕಟ್ಟುವ
ನಾನು, ತಡೆದು ತಡೆದು
ಸೆರೆಯುಬ್ಬಿ ಸೊರಸೊರನೆ ಸುರಿಯತೊಡಗಿತು ಹಾಲು
ಭರಭರನೇ ಗಿಂಡಿತುಂಬತೊಡಗಿದೆ ನಾನು.
ಗತ್ತಿನಿಂದ ದಕ್ಕಿಸಿಕೊಂಡು,
ನನ್ನದಲ್ಲದ ಎಲ್ಲವೂ ನನ್ನದೇ
ಅದಕ್ಕೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...