ಕವಿತೆ

ಎಣ್ಣೆಹಚ್ಚಿ ತಿದ್ದಿತೀಡಿ
ಬೆಚ್ಚಗಿನ ಹಂಡೆಯಲಿ
ಹದಕಾಯಿಸಿ ಕಾಲು ನೀಡಿ
ಎರೆದು ಹಾಕಿದ ಕಂದ
ಸಾಂಬ್ರಾಣಿಯ ಸೂಸು ಹೋಗೆ
ಕಣ್ಣು ರೆಪ್ಪೆಯ ಮುಚ್ಚಿ
ತೆಪ್ಪಗೆ ಮಲಗಿರುವ ತೊಟ್ಟಿಲಲಿ
ಹಾಲು ಹೀರಿದ ಎದೆಯಲಿ
ಚಿಲ್ಲನೆ ಮತ್ತೆ ಚಿಮ್ಮುತ್ತಿವೆ
ಎದೆ ಹಾಲ ಹನಿಗಳು.

ನಿದ್ದೆ ಕಣ್ಣಲ್ಲಿ ಮುಗ್ಧ
ನಗುವಿಗೆ ತುಟಿ ಅರಳಿ
ಅರ್ಥ ಸುಳಿದಾಡಿ ರಸದಲಿ
ತೇಲಿ ಹೊರಳಾಡಿವೆ ವಾಸ್ತವ
ಕನಸುಗಳು ಜಗಜಗಿಸಿ
ಹೊಳೆವ ಶಬ್ದಗಳು
ಚಿನ್ನದ ಸರಪಳಿಯ
ಮಣಿ ಮಾಲೆಯಾಗಿ
ಪೋಣಿಸಿಕೊಂಡ ಪದ್ಯ
ದಂಗಾಗಿ ನಿಂತ ಕ್ಷಣಗಳು.

ಇಳಿಇಳಿದು ಹರಡಿದ ಪ್ರೇಮ
ದಾಂಪತ್ಯ ತೊನೆತೊನೆ ತೂಗಿ
ಚೈತ್ರ ಚಿಗುರಿ ಗಿಳಿಕೋಗಿಲೆಗಳು
ಉಲಿದವು ಜೇಕುವ ತೊಟ್ಟಿಲಲಿ
ಗಾಲುಗಂದನ ಗೆಜ್ಜೆ ಸಪ್ಪಳದಲಿ
ಎದೆ ಹಾಲು ಪರಿಮಳ ಸೂಸಿ
ಹರಿವೆ ಬೆಳ್ಳಕ್ಕಿ ಸಾಲು ಸಾಲು
ಎಳೆ ಬೆರಳುಗಳ ಸೋಕಿ
ಎದೆ ತುಂಬ ಬಿರಿಯುವ ಕವಿತೆಗಳ ಕಂಪನಗಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹರೆಯದಲ್ಲಿ ವಸಂತಾಗಮನದ ಲಕ್ಷಣಗಳು ಮತ್ತು ಸಮಸ್ಯೆಗಳು
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೫೭

ಸಣ್ಣ ಕತೆ

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…