ಅರ್ಘ್ಯ

ಆತ್ಮ ಸಾಕ್ಷಿಯ ನೋಟ ಪ್ರತಿಕೂಟ
ಇಂದ್ರೀಯದೊಳಗೆ ನರನರಗಳ
ಗುಂಟ ಹರಿದ ಆನಂದದ ಜನ್ಮ
ಪ್ರಭಾಪೂರಿತ ಚಲನೆಯ ಗತಿ
ಚಿನ್ನದಂಚಿನ ಮುಗಿಲು ಹೂವು
ನದಿ ಹಾಡಿ ಜುಳು ಜುಳು ಹೊಳೆ
ಹೊಳೆದು ಎದೆಗೆ ಅಮರಿದ ಮಿಂಚು
ಅಮರತ್ವದ ಅನುಭವ ವೈಭವ.

ಎಂತಹ ಆಸೆ ಪಯಣಿಸಲು ನಿನಗೆ
ನನಗೆ ಭವ ಬಂಧನ ಇದ್ದು ಇಲ್ಲದ್ದಾಂಗ
ಬಯಲು ಹಾದಿಗುಂಟ ಹಸಿರು ಹಾಸು
ಹನಿ ಹನಿ ಇಬ್ಬನಿಗಳ ತಂಪಿನ ಹೊತ್ತು
ಅಲ್ಲಿಂದಿಲ್ಲಿಗೆ ಕಾಣುವುದು ದಾಟಿ ಬಂದ ದಾರಿ
ನಡೆದ ಮೋಹ ಹೆಜ್ಜೆಗಳು ಮೂಡಿ
ಮಣ್ಣಗುರುತು ಬಯಕೆ ಚಿಮ್ಮಿ
ಅನಂತತೆಯ ನೆರಳಿಗೆ ಯಾರೂ ರುಜುಹಾಕವುದಿಲ್ಲ.

ದಿವ್ಯ ದರ್ಶನ ದಿವ್ಯ ಭಾವಗಳೊಡಗೂಡಿ .
ಹಕ್ಕಿ ಹಸಿರು ಮಾಡುಗೂಡು
ಮಣಿದ ತಣಿದ ಒಪ್ಪಿಸಿಕೊಂಡ ಒಲವು
ಸಾಕ್ಷಾತ್ಕಾರದಲಿ ಅರಳಿದ ಮೋಡ ಸಿಂಚನ
ಮಳೆ ಹೊಳೆ ಕಳೆ ಕರೆದು ಕರೆದು
ತೊಡವಿಕೆಯಲಿ ಬಾಲ್ಯ ಕಳೆದು ಹೊಳೆದು
ಬೆಳೆದ ಪುನರುಕ್ತಿ ನಡೆದ ನಡುಗೆ
ಓಂ ಭುರ್ಬುಸ್ವಃಹ ಮಿಳಿತಗೊಂಡ ಅರ್ಘ್ಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಪಾಯದ ಕರೆ ಗಂಟೆ ಹೊಡೆಯುವ ಸೇಪ್ಟಿಸೂಟ್
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೫೩

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

cheap jordans|wholesale air max|wholesale jordans|wholesale jewelry|wholesale jerseys