ಅರ್ಘ್ಯ

ಆತ್ಮ ಸಾಕ್ಷಿಯ ನೋಟ ಪ್ರತಿಕೂಟ
ಇಂದ್ರೀಯದೊಳಗೆ ನರನರಗಳ
ಗುಂಟ ಹರಿದ ಆನಂದದ ಜನ್ಮ
ಪ್ರಭಾಪೂರಿತ ಚಲನೆಯ ಗತಿ
ಚಿನ್ನದಂಚಿನ ಮುಗಿಲು ಹೂವು
ನದಿ ಹಾಡಿ ಜುಳು ಜುಳು ಹೊಳೆ
ಹೊಳೆದು ಎದೆಗೆ ಅಮರಿದ ಮಿಂಚು
ಅಮರತ್ವದ ಅನುಭವ ವೈಭವ.

ಎಂತಹ ಆಸೆ ಪಯಣಿಸಲು ನಿನಗೆ
ನನಗೆ ಭವ ಬಂಧನ ಇದ್ದು ಇಲ್ಲದ್ದಾಂಗ
ಬಯಲು ಹಾದಿಗುಂಟ ಹಸಿರು ಹಾಸು
ಹನಿ ಹನಿ ಇಬ್ಬನಿಗಳ ತಂಪಿನ ಹೊತ್ತು
ಅಲ್ಲಿಂದಿಲ್ಲಿಗೆ ಕಾಣುವುದು ದಾಟಿ ಬಂದ ದಾರಿ
ನಡೆದ ಮೋಹ ಹೆಜ್ಜೆಗಳು ಮೂಡಿ
ಮಣ್ಣಗುರುತು ಬಯಕೆ ಚಿಮ್ಮಿ
ಅನಂತತೆಯ ನೆರಳಿಗೆ ಯಾರೂ ರುಜುಹಾಕವುದಿಲ್ಲ.

ದಿವ್ಯ ದರ್ಶನ ದಿವ್ಯ ಭಾವಗಳೊಡಗೂಡಿ .
ಹಕ್ಕಿ ಹಸಿರು ಮಾಡುಗೂಡು
ಮಣಿದ ತಣಿದ ಒಪ್ಪಿಸಿಕೊಂಡ ಒಲವು
ಸಾಕ್ಷಾತ್ಕಾರದಲಿ ಅರಳಿದ ಮೋಡ ಸಿಂಚನ
ಮಳೆ ಹೊಳೆ ಕಳೆ ಕರೆದು ಕರೆದು
ತೊಡವಿಕೆಯಲಿ ಬಾಲ್ಯ ಕಳೆದು ಹೊಳೆದು
ಬೆಳೆದ ಪುನರುಕ್ತಿ ನಡೆದ ನಡುಗೆ
ಓಂ ಭುರ್ಬುಸ್ವಃಹ ಮಿಳಿತಗೊಂಡ ಅರ್ಘ್ಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಪಾಯದ ಕರೆ ಗಂಟೆ ಹೊಡೆಯುವ ಸೇಪ್ಟಿಸೂಟ್
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೫೩

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…